Don't Miss!
- News karnataka Rain: ಕರ್ನಾಟಕದಲ್ಲಿ ಮುಂದಿನ ಮೂರು ದಿನ ದಾರಕಾರ ಮಳೆ: ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವರುಣನ ಅರ್ಭಟ!
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಧುನಿಕ ದ್ರೌಪದಿಯಾಗಿ ರಸಿಕರ ರಾಣಿ ಏಂಜಲಿನಾ
ಎವರ್ ಗ್ರೀನ್ ಮಹಾಕಾವ್ಯ ಮಹಾಭಾರತ ಸಾಕಷ್ಟು ಸಿನಿಮಾ ಕತೆಗಳಿಗೆ ಸ್ಫೂರ್ತಿಯಾಗಿದೆ. ಒಂದಿಲ್ಲೊಂದು ಭಾಷೆಯಲ್ಲಿ ಮಹಾಭಾರತದ ಕತೆಯಾಧಾರಿತ ಚಿತ್ರಗಳು ಬರುತ್ತಲೇ ಇವೆ. ಬಾಲಿವುಡ್ ನಲ್ಲಿ ಮಹಾಭಾರತಕ್ಕೆ ಸಂಬಂಧಿಸಿದ ಸಾಕಷ್ಟು ಚಿತ್ರಗಳು ಬಂದಾಗಿದೆ. ಇದೀಗ ಹಾಲಿವುಡ್ ಆಧುನಿಕ ದ್ರೌಪದಿ ಚಿತ್ರ ಸೆಟ್ಟೇರಲು ಸಿದ್ಧತೆ ನಡೆಸಿದೆ.
ಮಹಾಭಾರತದ ಅತಿಮುಖ್ಯ ಸ್ತ್ರೀ ಪಾತ್ರ ದ್ರೌಪದಿ. ಇಂತಹ ಪಾತ್ರವನ್ನು ಹಾಲಿವುಡ್ ಗೆ ಪರಿಚಯಿಸಬೇಕೆಂಬುದು ಬಾಲಿವುಡ್ ನಿರ್ದೇಶಕನ ಕನಸು. ಹಾಲಿವುಡ್ ನ ಕಲಾವಿರನ್ನು ಬಳಸಿಕೊಂಡು ಚಿತ್ರವನ್ನು ನಿರ್ಮಿಸಲಿದ್ದಾರೆ. 'ರಾಜ ನೀತಿ' ಚಿತ್ರದ ಯಶಸ್ಸಿನ ಸಂತಸದಲ್ಲಿರುವ ಪ್ರಕಾಶ್ ಜಾ ಈ ಆಧುನಿಕ ದ್ರೌಪದಿಯ ಸೂತ್ರಧಾರ. ದ್ರೌಪದಿಯಾಗಿ ಹಾಲಿವುಡ್ ತಾರೆ ಏಂಜಲಿನಾ ಜೋಲಿ ಕಾಣಿಸಲಿದ್ದಾರೆ.
"ಭಾರತ ನನಗೆ ಇಷ್ಟವಾದ ದೇಶ. ಪುರಾಣ ಕತೆಗಳಲ್ಲಿ ಅಭಿನಯಿಸಲು ಖುಷಿಯಾಗುತ್ತಿದೆ" ಎಂದು ಏಂಜಲಿನಾ ಪ್ರತಿಕ್ರಿಯಿಸಿದ್ದಾರೆ. ಈ ಚಿತ್ರಕ್ಕೆ ದ್ರೌಪದಿಯಾಗಿ ಮಾಧುರಿ ದೀಕ್ಷಿತ್ ಅಭಿನಯಿಸಬೇಕಾಗಿತ್ತು. ಆದರೆ ಚಿತ್ರ ಹಾಲಿವುಡ್ ನಲ್ಲಿ ನಿರ್ಮಾಣವಾಗುತ್ತಿರುವ ಕಾರಣ ತಾರಾಗಣವೂ ಬದಲಾಗಿ ಏಂಜಲಿನಾ ಜೋಲಿ ಆಯ್ಕೆಯಾಗಿದ್ದಾರೆ.