Don't Miss!
- News Heavy Rain: ಸಕ್ಕರೆ ನಾಡಿನಲ್ಲಿ ವರ್ಷದ ಮೊದಲ ಮಳೆ: ಧರೆಗುರುಳಿದ ಮರ, ಕಮಾನುಗಳು
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Sports PBKS vs MI IPL 2024: ಸೂರ್ಯಕುಮಾರ್ ಶೈನಿಂಗ್; ಪಂಜಾಬ್ಗೆ ಸವಾಲಿನ ಗುರಿ ನೀಡಿದ ಮುಂಬೈ
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ಹೇಮಾ ಕಾಲಿಗೆ ನಮಸ್ಕಾರ ಮಾಡಿದ್ದರು ರಾಜ್ ಕುಮಾರ್!
Recommended Video
ವರನಟ ಡಾ ರಾಜ್ ಕುಮಾರ್ ಸರಳತೆಯ ಸಾಹುಕಾರ. ಈಗಾಗಲೇ ಅನೇಕರು ರಾಜ್ ಕುಮಾರ್ ಸರಳತೆ ಬಗ್ಗೆ ಮಾತನಾಡಿದ್ದಾರೆ. ರಾಜ್ ಅವರ ಸರಳತೆಯನ್ನು ಕಣ್ಣಾರೆ ಕಂಡ ನಟಿ ಇದೀಗ ಆ ವಿಷಯವನ್ನು ಹಂಚಿಕೊಂಡಿದ್ದಾರೆ.
'ಅಮೇರಿಕಾ ಅಮೇರಿಕಾ' ಖ್ಯಾತಿಯ ನಟಿ ಹೇಮಾ ಪ್ರಭಾತ್ 'ಫಿಲ್ಮಿಬೀಟ್ ಕನ್ನಡ' ಸಂದರ್ಶನದಲ್ಲಿ ಅನೇಕ ಕುತೂಹಲಕಾರಿ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿಯೂ ರಾಜ್ ಕುಮಾರ್ ಸಿನಿಮಾದಲ್ಲಿ ನಟಿಸುವಾಗ ಆದ ಒಂದು ಘಟನೆಯನ್ನು ತಿಳಿಸಿದ್ದಾರೆ.
ಈ ಕಾರಣಕ್ಕಾಗಿ ರಜನಿಕಾಂತ್ ಚಿತ್ರ ತಿರಸ್ಕರಿಸಿದ್ದರು 'ಅಮೆರಿಕಾ ಅಮೆರಿಕಾ' ನಟಿ ಹೇಮಾ!
'ಜೀವನ ಚೈತ್ರ' ಸಿನಿಮಾದಲ್ಲಿ ರಾಜ್ ಕುಮಾರ್ ರೊಂದಿಗೆ ನಟಿಸುವ ಅದೃಷ್ಟ ಹೇಮಾರಿಗೆ ಸಿಕ್ಕಿತ್ತು. ಈ ಚಿತ್ರದ ಚಿತ್ರೀಕರಣದ ವೇಳೆ ನಡೆದ ಈ ಘಟನೆಯನ್ನು ಹೇಮ ತಮ್ಮ ಜೀವನದಲ್ಲಿ ಮರೆಯುವುದಿಲ್ಲ.
ಹೇಮ ಸಿನಿಮಾ ಎಂಟ್ರಿಗೆ ಕಾರಣ ರಾಜ್ ಕುಮಾರ್
ರಾಜ್ ಕುಮಾರ್ ರಿಗೆ ಹೇಮಾ ಕುಟುಂಬದ ತುಂಬ ವರ್ಷಗಳಿಂದ ಪರಿಚಯ ಇತ್ತು. ಹೇಮ ಚಿಕ್ಕ ವಯಸ್ಸಿನ ಹುಡುಗಿ ಆಗಿದ್ದಾಗಿನಿಂದ ಅವರನ್ನು ರಾಜ್ ಕುಮಾರ್ ನೋಡಿಕೊಂಡು ಬಂದಿದ್ದರು. ಅಲ್ಲದೆ ಹೇಮಾ ಸಿನಿಮಾ ಎಂಟ್ರಿಗೆ ಸಹ ಅವರೇ ಕಾರಣರಾದರು. ನೃತ್ಯ, ನಾಟಕದಲ್ಲಿ ಇದ್ದ ಹೇಮಾ 'ಜೀವನ ಚೈತ್ರ' ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡುವ ಮೂಲಕ ಚಿತ್ರರಂಗಕ್ಕೆ ಬಂದರು.
