Don't Miss!
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರವಿಚಂದ್ರನ್ ಪುತ್ರನ ಜೊತೆ ಕಮಲ್ ಹಾಸನ್ ಪುತ್ರಿ ನಟಿಸುವುದು ಡೌಟು.!
ಬಹುಭಾಷಾ ಚಿತ್ರಕ್ಕೆ ನಾಯಕನಾಗಿ ಕ್ರೇಜಿ ಸ್ಟಾರ್ ರವಿಚಂದ್ರನ್ ರವರ ಪುತ್ರ ವಿಕ್ರಮ್ ಆಯ್ಕೆ ಆಗಿರುವ ಸುದ್ದಿಯನ್ನ ನೀವು ಕೇಳಿರಬಹುದು. ಹಾಗೇ, ಆ ಚಿತ್ರಕ್ಕೆ 'ನಾನು ಅವಳು' ಎಂಬ ಟೈಟಲ್ ಫಿಕ್ಸ್ ಆಗಿರುವುದನ್ನೂ ನಾವೇ ನಿಮಗೆ ಹೇಳಿದ್ವಿ.
ನಾಗಶೇಖರ್ ನಿರ್ದೇಶನವಿರುವ 'ನಾನು ಅವಳು' ಚಿತ್ರದಲ್ಲಿ ವಿಕ್ರಮ್ ಗೆ 'ಸಕಲಕಲಾವಲ್ಲಭ' ಕಮಲ್ ಹಾಸನ್ ಎರಡನೇ ಪುತ್ರಿ ಅಕ್ಷರಾ ಹಾಸನ್ ನಾಯಕಿ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.
ಆದರೆ ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ವಿಕ್ರಮ್ ಚಿತ್ರಕ್ಕೆ ಅಕ್ಷರಾ ಹಾಸನ್ ಬಣ್ಣ ಹಚ್ಚುವುದು ಡೌಟು. ಹೀಗಾಗಿ ಬೇರೆ ನಾಯಕಿಯ ಹುಡುಕಾಟದಲ್ಲಿ ನಾಗಶೇಖರ್ ತೊಡಗಿದ್ದಾರೆ. ಮುಂದೆ ಓದಿರಿ...
ನಾಗಶೇಖರ್ ತಲೆಯಲ್ಲಿ ಈಕೆಯ ಹೆಸರು....
'ನಾನು ಅವಳು' ಚಿತ್ರಕ್ಕೆ ಮಲಯಾಳಂನ ಸಾಯಿ ಪಲ್ಲವಿ ನಾಯಕಿ ಆಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಯಾರು ಈ ಸಾಯಿ ಪಲ್ಲವಿ.?
ಮಲಯಾಳಂನ 'ಪ್ರೇಮಂ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಸಾಯಿ ಪಲ್ಲವಿ, ಹರೆಯದ ಹುಡುಗರ ಅಚ್ಚುಮೆಚ್ಚಿನ ನಟಿ. ಮಾಲಿವುಡ್ ನಲ್ಲಿ ಸಖತ್ ಬಿಜಿ ಆಗಿರುವ ಸಾಯಿ ಪಲ್ಲವಿ ಇದೀಗ 'ನಾನು ಅವಳು' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಡುವ ಸಾಧ್ಯತೆ ಇದೆ.
ಇನ್ನೂ ಪಕ್ಕಾ ಆಗಿಲ್ಲ.!
ಸಾಯಿ ಪಲ್ಲವಿ ಜೊತೆ ನಿರ್ದೇಶಕ ನಾಗಶೇಖರ್ ಒಂದು ರೌಂಡ್ ಮಾತುಕತೆ ನಡೆಸಿದ್ದಾರೆ ಅಂತ ಹೇಳಲಾಗಿದೆ ಅಷ್ಟೇ. ಹೀಗಾಗಿ ಇನ್ನೂ ಯಾವುದೂ ಪಕ್ಕಾ ಆಗಿಲ್ಲ.
ಅದ್ಧೂರಿಯಾಗಿ ನಡೆಯಲಿದೆ ಫೋಟೋ ಶೂಟ್
ಬೆಂಗಳೂರಿನ ಮಿನರ್ವ ಮಿಲ್ ನಲ್ಲಿ 'ನಾನು ಅವಳು' ಚಿತ್ರದಲ್ಲಿನ ವಿಕ್ರಮ್ ರವರ ಫೋಟೋ ಶೂಟ್ ಅದ್ದೂರಿಯಾಗಿ ನಡೆಯಲಿದೆ. ಚಿತ್ರಕ್ಕೆ ನಾಗಶೇಖರ್ ಆಕ್ಷನ್ ಕಟ್ ಹೇಳಲಿದ್ದು, ಕನಕಪುರ ಶ್ರೀನಿವಾಸ್ ಬಂಡವಾಳ ಹಾಕಲಿದ್ದಾರೆ.