Don't Miss!
- News ಅಮಿತ್ ಶಾ ಓರ್ವ ಗೂಂಡಾ, ರೌಡಿ.! ಯತೀಂದ್ರ ಸಿದ್ದರಾಮಯ್ಯ ತೀವ್ರ ವಾಗ್ದಾಳಿ
- Automobiles Hyundai Creta: ಜನಪ್ರಿಯ ಹ್ಯುಂಡೈ ಕ್ರೆಟಾ ಕಾರನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು? EMI ಏನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾನಿನ್ನು ಸುಮ್ಮನಿರುವುದಿಲ್ಲ , ಕೋರ್ಟಿಗೆ ಹೋಗುತ್ತೇನೆ!
‘ಧನರಾಜ್ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ವರ್ಷಕಾಲದ ಮಾನಸಿಕ ಹಿಂಸೆಯೂ ಸೇರಿದಂತೆ ನನಗಾಗಿರುವ ನಷ್ಟಕ್ಕೆ ಪರಿಹಾರ ಕೋರುತ್ತೇನೆ.’
ಧನರಾಜ್ ತಮ್ಮ ಮೇಲೆ ಮಾಡಿದ ಆಪಾದನೆಗಳಿಗೆ ಉಪೇಂದ್ರ ವ್ಯಗ್ರರಾಗಿದ್ದರು. ಅವರೊಂದಿಗೆ ಎಂಟು ಮಂದಿ ನಿರ್ಮಾಪಕರೂ ಸುದ್ದಿಗೋಷ್ಠಿಯಲ್ಲಿದ್ದರು. ಧನರಾಜ್ ನನಗೆ ಮೋಸ ಮಾಡಿದ್ದಾರೆ. ಆತನ ಮೇಲೆ ಕ್ರಿಮಿನಲ್ ದಾವೆ ಹೂಡುತ್ತೇನೆ ಎಂದು ಉಪೇಂದ್ರ ಗುಡುಗಿದರು.
ಧನರಾಜ್ರೊಂದಿಗೆ ಸಂಧಾನದ ಸಾಧ್ಯತೆಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದ ಉಪೇಂದ್ರ- ನಾನು ರಾಜಿಗೆ ಒಪ್ಪುವುದಿಲ್ಲ . ಏನಿದ್ದರೂ ನೇರ ಹೋರಾಟ. ಇಂಥ ಮಂದಿಯಿಂದ ಉದ್ಯಮಕ್ಕೆ ಅಪಾಯ. ಇಂಥವರು ಉದ್ಯಮದಲ್ಲಿ ಇರಬಾರದು ಎಂದರು.
ಎಚ್ಟೂಒ ಹೆಸರಲ್ಲಿ ಧನರಾಜ್ ದುಡ್ಡು ಮಾಡಿಕೊಂಡರು. ಸಿನಿಮಾ ನಿರ್ಮಿಸುವುದಾಗಿ ಹಣ ಸಂಗ್ರಹಿಸಿದರು. ಅವರ ಚಿತ್ರಕ್ಕಾಗಿ ನಾವೆಲ್ಲ ಕಷ್ಟ ಪಟ್ಟು ದುಡಿದೆವು. ಆದರೆ, ನಮ್ಮ ಹೆಸರು ಹೇಳಿಕೊಂಡು ಧನರಾಜ್ ಸ್ವಂತ ಡಿಸ್ಟ್ರಿಬ್ಯೂಷನ್ ಆಫೀಸ್ ಮಾಡಿಕೊಂಡರು. ಅವರಿಂದಾಗಿ ನಾನು ಅನುಭವಿಸಿದ ಮಾನಸಿಕ ಹಿಂಸೆ ಅಷ್ಟಿಷ್ಟಲ್ಲ . ನನ್ನ ಒಂದು ವರ್ಷ ಹಾಳಾಯಿತು. ಒಂದು ವರ್ಷದಿಂದ ನನ್ನ ಯಾವ ಸಿನಿಮಾನೂ ರಿಲೀಸ್ ಆಗಿಲ್ಲ .
ಸಿನಿಮಾ ಚೆನ್ನಾಗಿ ಬರಲಿ ಎಂದು ಕಷ್ಟ ಪಟ್ಟು ಕೆಲಸ ಮಾಡಿದೆವು. ಆದರೆ, ಈಗ ಆರೋಪ ಹೊರಿಸುತ್ತಿದ್ದಾರೆ. ಆತ ಕಲಾವಿದರಿಗೆ, ತಂತ್ರಜ್ಞರಿಗೆ ಸಂಭಾವನೆಯನ್ನೇ ಕೊಟ್ಟಿಲ್ಲ . ಸಂಭಾವನೆ ಕೇಳಲು ಹೋದವರಿಗೆ ಧಮಕಿ ಹಾಕಿದ್ದಾರೆ. ನನಗಾದ ನಷ್ಟ ಬಿಡಿ ; ಪಾಪ, ಈ ಬಡ ಕಲಾವಿದರನ್ನು ಯಾರು ಕೇಳುತ್ತಾರೆ. ಅವರೇನು ಪ್ರೆಸ್ ಮೀಟ್ ಮಾಡೋಕೆ ಆಗುತ್ತಾ? ನನ್ನ ಬಳಿ ಸಾಕ್ಷಿ ಆಧಾರಗಳಿವೆ. ಕಲಾವಿದರಿಗೆ ಸಂಭಾವನೆ ಸಂದಾಯ ಆಗುವವರೆಗೂ ನಾನು ಎಚ್ಟೂಒ ರಿಲೀಸ್ ಆಗಲಿಕ್ಕೆ ಬಿಡೊಲ್ಲ ಎಂದು ಉಪೇಂದ್ರ ಹೇಳಿದರು.
ತಮ್ಮ
ಅಭಿನಯದ
ಸಿನಿಮಾಗಳ
ಬಿಡುಗಡೆಗಾಗಿ
ತಮ್ಮದೇ
ಆದ
ಸ್ವಂತ
ವಿತರಣಾ
ಸಂಸ್ಥೆಯಾಂದನ್ನು
ಪ್ರಾರಂಭಿಸುವುದಾಗಿ
ಇದೇ
ಸಂದರ್ಭದಲ್ಲಿ
ಉಪೇಂದ್ರ
ಹೇಳಿದರು.
what
do
you
say
?
ಮುಖಪುಟ / ಸ್ಯಾಂಡಲ್ವುಡ್