Don't Miss!
- Finance ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಯೋಜನೆ: ಬರಲಿವೆ 19 ಎತ್ತರದ ನಿಲ್ದಾಣಗಳು
- News ಬೆಳಗಾವಿಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಲಕ್ಷ್ಮಿ ಹೆಬ್ಬಾಳ್ಕರ್ಗೆ ಸಮನ್ಸ್ ಜಾರಿ
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Automobiles Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ, ರೂ.10 ಲಕ್ಷ ಬೆಲೆ.. ಆಕರ್ಷಕ ವೈಶಿಷ್ಟ್ಯಗಳು
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೆಜಿಎಫ್-2ಗೋಸ್ಕರ ಏಳು ಚಿತ್ರಗಳನ್ನು ಬೇಡ ಎಂದು ಕೈಬಿಟ್ಟರಂತೆ ಶ್ರೀನಿಧಿ ಶೆಟ್ಟಿ
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಮೂಲಕ ರಾತ್ರೋರಾತ್ರಿ ಸ್ಟಾರ್ ಹೀರೋಯಿನ್ ಆದ ಶ್ರೀನಿಧಿ ಶೆಟ್ಟಿಗೆ ನಿರೀಕ್ಷೆಯಂತೆ ಬೇಡಿಕೆ ಹೆಚ್ಚಿತ್ತು. ಕೆಜಿಎಫ್ ಮುಗಿಯುತ್ತಿದ್ದಂತೆ ಸಾಲು ಸಾಲು ಚಿತ್ರಗಳು ಶ್ರೀನಿಧಿ ಬಳಿ ಬಂದಿದ್ದವು. ಆದರೆ, ಯಾವುದೇ ಹೊಸ ಸಿನಿಮಾಗಳನ್ನು ಫಟ್ ಅಂತಾ ಆಯ್ಕೆ ಮಾಡಿಕೊಂಡಿಲ್ಲ.
ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕಾಗಿ ಕಾಯಲು ನಿರ್ಧರಿಸಿದರು. ಈ ನಡುವೆ ತಮಿಳು ಸ್ಟಾರ್ ನಟ ಚಿಯಾನ್ ವಿಕ್ರಮ ಜೊತೆ ಕೋಬ್ರಾ ಚಿತ್ರಕ್ಕೆ ನಾಯಕಿಯಾಗಲು ಓಕೆ ಎಂದರು. ಸದ್ಯ, ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು, ತೆರೆಗೆ ಬರಲು ಸಜ್ಜಾಗಿದೆ.
'KGF' ನಾಯಕಿ ಶ್ರೀನಿಧಿ ಶೆಟ್ಟಿ ನಿಶ್ಚಿತಾರ್ಥದ ಫೋಟೋಗಳು ವೈರಲ್!
ಈ ಮಧ್ಯೆ ಏಳು ಚಿತ್ರಗಳ ಅವಕಾಶವನ್ನು ಶ್ರೀನಿಧಿ ಶೆಟ್ಟಿ ದೂರ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಅಕ್ಟೋಬರ್ ಬಳಿಕ ಹೊಸ ಸಿನಿಮಾಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವೆ, ಅಲ್ಲಿಯವರೆಗೂ ಕೆಜಿಎಫ್ ಬಗ್ಗೆ ಮಾತ್ರ ಗಮನ ಹರಿಸುವೆ ಎಂದು ಹೇಳಿಕೊಂಡಿದ್ದರು.
ಶ್ರೀನಿಧಿ ಶೆಟ್ಟಿ ಕನ್ನಡದಲ್ಲಿ ಮೂರು ಸಿನಿಮಾ, ತೆಲುಗಿನಲ್ಲಿ ಎರಡು ಸಿನಿಮಾ ಹಾಗೂ ತಮಿಳಿನಲ್ಲಿ ಎರಡು ಚಿತ್ರವನ್ನು ರಿಜೆಕ್ಟ್ ಮಾಡಿದ್ದಾರೆ. ಅಕ್ಟೋಬರ್ ಬಳಿಕ ಹೊಸ ಸಿನಿಮಾ ಕುರಿತು ಚಿಂತಿಸುವೆ ಎಂದು ಹೇಳಿರುವುದಾಗಿ ಬಾಲಿವುಡ್ ವೆಬ್ಸೈಟ್ವೊಂದು (Koimoi.com) ವರದಿ ಮಾಡಿದೆ.
ಇನ್ನು ಕೆಜಿಎಫ್ ಚಾಪ್ಟರ್ 2 ವಿಚಾರಕ್ಕೆ ಬರುವುದಾದರೇ, ಈ ವರ್ಷಾಂತ್ಯಕ್ಕೆ ಬಿಡುಗಡೆಯಾಗುವ ಸಿದ್ಧತೆಯಲ್ಲಿತ್ತು. ಕೊರೊನಾ ವೈರಸ್ ಲಾಕ್ಡೌನ್ನಿಂದ ಈ ಪ್ಲಾನ್ ಬದಲಾಗಬಹುದು. ಚಿತ್ರದಲ್ಲಿ ಖಳನಟನಾಗಿ ನಟಿಸಿರುವ ಸಂಜಯ್ ದತ್ ಅವರಿಗೆ ಕ್ಯಾನ್ಸರ್ ಪತ್ತೆಯಾಗಿದೆ. ದತ್ ಅವರ ಭಾಗದ ಚಿತ್ರೀಕರಣ ಮುಗಿದಿದೆ ಎನ್ನಲಾಗಿದೆ. ಆಗಸ್ಟ್ 15 ರಿಂದ ಮತ್ತೆ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಆರಂಭವಾಗಲಿದೆ.