Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಾಯಿ ಬಿಟ್ಟರು ಬಾಬು!
*ಮೋಹನ್
ಪ್ರಚಾರ ಪ್ರಿಯ ರಾಜೇಂದ್ರ ಸಿಂಗ್ ಬಾಬು ಮತ್ತೆ ಮಾತಾಡೋದಕ್ಕೆ ಶುರು ಮಾಡಿದ್ದಾರೆ. ಏನಾದರೂ ಮಾತಾಡುತ್ತಿರು ತಮ್ಮ ಅನ್ನೋದು ಅವರ ಬದುಕಿನ ನೀತಿ. ಈ ಬಾರಿ ಅವರ ಟೀಕೆಗೆ ಗುರಿಯಾದವರು ಕನ್ನಡದ ಕಲಾವಿದರು.
ಇದುವರೆಗೆ ಒಬ್ಬನೇ ಒಬ್ಬ ಕನ್ನಡ ನಟ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿಲ್ಲ ಅನ್ನುವ ಲೇಟೆಸ್ಟ್ ಸಂಶೋಧನೆ ಮಾಡಿರುವ ಬಾಬು ಆ ಬಗ್ಗೆ ವಿಪರೀತ ಹೆಮ್ಮೆಯಿಂದಲೂ ವಿಷಾದದಿಂದಲೂ ಮಾತಾಡಿದ್ದಾರೆ. ಕನ್ನಡದ ನಿರ್ದೇಶಕರಿಗೆ, ನಿರ್ಮಾಪಕರಿಗೆ, ನಟಿಯರಿಗೆ ರಾಷ್ಟ್ರಪ್ರಶಸ್ತಿ ಬಂದಿದೆ. ಪೋಷಕ ನಟರಿಗೂ ಬಂದಿದೆ. ಆದರೆ ನಾಯಕ ನಟರದ್ದು ಶೂನ್ಯ ಸಂಪಾದನೆ. ದಕ್ಷಿಣದ ಬೇರೆ ಭಾಷೆಗಳಲ್ಲಿ ಎರಡು ಬಾರಿ, ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಗಳಿಸಿರುವ ನಟರಿದ್ದಾರೆ. ಉದಾಹರಣೆಗೆ ಮೋಹನ್ ಲಾಲ್, ಮುಮ್ಮೂಟ್ಟಿ . ಆದರೆ ನಾವೇಕೆ ಹೀಗೆ ?
ಬಾಬು ಅವರ ‘ಬಲ್ಬು -ಕರೆಂಟು’ ಥಿಯರಿ
ಬಾಬು ಅವರ ಪ್ರಶ್ನೆ ಇನ್ನಷ್ಟು ಪ್ರಶ್ನೆಗಳನ್ನು ಸೃಷ್ಟಿಸುತ್ತದೆ. ನಟನೊಬ್ಬನಿಗೆ ಪ್ರಶಸ್ತಿ ಸಿಗಬೇಕಾದರೆ, ಅವನ ಅಭಿನಯ ಸಾಮರ್ಥ್ಯವೊಂದೇ ಸಾಕಾಗುವುದಿಲ್ಲ. ಆತ ನಿರ್ವಹಿಸುವ ಪಾತ್ರವೂ ಅಷ್ಟೇ ಸಶಕ್ತವಾಗಿರಬೇಕು. ಅದನ್ನು ಸೃಷ್ಟಿಸಬೇಕಾದವನು ನಿರ್ದೇಶಕ. ನಮ್ಮಲ್ಲಿ ಅಂಥ ನಿರ್ದೇಶಕರು ಎಷ್ಟು ಮಂದಿ ಇದ್ದಾರೆ. ಎಂಬಲ್ಲಿಗೆ ಬಾಬು ಅವರ ಸಂಶೋಧನೆ ಅವರಿಗೇ ತಿರುಗುಬಾಣವಾಗುವ ಸಾಧ್ಯತೆಯೂ ಇದೆ. ಹಾಗಿದ್ದೂ ಬಾಬು ಪರವಾಗಿ ಮಾತಾಡುವುದಾದಲ್ಲಿ ನಮ್ಮ ಖ್ಯಾತ ನಟರು ವ್ಯಾಪಾರಿ ಚಿತ್ರಗಳಿಂದಾಚೆ ನಟಿಸುವ ಮನಸ್ಸು ಮಾಡಿಲ್ಲ ಅನ್ನುವುದೂ ನಿಜಾನೇ... ಅನಂತನಾಗ್ ಅಂಥವರು ಮಾಡಿದ್ದರೂ ರಾಷ್ಟ್ರಮಟ್ಟದಲ್ಲಿ ಅವರು ನಟಿಸಿರುವ ಹಿಂದಿ ಚಿತ್ರಗಳಿಗಷ್ಟೇ ಮನ್ನಣೆ ಸಿಕ್ಕಿವೆ.