ಹೇಮಾ ಕಾಲಿಗೆ ರಾಜ್ ನಮಸ್ಕಾರ
'ಜೀವನ ಚೈತ್ರ' ಸಿನಿಮಾದ 'ನಾದ ಮಯ..' ಹಾಡಿನಲ್ಲಿ ಸರಸ್ವತಿ ಪಾತ್ರದಲ್ಲಿ ಹೇಮ ಕಾಣಿಸಿಕೊಂಡಿದ್ದರು. ಸರಸ್ವತಿ ವೇಷ ತೊಟ್ಟು ವೀಣೆ ಹಿಡಿದು ಹೇಮ ಕುಳಿತಿದ್ದರು. ಆ ವೇಳೆ ರಾಜ್ ಕುಮಾರ್ ಹೇಮಾ ಕಾಲಿಗೆ ನಮಸ್ಕಾರ ಮಾಡಿದರು. ಆ ಕ್ಷಣ ಹೇಮಾಗೆ ಏನು ಮಾಡುವುದು ತಿಳಿಯಲಿಲ್ಲ, ಆಗ ತಕ್ಷಣ ತಾವು ಕೂಡ ರಾಜ್ ಕುಮಾರ್ ಕಾಲಿಗೆ ಬಿದ್ದರು.
ಸರಸ್ವತಿ ಪಾತ್ರ
ತನ್ನ ಕಾಲಿಗೆ ನಮಸ್ಕಾರ ಮಾಡಿದ ಹೇಮಾರನ್ನು ರಾಜ್ ಕುಮಾರ್ ಮೇಲೆ ಎತ್ತಿದ್ದರು. ನೀನು ಯಾರ ಕಾಲಿಗೂ ನಮಸ್ಕಾರ ಮಾಡಬಾರದು. ನೀನು ಸರಸ್ವತಿ ಪಾತ್ರ ಮಾಡುತ್ತಿದ್ದೀಯಾ. ಆ ಪಾತ್ರಕ್ಕೆ ಬೆಲೆ ನೀಡಬೇಕು. ನಿನ್ನ ಮನಸ್ಸಿನ ಒಳಗೆ ನೀನೆ ಸರಸ್ವತಿ ಎಂದುಕೊಳ್ಳಬೇಕು ಎಂದು ಹೇಳಿದರು. ನಾನು ನಮಸ್ಕಾರ ಮಾಡಿದ್ದು ಸರಸ್ವತಿಗೆ ಎಂದರು.
ಪಾತ್ರದ ಮಹತ್ವ ತಿಳಿದ ಹೇಮಾ
ರಾಜ್ ಕುಮಾರ್ ತಮ್ಮ ಕಾಲಿಗೆ ನಮಸ್ಕಾರ ಮಾಡಿದಾಗ ಹೇಮಾ ನಡುಗಿರು. ಆದರೆ, ಆ ನಂತರ ಅದರ ಕಾರಣವನ್ನು ರಾಜ್ ಕುಮಾರ್ ತಿಳಿಸಿದರು. ಆ ನಂತರ ಒಂದು ಪಾತ್ರದ ಮಹತ್ವವನ್ನು ಹೇಮ ಅರ್ಥ ಮಾಡಿಕೊಂಡರಂತೆ. ಪಾತ್ರ ಎಂದರೆ ನಾವು ಧರಿಸುವ ಬಟ್ಟೆಯಲ್ಲ.. ಅದು ನಮ್ಮ ಮನಸ್ಸಿನ ಒಳಗೂ ಇರಬೇಕು ಎಂದು ತಿಳಿದರಂತೆ.