Don't Miss!
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- News ಪೂಜೆ ಮಾಡಿದ ಈ ಲಿಂಬೆಹಣ್ಣು ಲಕ್ಷಕ್ಕೆ ಹರಾಜ್! ಶಾಕ್ ಆಡ್ಬೇಡಿ ಇದು ನಿಜ...
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಕಲಕಲಾವಲ್ಲಭೆ ಗಾಯಕಿ ಅನನ್ಯಭಟ್
Recommended Video
ಅನನ್ಯ ಭಟ್.. ಈ ಹೆಸರು ಸದ್ಯ ಕನ್ನಡ ಸಂಗೀತ ಲೋಕದಲ್ಲಿ ಚಿರಪರಿಚಿತ. 'ಲೂಸಿಯಾ' ಸಿನಿಮಾದ "ನೀ ತೊರೆದ ಗಳಿಗೆಯಲ್ಲಿ.. ನನ್ನೆದೆಯ ತುಂಬಾ ನಿನ್ನ ಗುರುತು" ಎಂದು ಹಾಡಿ ಸಂಗೀತ ಪ್ರಿಯರ ಮನಸ್ಸು ಕದ್ದ ಗಾಯಕಿ. ಇತ್ತೀಚಿಗಷ್ಟೆ 'ಟಗರು' ಚಿತ್ರದಲ್ಲಿ ಮೆಂಟಲ್ ಹೋ ಜಾವ.. ಹಾಗೂ ಹೋಲ್ಡ್ ಆನ್, ಹೋಲ್ಡ್ ಆನ್ ಅಂತ ಹಾಡಿದ್ದ ಸಿಂಗರ್ ಅನನ್ಯ ಭಟ್ ಕೇವಲ ಸಂಗೀತ ಕ್ಷೇತ್ರದಲ್ಲಿ ಮಾತ್ರವಲ್ಲದೆ ಬೇರೆ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದಾರೆ.
ಉತ್ತಮ ಸಿಂಗರ್ ಆಗೋದಕ್ಕೆ ಶ್ರದ್ಧೆ ಬೇಕು, ಪ್ರತಿ ನಿತ್ಯ ಸಂಗೀತ ಅಭ್ಯಾಸ ಮಾಡಬೇಕು ