Don't Miss!
- News Smartphone: ಮಾರುಕಟ್ಟೆಯಲ್ಲಿ ಸದ್ದು ಮಾಡಲು ಬರುತ್ತಿದೆ ಸ್ಯಾಮ್ಸಂಗ್ M35 5G
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿನಿಮಾ ಸೆಟ್ನಲ್ಲಿ 'ತಮಾಷೆ ಹೋಗಿ ಅಮಾಸೆಯಾಯ್ತು'
ಚಿತ್ರದ ಪ್ರಚಾರಕ್ಕಾಗಿ ಬಾಲಿವುಡ್ ಮಂದಿ ಏನೇನೆಲ್ಲ ಸರ್ಕಸ್ ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇದರ ಜತೆಗೆ ಚಿತ್ರೀಕರಣ ಸಂದರ್ಭದಲ್ಲಿ ನಡೆದ ಅವಘಡಗಳು, ತುಂಟಾಟಗಳು ಕೆಲವೊಮ್ಮೆ ಮಾರಣಾಂತಿಕವಾಗಿ ಪರಿಣಮಿಸಿರುವುದನ್ನು ಕಾಣಬಹುದು.
ಇಂಥದ್ದೇ ಒಂದು ಇಕ್ಕಟ್ಟಿನಲ್ಲಿ ನಟ ಶಕ್ತಿ ಕಪೂರ್ ಮಗಳು ಶ್ರದ್ಧಾ ಕಪೂರ್ ಸಿಲುಕಿದ್ದಾಳೆ. ಏಕ್ ವಿಲನ್ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಮಾಡಿದ್ದ ತುಂಟಾಟ ಈಗ ಸ್ಟಂಟ್ ಮ್ಯಾನ್ ಪ್ರಾಣಕ್ಕೆ ಸಂಕಟವಾಗಿದೆ. ಚಿತ್ರಗಳನ್ನು ನೋಡಿದರೆ ನಿಜಕ್ಕೂ ಶ್ರದ್ಧಾಳಂತೆ ಶಾಕ್ ಗೆ ಒಳಗಾಗಬೇಕಾಗುತ್ತದೆ. ಆದರೆ, ಇದೆಲ್ಲವೂ ಎಂಟಿವಿ ಇಂಡಿಯಾ ಮಾಡಿದ ಬಕ್ರಾ ಕಾರ್ಯಕ್ರಮದ ದೃಶ್ಯ ಎಂಬುದು ತಿಳಿಯಲು ಚಿತ್ರತಂಡಕ್ಕೆ ಸುಮಾರು ಹೊತ್ತು ಹಿಡಿಯಿತಂತೆ.
ಸೆಲೆಬ್ರಿಟಿಗಳನ್ನು ಬಕ್ರಾ ಮಾಡುವಲ್ಲಿ ಎತ್ತಿಕ ಕೈ ಎನಿಸಿರುವ ಎಂಟಿವಿ ಇಂಡಿಯಾ ಚಾನೆಲ್ ಎಕ್ ವಿಲನ್ ಸೆಟ್ ನಲ್ಲಿ ಶ್ರದ್ಧಾ ಕಪೂರ್ ಜತೆ ಆಡಿದ ತುಂಟಾಟ ಬಗ್ಗೆ ಪರ ವಿರೋಧ ಚರ್ಚೆ ಸಾಮಾಜಿಕ ಜಾಲ ತಾಣಗಳಲ್ಲಿ ಶುರುವಾಗಿದೆ. ಈ ನಡುವೆ ತುಂಟಾಟದಲ್ಲಿ ಸುಳ್ಳು ಸುಳ್ಳೇ ಗಾಯಗೊಂಡ ಸ್ಟಂಟ್ ಮ್ಯಾನ್ ವಿಡಿಯೋ ತುಣುಕು ಯೂಟ್ಯೂಬ್ ನಲ್ಲಿ ಸದ್ದು ಮಾಡಿದೆ.
ಅಸಲಿಗೆ ವಿಡಿಯೋದಲ್ಲಿ ಏನಿದೆ?ಏನಿದು ಸ್ಟಂಟ್?
