Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ರಾಕಿಂಗ್'ಗೆ ಸೈಡ್ ಗೆ ಹೋಗೋ' ಎಂದ 'ಜೆಡಿ' ಚಿತ್ರದ ಬಜೆಟ್ ಎಷ್ಟು.?
ನಿರ್ದೇಶಕ ಕಲಾ ಸಾಮ್ರಾಟ್ ಎಸ್.ನಾರಾಯಣ್ ಮತ್ತು ಜಗದೀಶ್ ಅಲಿಯಾಸ್ ಜೆಡಿ ಅವರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾ 'ಜೆಡಿ' ಚಿತ್ರ ಜೂನ್ 23ರಂದು ರಾಮನಗರದಲ್ಲಿ ಗ್ರ್ಯಾಂಡ್ ಆಗಿ ಮುಹೂರ್ತ ನೆರವೇರಿಸಿಕೊಂಡಿದೆ.
ನಟನೆಯ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿರುವ ಜಗದೀಶ್ ಅಲಿಯಾಸ್ ಜೆಡಿ ಅವರು ತಮ್ಮ ಚೊಚ್ಚಲ ಚಿತ್ರಕ್ಕೆ ನೀರಿನಂತೆ ದುಡ್ಡು ಸುರಿಯುತ್ತಿದ್ದಾರೆ. ಮಾತ್ರವಲ್ಲದೇ ಇದು ನಿರ್ದೇಶಕ ಎಸ್ ನಾರಾಯಣ್ ಅವರ 50ನೇ ಸಿನಿಮಾ ಆಗಿರುವುದರಿಂದ ಕೊಂಚ ನಿರೀಕ್ಷೆ ಜಾಸ್ತೀನೇ ಇದೆ.
'ಜೆಡಿ' ಚಿತ್ರಕ್ಕೆ ಬರೋಬ್ಬರಿ 25 ಕೋಟಿ ರೂಪಾಯಿ ಖರ್ಚು ಮಾಡಲು ನಿರ್ಮಾಪಕ ಕಮ್ ನಾಯಕ ಜಗದೀಶ್ ಅವರು ತಯಾರಾಗಿದ್ದಾರೆ. ಅಸಲಿಗೆ ಹೊಸಬ್ಬರ ಸಿನಿಮಾಗೆ ಇಷ್ಟೊಂದು ದುಡ್ಡು ಸುರಿದು ಸಿನಿಮಾ ಮಾಡಿದರೆ ಹಾಕಿದ ಹಣ ವಾಪಸ್ ಬರುತ್ತಾ ಅನ್ನೋದು ಸದ್ಯಕ್ಕಿರುವ ಪ್ರಶ್ನೆ.
ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಯಾವಾಗಲೂ ನಂ.1 ಆಗಿರಬೇಕೆಂದು ಬಯಸುವ ಜಗದೀಶ್ ಅವರು ತಮ್ಮ ಚೊಚ್ಚಲ ಚಿತ್ರವನ್ನು ಬಹಳ ದೊಡ್ಡ ಮಟ್ಟದಲ್ಲಿ ತರಲು ಯೋಜನೆ ಹಾಕಿಕೊಂಡಿದ್ದಾರೆ. ಹೇಳಿ ಕೇಳಿ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಟಾಂಗ್ ಕೊಟ್ಟು ಪೋಸ್ಟರ್ ಬೇರೆ ಡಿಸೈನ್ ಮಾಡಿರುವುದರಿಂದ ಆರಂಭದ ಹಂತದಲ್ಲೇ ಸಿನಿಮಾ ಸಖತ್ ಸುದ್ದಿ ಮಾಡುತ್ತಿದೆ.[ಸೈಡಿಗ್ ಹೋಗೋ ಯಶ್ ಅಂದ್ರಾ ಎಸ್ ನಾರಾಯಣ್?]
ಅಂದಹಾಗೆ 'ಜೆಡಿ' ಚಿತ್ರದಲ್ಲಿ ಒಟ್ಟು 32 ಪ್ರಮುಖ ಕಲಾವಿದರು ಪಾತ್ರ ವಹಿಸಲಿದ್ದು, ಕಲಾವಿದರಿಗಾಗಿಯೇ ಈಗಾಗಲೇ 25 ಕ್ಯಾರಾವಾನ್ ಗಳನ್ನು ತರಿಸುವ ಯೋಜನೆ ನಿರ್ಮಾಪಕ ಜಗದೀಶ್ ಅವರಿಗಿದೆ. ಆದರೆ 'ಆ' 32 ಮುಖ್ಯ ಕಲಾವಿದರು ಯಾರು ಅನ್ನೋದನ್ನು ನಿರ್ದೇಶಕ ಎಸ್ ನಾರಾಯಣ್ ಆಗಲಿ ನಿರ್ಮಾಪಕ ಜಗದೀಶ್ ಅವರಾಗಲಿ ಇನ್ನೂ ನಿರ್ಧರಿಸಿಲ್ಲ.
ಈಗಾಗಲೇ ಮುಹೂರ್ತ ನೆರವೇರಿದ್ದು, ಆಗಸ್ಟ್ ನಲ್ಲಿ 'ಜೆಡಿ' ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಚಿತ್ರಕ್ಕೆ ಸತ್ಯ ಹೆಗಡೆ ಅವರು ಕ್ಯಾಮರಾ ಕೈ ಚಳಕ ತೊರಲಿದ್ದು, ಮಣಿಕಾಂತ್ ಕದ್ರಿ ಅವರು ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ.