Don't Miss!
- News Rain Alert: ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ: ಈ ಜಿಲ್ಲೆಗಳಲ್ಲಿ ಭಾರಿ ಬಿಸಿಲು
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕಿರಿಕ್' ಹುಡುಗಿ ಸಂಯುಕ್ತ ಮೂರನೇ ಸಿನಿಮಾದಲ್ಲಿ ಮೂಕಿಯಂತೆ!
'ಕಿರಿಕ್ ಪಾರ್ಟಿ' ಚಿತ್ರದ ಬೆಡಗಿ ಸಂಯುಕ್ತ ಹೆಗಡೆ ತಮ್ಮ ಚಿತ್ರ 150 ದಿನಗಳನ್ನು ಪೂರೈಸಿದ ಯಶಸ್ಸಿನ ಖುಷಿಯಲ್ಲಿ ತೇಲುತ್ತಿದ್ದಾರೆ. ಮೊನ್ನೆಯಷ್ಟೇ ಈ ಚಿತ್ರದ ಅಭಿನಯಕ್ಕಾಗಿ ಸಂಯುಕ್ತ ಹೆಗಡೆಗೆ 64ನೇ ದಕ್ಷಿಣ ಭಾರತ ಫಿಲ್ಮ್ ಫೇರ್ ನ ಅತ್ಯುತ್ತಮ ಫೋಷಕ ನಟಿ ಪ್ರಶಸ್ತಿ ಲಭಿಸಿದೆ.[ಕ್ಯಾತೆ ತೆಗೆದು ವಿವಾದ ಮೈಮೇಲೆ ಎಳ್ಕೊಂಡ 'ಕಿರಿಕ್' ಹುಡುಗಿ ಸಂಯುಕ್ತ]
ಅಂದಹಾಗೆ ಸಂಯುಕ್ತ ಹೆಗಡೆ ಬಗ್ಗೆ ಈಗ ಲೇಟೆಸ್ಟ್ ಸುದ್ದಿಯೊಂದು ಹೊರಬಿದ್ದಿದ್ದು, ಕಿರಿಕ್ ಹುಡುಗಿ ಮೂರನೇ ಪ್ರಾಜೆಕ್ಟ್ ಗೆ ಸಿದ್ದರಾಗುತ್ತಿದ್ದಾರಂತೆ. ಆ ಸಿನಿಮಾ ಯಾವುದು, ನಿರ್ದೇಶಕರು ಯಾರು ಎಂಬಿತ್ಯಾದಿ ಮಾಹಿತಿಗೆ ಮುಂದೆ ಓದಿ..
ಮೂರನೇ ಚಿತ್ರಕ್ಕೆ ಸಜ್ಜಾದ ಸಂಯುಕ್ತ
ಸಂಯುಕ್ತ ಹೆಗಡೆ ಈಗ ಮೂರನೇ ಪ್ರಾಜೆಕ್ಟ್ ಗೆ ಸಿದ್ದರಾಗಿದ್ದು, ಆ ಚಿತ್ರದಲ್ಲಿ ಮೂಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಯಾವುದು ಆ ಚಿತ್ರ?
ಪಟ ಪಟ ಅಂತ ಸ್ಪೀಡ್ ಆಗಿ ಮಾತನಾಡೋ ಕಿರಿಕ್ ಹುಡುಗಿ ಮೂಕಿ ಆಗಿ ಅಭಿನಯಿಸಲಿರುವ ಮೂರನೇ ಚಿತ್ರಕ್ಕೆ 'ಒಮ್ಮೆ ನಿಶಬ್ಧ ಒಮ್ಮೆ ಯುದ್ಧ' ಎಂದು ಹೆಸರು ಸೂಚಿಸಲಾಗಿದೆಯಂತೆ.
ನಿರ್ದೇಶಕ ಯಾರು?
ಈ ಹಿಂದೆ ಕನ್ನಡದಲ್ಲಿ 'ನಿತ್ಯ ಜೊತೆ ಸತ್ಯ' ಎಂಬ ಚಿತ್ರ ನಿರ್ದೇಶನ ಮಾಡಿದ್ದ ಶ್ರೀನಾಗ್ ಎಂಬುವವರು ಸಂಯುಕ್ತ ಹೆಗಡೆ ಮೂರನೇ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
'ಕೆಂಡಸಂಪಿಗೆ' ವಿಕ್ಕಿ ಜೊತೆ ಸಂಯುಕ್ತ ಬ್ಯುಸಿ
ಸದ್ಯದಲ್ಲಿ ಸಂಯುಕ್ತ ಹೆಗಡೆ 'ಕೆಂಡಸಂಪಿಗೆ' ವಿಕ್ಕಿ ಅಭಿನಯದ 'ಕಾಲೇಜ್ ಕುಮಾರ್' ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಇದು ಅವರ ಎರಡನೇ ಚಿತ್ರ.['ಕಾಲೇಜ್ ಕುಮಾರ್'ನಿಗೆ ಕ್ಲಾಪ್ ಮಾಡಿದ ಕಿಚ್ಚ ಸುದೀಪ್]
ಆಗಸ್ಟ್ ನಲ್ಲಿ ಸಿನಿಮಾ ಮುಹೂರ್ತ
ಸಂಯುಕ್ತ ಹೆಗಡೆ ಮೂಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಅವರ ಮೂರನೇ ಚಿತ್ರ ಆಗಸ್ಟ್ ನಲ್ಲಿ ಮುಹೂರ್ತ ಕಾರ್ಯಕ್ರಮ ಇಟ್ಟಿಕೊಂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಚಿತ್ರದ ಬಗ್ಗೆ ಚಿತ್ರತಂಡವಾಗಲಿ ಅಥವಾ ಸಂಯುಕ್ತ ಹೆಗಡೆ ಆಗಲಿ ಯಾವುದೇ ಸುಳಿವು ನೀಡಿಲ್ಲ. ಈ ಬಗ್ಗೆ ನಿಶಬ್ಧವಾಗಿರುವ ಸಂಯುಕ್ತ ಹೆಗಡೆ ರವರೇ ಕ್ಲಾರಿಟಿ ನೀಡಬೇಕು.