ಶ್ರದ್ಧಾ ಕಪೂರ್ ಪಾತ್ರಧಾರಿ(ಸ್ಟಂಟ್ ಮ್ಯಾನ್)ಯೊಬ್ಬನಿಗೆ ಚಾಕು(ನಕಲಿ)ವಿನಿಂದ ಚುಚ್ಚುವ ದೃಶ್ಯ ಚಿತ್ರೀಕರಿಸಲಾಗಿದೆ. ಟೇಕ್ ಓಕೆ ಆಗಿದೆ. ಆದರೆ, ಶ್ರದ್ಧಾ ಚಾಕುವಿನಿಂದ ಚುಚ್ಚಿದ ನಂತರ ಹೊಟ್ಟೆ ಹಿಡಿದುಕೊಂಡು ಸ್ಟಂಟ್ ಮ್ಯಾನ್ ನರಳಾಡಿದ್ದಾನೆ. ಶ್ರದ್ಧಾ ಟೇಕ್ ಓಕೆಯಾಗಿದ್ದರಿಂದ ತನ್ನ ಕ್ಯಾರವಾನ್ ಕಡೆಗೆ ತೆರಳಿದ್ದಾರೆ.
ಗಾಬರಿಗೊಂಡ ಶ್ರದ್ಧಾ ಕಪೂರ್
ಆದರೆ, ಸ್ಟಂಟ್ ಮ್ಯಾನ್ ರಕ್ತಸ್ರಾವದಿಂದ ಬಳಲುತ್ತಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಬಿಂಬಿಸಲಾಗಿದೆ. ವಿಷಯ ತಿಳಿದು ಶಾಕ್ ಆದ ಶ್ರದ್ಧಾ ತನ್ನ ಸಹಾಯಕರು, ನಿರ್ದೇಶಕರ ಬಳಿ ಏನಾಯಿತು ಎಂದು ಪ್ರಶ್ನಿಸುತ್ತಾಳೆ.
ಶ್ರದ್ಧಾ ವ್ಯಾನಿಟಿ ವ್ಯಾನ್ ತಟ್ಟುತ್ತಿರುವ ಜನ
ವ್ಯಾನಿಟಿ ವ್ಯಾನ್ ಸೇರಿದ ಶ್ರದ್ಧಾ ಹೊರಗೆ ಬರುವಂತೆ ಆಗ್ರಹಿಸಿ ಜನರು ಅಗ್ರಹಿಸುವ ರೀತಿಯ ಸನ್ನಿವೇಶ ಸೃಷ್ಟಿಸಲಾಯಿತು. ಇದರಿಂದ ಶ್ರದ್ಧಾ ಇನ್ನಷ್ಟು ಗಾಬರಿಗೊಂಡಳು.
ಆಶೀಕಿ 2 ಚಿತ್ರ ಪ್ರತಿಭೆಗಳಿಗೆ ರಾಹುಕಾಲ
ಆಶೀಕಿ 2 ಚಿತ್ರ ಪ್ರತಿಭೆಗಳಿಗೆ ಈಗ ದುರ್ದೆಸೆ ಬಂದಿದೆ ಎನ್ನಬಹುದು. ಆಶೀಕಿ 2 ಚಿತ್ರ ಗಾಯಕ, ಸಂಗೀತ ಸಂಯೋಜಕ ಅಂಕಿತ್ ತಿವಾರಿ ಅವರು ಇತ್ತೀಚಿಗೆ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರು. ಅದು ರಿಯಲ್ ಕಥೆಯಾದರೆ, ಈಗ ತಮಾಷೆಗಾಗಿ ಎಂಟಿವಿ ಮಾಡಿದ ತುಂಟಾಟದಿಂದ ಶ್ರದ್ಧಾ ತೀವ್ರವಾಗಿ ಆತಂಕಗೊಂಡಿದ್ದಾಳೆ. ಅದರೆ, ಇದು ರೀಲ್ ಕಥೆ
ಶ್ರದ್ಧಾ ಕಪೂರ್ ಗಾಬರಿಗೊಳಿಸಿದ ದೃಶ್ಯಾವಳಿ
ನಟಿ ಶ್ರದ್ಧಾ ಕಪೂರ್ ಬಕ್ರಾ ಮಾಡಿ ಗಾಬರಿಗೊಳಿಸಿದ ವಿಡಿಯೋ ತುಣುಕು ಇಲ್ಲಿದೆ ನೋಡಿ...