ವಿಜಯ್ ವಿಚ್ಛೇದನಕ್ಕೆ ಶುಭಾ ಪೂಂಜಾ ಪ್ರತಿಕ್ರಿಯೆ

ಈ ಸಮಯದಲ್ಲಿ ಸಹಜವಾಗಿ ಎಲ್ಲರ ಕಣ್ಣು, ಒಂದು ಕಾಲದ ಅವರ ಆಪ್ತ ಸ್ನೇಹಿತೆ, ಎಸ್ ನಾರಾಯಣ್ ಅವರ 'ಚಂಡ', ಸುಮನಾ ಕಿತ್ತೂರು ಅವರ 'ಸ್ಲಂ ಬಾಲ', ಎಂಎಸ್ ರಮೇಶ್ ಅವರು 'ತಾಕತ್', ತುಷಾರ ರಂಗನಾಥ್ ಅವರ 'ಕಂಠೀರವ' ಮುಂತಾದ ಸಿನೆಮಾಗಳಲ್ಲಿ ಅವರೊಂದಿಗೆ ನಟಿಸಿರುವ ಶುಭಾ ಪೂಂಜಾ ಮೇಲೆ ಹೊರಳಿದೆ. [ಶುಭಾ ಪೂಂಜಾ ಗ್ಯಾಲರಿ]
ಈ ಹಗರಣಕ್ಕೆ ಸಂಬಂಧಿಸಿದಂತೆ, 'ಮೀನಾಕ್ಷಿ' ಕನ್ನಡ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿರುವ ಶುಭಾ ಪೂಂಜಾ ಅವರು ಪ್ರತಿಕ್ರಿಯೆ ನೀಡಿದ್ದು, "ಇದರ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನನಗೂ ಅದಕ್ಕೂ ಸಂಬಂಧವೂ ಇಲ್ಲ. ನನ್ನನ್ನು ಈ ಹಗರಣದಲ್ಲಿ ತರಲೇಬೇಡಿ. ನಾನು ಮತ್ತು ಅವರು ಸಹೋದ್ಯೋಗಿಗಳಷ್ಟೆ. ಒಟ್ಟಾಗಿ ನಟಿಸಿದ್ದೇವೆ. ನಾವಿಬ್ಬರೂ ಈಗಲೂ ಒಳ್ಳೆಯ ಸ್ನೇಹಿತರು. ಈಗಲೂ ನಾನು ಸಿಂಗಲ್ ಹುಡುಗಿ" ಎಂದಿದ್ದಾರೆ.
"ವಿಚ್ಛೇದನದ ಬಗ್ಗೆ ಕೂಡ ಅವರು ನನ್ನ ಜೊತೆ ಯಾವತ್ತೂ ಮಾತನಾಡಿಲ್ಲ. ಜೊತೆಯಾಗಿ ನಟಿಸಿದಾಗ ಕೂಡ ಇದರ ಬಗ್ಗೆ ಏನೂ ಹೇಳಿಲ್ಲ. ಇತ್ತೀಚಿನ ದಿನಗಳಲ್ಲಿ ನಾವಿಬ್ಬರು ಭೇಟಿ ಕೂಡ ಆಗಿಲ್ಲ. ಅವರಿಬ್ಬರ ವಿಚ್ಛೇದನಕ್ಕೆ ಕಾರಣವೇನೆಂದು ಕೂಡ ಗೊತ್ತಿಲ್ಲ. ಅವರು ಮತ್ತು ನಾಗರತ್ನ ನಡುವಿನ ಸಂಸಾರ ಚೆನ್ನಾಗಿರಬೇಕು" ಎಂದು ಶುಭಾ ಪೂಂಜಾ ಶುಭ ಕೋರಿದ್ದಾರೆ.
ಕೆಲ ವರ್ಷಗಳ ಹಿಂದೆಯೇ ದುನಿಯಾ ವಿಜಯ್ ಮತ್ತು ಶುಭಾ ಪೂಂಜಾ ನಡುವೆ ಏನೋ ನಡೀತಿದೆ, ಇಬ್ಬರೂ ಕದ್ದುಮುಚ್ಚಿ ಮದುವೆಯಾಗಿದ್ದಾರೆ, ಅವರಿಗಾಗಿಯೇ ಹೊಸ ಮನೆ ಹೂಡಿದ್ದಾರೆ, ಎರಡನೇ ಪತ್ನಿಯನ್ನು ಮೊದಲನೇ ಪತ್ನಿ ನಾಗರತ್ನ ಒಪ್ಪಿಕೊಂಡಿದ್ದಾರೆ, ಮುಂದೆ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಬಂದು ವಿಜಯ್ ಆತ್ಮಹತ್ಯೆಗೆ ಕೂಡ ಯತ್ನಿಸಿದ್ದರೂ ಎಂಬಿತ್ಯಾದಿ ಗಾಳಿಸುದ್ದಿಗಳು ಹಬ್ಬಿದ್ದವು.


Click it and Unblock the Notifications