ಬಾಬು ಪ್ರಕಾರ ಕಲಾವಿದರು ಅಂದರೆ ಬಲ್ಬ್. ನಿರ್ದೇಶಕ ಅಂದರೆ ಕರೆಂಟು. ಜನರಿಗೆ ಕರೆಂಟು ಕಾಣುವುದಿಲ್ಲ, ಉರಿಯುವ ಬಲ್ಬ್ ಮಾತ್ರ ಕಾಣುತ್ತದೆ. ಕರ್ನಾಟಕ ಈಗ ಕರೆಂಟಿನ ಕೊರತೆಯಿಂದ ಬಳಲುತ್ತಿದೆ ಅನ್ನೋ ವಾಸ್ತವ ಚಿತ್ರರಂಗಕ್ಕೂ ಅನ್ವಯವಾಗುತ್ತದೆ. ಸದ್ಯಕ್ಕೆ ಕನ್ನಡದಲ್ಲಿರುವ ಹೆಚ್ಚಿನ ನಿರ್ದೇಶಕರು ಪರಭಾಷಾ ಚಿತ್ರಗಳನ್ನು ರೀಮೇಕು ಮಾಡುವಲ್ಲೇ ತಮ್ಮ ಪ್ರತಿಭೆಯನ್ನು ಹೊರ ಹೊಮ್ಮಿಸುತ್ತಿದ್ದಾರೆ. ಹೊರಗಿನಿಂದ ಆಮದಾಗಿರುವ ಕರೆಂಟಿನಲ್ಲಿ ನಮ್ಮ ಕಲಾವಿದರೆಂಬ ಬಲ್ಬುಗಳು ಹೊಳೆಯುತ್ತಿವೆ. ಉದಾಹರಣೆಗೆ ಯಜಮಾನ ಚಿತ್ರ.
ಬಾಬು ಸಂಶೋಧನೆಗೆ ಇದೇ ಸಕಾಲ, ಯಾಕೆಂದರೆ...
ಅದಿರಲಿ, ಬಾಬು ಯಾಕೆ ಇಂಥಾ ಸಂಶೋಧನೆಯನ್ನು ಈ ಸಂದರ್ಭದಲ್ಲಿಯೇ ಬಯಲು ಮಾಡಿದ್ದಾರೆ ? ಕಾರಣ ಸರಳ. ವಿಷ್ಣುವರ್ಧನ್ ಈಗ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಬಾಬು ಇಂಥಾ ಹೇಳಿಕೆಯನ್ನು ನೀಡಿದ ಸಮಾರಂಭದಲ್ಲಿ (ಬೂತಯ್ಯನ ಮಕ್ಕಳು ಕ್ಯಾಸೆಟ್ ಬಿಡುಗಡೆ ಸಮಾರಂಭ ) ವಿಷ್ಣು ಅವರೂ ಇದ್ದರು. ಅವರು ಜಾಗ ಖಾಲಿ ಮಾಡಿದ ನಂತರ ಬಾಬು ಬಾಯಿ ತೆರೆದರು. ಸಮಾರಂಭ ಮುಗಿಯುವಷ್ಟು ಹೊತ್ತು ಅವರಿಬ್ಬರು ಪರಸ್ಪರ ಮುಖ ನೋಡಲಿಲ್ಲ . ಬಾಬು ಮತ್ತು ವಿಷ್ಣು ಅವರ ನಡುವಿನ ಜಗಳದ ಇತಿಹಾಸ ಬಲ್ಲವರಿಗೆ ಅದು ಅಪರೂಪದ ದೃಶ್ಯವೇನೂ ಅಲ್ಲ.
