Don't Miss!
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಾಟ್ ಬೆಡಗಿ ಕಿಮ್ ಗೆ ಗನ್ ತೋರಿಸಿ ಬೆದರಿಸಿದ ಖದೀಮರು
ಸದಾ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಭಿನ್ನ-ವಿಭಿನ್ನ ಭಾವ-ಭಂಗಿ ಇರುವ ಫೋಟೋಗಳನ್ನು ಶೇರ್ ಮಾಡಿ, ಅಭಿಮಾನಿಗಳಿಗೆ ಶಾಕ್ ಟ್ರೀಟ್ ಮೆಂಟ್ ಕೊಡುತ್ತಿದ್ದ ಹಾಲಿವುಡ್ ನಟಿ ಕಮ್ ಮಾಡೆಲ್ ಕಿಮ್ ಕರ್ದಾಶಿಯನ್, ಸದ್ಯಕ್ಕೆ ಖುದ್ದು ಅವರೇ ಹೆದರಿ ಕಂಗಾಲಾಗುವ ಪರಿಸ್ಥಿತಿ ಬಂದೊದಗಿದೆ.
ಪೊಲೀಸ್ ವೇಷದಲ್ಲಿದ್ದ ಇಬ್ಬರು ಮುಸುಕುಧಾರಿಗಳು, ನಟಿ ಕಿಮ್ ಕರ್ದಾಶಿಯನ್ ಅವರಿಗೆ ಗನ್ ತೋರಿಸಿ ಬೆದರಿಸಿದ, ಪರಿಣಾಮ ಹಾಟ್ ಬೆಡಗಿ ಹೆದರಿ ಕಂಗಾಲಾಗಿದ್ದಾರೆ.[ಸಾಯೋವರೆಗೂ ನಗ್ನ ಸೆಲ್ಫಿ ಅಪ್ ಲೋಡ್ ಮಾಡುವೆ ಎಂದ ಕಿಮ್]
ಪ್ಯಾರಿಸ್ ನಲ್ಲಿ ನಡೆಯಲಿದ್ದ ಸಮಾರಂಭವೊಂದರಲ್ಲಿ ಭಾಗವಹಿಸಲು ಬಂದಿದ್ದ ನಟಿ ಕಮ್ ಮಾಡೆಲ್ ಕಿಮ್ ಕರ್ದಾಶಿಯನ್ ಗೆ ಇಂತಹ ಅಹಿತಕರ ಘಟನೆ ನಡೆದಿದೆ. ಮುಂದೆ ಓದಿ....
ಗನ್ ತೋರಿಸಿ ಬೆದರಿಕೆ
ಪ್ಯಾರಿಸ್ ನ ಹೋಟೆಲ್ ನಲ್ಲಿ ತಂಗಿದ್ದ ಕಿಮ್ ಕರ್ದಾಶಿಯನ್ ಅವರ ರೂಮ್ ಮೇಲೆ ಏಕಾಏಕಿ ಧಾಳಿ ಮಾಡಿದ ಇಬ್ಬರು ಮುಸುಕುಧಾರಿಗಳು, ಪಾಯಿಂಟ್ ಬ್ಲಾಕ್ ನಲ್ಲಿ ಗನ್ ತೋರಿಸಿ ಬೆದರಿಸಿದ್ದಾರೆ.[Father's dayಗೆ ಅಮ್ಮನಾದ ಕಿಮ್ ಕರ್ದಾಶಿಯನ್]
ಒಡವೆ ದೋಚಿದ ಖದೀಮರು
ಏಕಾಏಕಿ ಧಾಳಿಗೆ ತತ್ತರಿಸಿ ಹೋದ ಚೆಲುವೆ ಕಿಮ್ ಕರ್ದಾಶಿಯನ್ ಏನು ಮಾಡಬೇಕೆಂದು ತೋಚದೆ ಕಂಗಾಲಾಗಿದ್ದಾರೆ. ಇನ್ನು ಮುಸುಕುಧಾರಿಗಳು ಇವರ ಬಳಿ ಇದ್ದ ನಗದು ಮತ್ತು ಒಡವೆಗಳನ್ನು ದೋಚಿದ್ದು, ನಟಿ ಕಿಮ್ ಅವರಿಗೆ ಯಾವುದೇ ರೀತಿಯಲ್ಲಿ ಅವರು ಹಾನಿ ಮಾಡಿಲ್ಲ ಎನ್ನಲಾಗುತ್ತಿದೆ.[ದಿನಕ್ಕೆರಡು ಮೂರು ಸಲ ರತಿಲೀಲೆ ತೇಲುತ್ತಿರುವ ತಾರೆ]
ಕಾರ್ಯಕ್ರಮ ಮೊಟಕುಗೊಳಿಸಿದ ಕಿಮ್
ಈ ಘಟನೆಯಿಂದ ಭಯಗೊಂಡ ನಟಿ ಕಮ್ ಮಾಡೆಲ್ ಕಿಮ್ ಕರ್ದಾಶಿಯನ್ ಅವರು ತಮ್ಮ ಪ್ಯಾರಿಸ್ ಕಾರ್ಯಕ್ರಮಕ್ಕೆ ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ.
ಪತ್ನಿಯ ಸಹಾಯಕ್ಕೆ ಧಾವಿಸಿ ಬಂದ ಪತಿ
ಮಾತ್ರವಲ್ಲದೇ ವಿಷಯ ತಿಳಿದ ಕಿಮ್ ಅವರ ಪತಿ ಕಾನ್ಯೆ ವೆಸ್ಟ್ ಅವರು ಕೂಡ ನ್ಯೂಯಾರ್ಕ್ ಹಮ್ಮಿಕೊಂಡಿದ್ದ ಆರ್ಟ್ ಮತ್ತು ಮ್ಯೂಸಿಕ್ ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಿ, 'ಕೌಟುಂಬಿಕ ಸಮಸ್ಯೆಯಾದ ಪರಿಣಾಮ ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಬೇಕಾಗಿದೆ' ಎಂದು ಹೇಳಿ ಪತ್ನಿ ಬಳಿ ಧಾವಿಸಿ ಬಂದಿದ್ದಾರೆ.