Don't Miss!
- News ಕಾಂಗ್ರೆಸ್ನಿಂದಲೇ 'ನೇಹಾ ಕೊಲೆ' ತನಿಖೆ ದಾರಿ ತಪ್ಪಿಸಲು ಯತ್ನ: ತಂದೆಯನ್ನೇ ಕೊಲ್ಲಲು ಹೋಗಿದ್ದ ಫಯಾಜ್: ನಿರಂಜನ್ ಹಿರೇಮಠ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಿಂದು ಧರ್ಮದೆಡೆಗೆ ತಾರೆ ಜೂಲಿಯಾ ರಾಬರ್ಟ್ಸ್
ಆಸ್ಕರ್ ಪ್ರಶಸ್ತಿ ಪುರಸ್ಕೃತ ಹಾಲಿವುಡ್ ನಟಿ ಜೂಲಿಯಾ ರಾಬರ್ಟ್ಸ್ ಹಿಂದು ಧರ್ಮದೆಡೆಗೆ ಒಲವು ತೋರಿಸಿದ್ದಾರೆ. ತಮ್ಮ ಮಕ್ಕಳನ್ನು ಭಾರತಕ್ಕೆ ಕರೆತಂದು ದೇವರಿಗೆ ಮುಡಿ ಕೊಡಿಸುವುದಾಗಿ Oprah.com ಅಂತರ್ಜಾಲ ತಾಣಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ತಾವು ಮತ್ತ್ತು ತಮ್ಮ ಮಕ್ಕಳು ಭಾರತದ ಬಗ್ಗೆ ಆಕರ್ಷಿತರಾಗಿದ್ದೇವೆ. ತಮ್ಮ ಮಗಳು ಹಜಲ್ ಹೇಳುವುದೇನೆಂದರೆ, ಅಮ್ಮ ನಾವು ದೊಡ್ದವರಾದ ಬಳಿಕ ಭಾರತದಲ್ಲೇ ಬದುಕೋಣ ಎನ್ನುತ್ತಾಳೆ ಎಂದು ತಿಳಿಸಿದ್ದಾರೆ. ಮಗ ಫಿನಾಸ್ ಈಗಾಗಲೆ ತಲೆ ಬೋಳಿಸಿಕೊಂಡಿದ್ದ. ಹಜಲ್ ಸಹ ತಲೆ ಬೋಳಿಸಿಕೊಳ್ಳಲು ನಿರ್ಧರಿಸಿದ್ದಾಳೆ.
ಭಾರತದಲ್ಲಿ ಮುಡಿ ಕೊಟ್ಟು ತಲೆ ಬೋಳಿಸಿಕೊಳ್ಳಲು ಹಜಲ್ ಆಸಕ್ತಿ ತೋರಿದ್ದಾಳೆ. ಪೂಜೆ ಪುನಸ್ಕಾರಗಳ ಬಗ್ಗೆಯೂ ಹಜಲ್ಗೆ ಸಾಕಷ್ಟು ಆಸಕ್ತಿ ಇದೆ. ಛಾಯಾಗ್ರಾಹಕ ಡೇನಿಯಲ್ ಮೋಡರ್ ಅವರನ್ನು ಮದುವೆಯಾದ ಬಳಿಕ ಜೂಲಿಯಾಗೆ ಮೂವರು ಮಕ್ಕಳು. ಹಜಲ್ ಮತ್ತು ಫಿನಾಸ್ ಐದು ವರ್ಷ ವಯಸ್ಸಿನ ಅವಳಿ ಜವಳಿಗಳು. ಹೆನ್ರಿಗೆ ಮೂರು ವರ್ಷ.
ತಮ್ಮ ಪತಿ ಮತ್ತು ಮಕ್ಕಳೊಂದಿಗೆ ಭಾರತಕ್ಕೆ ಭೇಟಿ ನೀಡಿ, ಯಾವುದಾದರೂ ದೇವಸ್ಥಾನದಲ್ಲಿ ಮುಡಿ ಸಮರ್ಪಿಸಲು ಸಿದ್ಧತೆ ನಡೆಸಿರುವುದಾಗಿ ಜೂಲಿಯಾ ತಿಳಿಸಿದ್ದಾರೆ. ಹಿಂದು ಧರ್ಮದ ಬಗ್ಗೆ ನನಗೆ ಅದೇನೋ ವ್ಯಾಮೋಹ. 1973ರಲ್ಲಿ ನಿಧನರಾದ ಹನುಮಂತನ ಪರಮಭಕ್ತರಾಗಿದ್ದ ಹಿಂದು ಗುರು ಕರೋಲಿ ಬಾಬಾ ಅವರ ಭಾವಚಿತ್ರವನ್ನು ನೋಡಿದ ಬಳಿಕ ತಮಗೆ ಹಿಂದು ಧರ್ಮದಲ್ಲಿ ಆಸಕ್ತಿ ಬಂದಿದೆ ಎಂದು ರಾಬರ್ಟ್ಸ್ ಯಾವುದೇ ಅಳುಕಿಲ್ಲದೆ ಹೇಳಿದ್ದಾರೆ.