ಕಳೆದ ಬಾರಿ ಇವರಿಬ್ಬರೂ ಜಗಳವಾಡಿದಾಗ ಇಬ್ಬರ ಮಾರ್ಕೆಟ್ ವ್ಯಾಲ್ಯೂ ಕೂಡ ಕೆಳಗಿತ್ತು. ಹಾಗಾಗಿ ಇಬ್ಬರೂ ಫ್ರೀಯಾಗಿದ್ದರು. ಆದರೆ ಈಗ ಇಬ್ಬರೂ ಸಾಕಷ್ಟು ಬಿಜಿಯಾಗಿದ್ದಾರೆ. ಬಾಬು ನಿರ್ದೇಶನದ ಕುರಿಗಳು ಸಾರ್ ಕುರಿಗಳು ಚಿತ್ರ ಯಶಸ್ಸು ಕಂಡಿದೆ. ವಿಷ್ಣು ಅವರಂತೂ ಕಳೆದ ಎರಡು ವರ್ಷದಿಂದ ಸೋಲಿಲ್ಲದ ಸರದಾರನೇ ಆಗಿದ್ದಾರೆ. ಹಾಗಾಗಿ ಅವರಿಗೆ ಯಾವ ರಾಗ ದ್ವೇಷಗಳೂ ಬೇಕಾಗಿಲ್ಲ. ತಾನು ಇವೆಲ್ಲವನ್ನೂ ಮೀರಿದ ತತ್ವಜ್ಞಾನಿ ಅನ್ನುವುದನ್ನು ಪದೇ ಪದೇ ತೋರಿಸಿಕೊಡುವ ಪ್ರಯತ್ನದಲ್ಲಿ ಅವರು ನಿರತರಾಗಿದ್ದಾರೆ. ಆದರೆ ಬಾಬು ಮಾತ್ರ ಬದಲಾಗಿಲ್ಲ. ಹೇಗಾದರೂ ಮಾಡಿ ಸುದ್ದಿಯಲ್ಲಿರಬೇಕು ಅನ್ನುವ ಕಾರಣಕ್ಕೇ ಹಾದಿಯಲ್ಲಿ ಸಿಕ್ಕವರಿಗೆಲ್ಲಾ ತಗಲಿಕೊಳ್ಳುತ್ತಿದ್ದಾರೆ. ಅದು ವಿಷ್ಣುವರ್ಧನ್ ಅವರೇ ಆಗಿರಬಹುದು, ಸೆನ್ಸಾರ್ ಸಮಿತಿಯ ಸದಸ್ಯರೇ ಆಗಿರಬಹುದು, ಯಾರೂ ಸಿಗದೇ ಇದ್ದರೇ ಒಕ್ಕೂಟದ ಅಧ್ಯಕ್ಷ ಅಶೋಕ್ ಅವರಂತೂ ಜಗಳಕ್ಕೆ ಕಂಪನಿ ಕೊಡುವುದಕ್ಕೆ ಸದಾ ಸಿದ್ಧರಾಗಿದ್ದಾರೆ.
ಕೋತಿಗಳು
ಸಾರ್
ಕೋತಿಗಳು
ಚಿತ್ರ
ಬಿಡುಗಡೆಯಾಗುವ
ಮೊದಲೇ
ಬಾಬು
ಈ
ರೀತಿಯಾಗಿ
ಆಡುತ್ತಿರುವುದು
ಸಾಕಷ್ಟು
ಕುತೂಹಲಕಾರಿಯಾಗಿದೆ
ಅನ್ನುವುದಂತೂ
ನಿಜ.
what
do
you
say
?
ವಾರ್ತಾ
ಸಂಚಯ
ಮಹಾನಾಯಕರಾಗುವ
ಹಾದಿಯಲ್ಲಿ
ಸಿಂಗ್
ಬಾಬು
ಮುಖಪುಟ / ಸ್ಯಾಂಡಲ್ವುಡ್