ಥ್ರಿಲ್ಲರ್ ಮಂಜುಗೆ ಥ್ರಿಲ್ ನೀಡಿದ ಕಬ್ಬನ್ಪಾರ್ಕ್ ಪೊಲೀಸರು
ಮೈ ನವಿರೇಳಿಸುವ ಸ್ಟಂಟ್ಗಳ ಮಾಸ್ಟರ್ ಥ್ರಿಲ್ಲರ್ ಮಂಜು ಮಂಕಾಗಿದ್ದರು. ಕಬ್ಬನ್ಪಾರ್ಕ್ ಪೊಲೀಸರ ಕಾನೂನು ಮತ್ತು ಸುವ್ಯವಸ್ಥೆಯ ಪ್ರಶ್ನೆಗಳಿಗೆ ಥ್ರಿಲ್ಲರ್ ಮಂಜು ಅವರಲ್ಲಿ ಉತ್ತರ ಇರಲಿಲ್ಲ . ಆ ಕಾರಣಕ್ಕಾಗಿಯೇ ಪೊಲೀಸರು ಬಂಧಿಸಿದಾಗ ಮಂಜು ಸಿನಿಮಾ ನಾಯಕನಂತೆ ಆ್ಯಕ್ಷನ್ಗಿಳಿಯಲಿಲ್ಲ !
ವಿಷಯ ಇಷ್ಟು-
ಮಹಾತ್ಮಗಾಂಧಿ ರಸ್ತೆಯಲ್ಲಿ ಥ್ರಿಲ್ಲರ್ ಗುರುವಾರ(ಮಾ.07) ಶೂಟಿಂಗ್ ನಡೆಸುತ್ತಿದ್ದರು. ಸಾಧು ಚಿತ್ರದ ಚಿತ್ರೀಕರಣವದು. ಮಂಜು ಮಾಡಿದ್ದು ಒಂದೇ ತಪ್ಪು ; ಗಾಂಧಿ ರಸ್ತೆಯಲ್ಲಿ ಶೂಟಿಂಗ್ ನಡೆಸಲು ಅನುಮತಿ ಪಡೆಯದಿದ್ದುದು. ಶೂಟಿಂಗ್ಗೆ ಪೊಲೀಸರಿಂದ ಅನುಮತಿ ಪಡೆದಿಲ್ಲ . ಸಂಚಾರಕ್ಕೆ ಅಡ್ಡಿ ಮಾಡುತ್ತಿದ್ದಾರೆ- ಎಂದು ಆರೋಪ ಹೊರಿಸಿದ ಕಬ್ಬನ್ ಪಾರ್ಕ್ ಪೊಲೀಸರು ಮಂಜು ಅವರನ್ನು ಬಂಧಿಸಿದರು.
ಪೊಲೀಸರೊಂದಿಗೆ ಠಾಣೆಗೆ ತೆರಳಿದ ಥ್ರಿಲ್ಲರ್ ಮಂಜು, ಮುಚ್ಚಳಿಕೆ ಬರೆದುಕೊಟ್ಟು ಬಿಡುಗಡೆಯಾಗಿದ್ದಾರೆ. ಇನ್ನೆಂದೂ ಇಂಥ ಪ್ರಕರಣಗಳಿಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಮುಚ್ಚಳಿಕೆಯಲ್ಲಿ ಅವರು ತಿಳಿಸಿದ್ದಾರೆ.
Post your views
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











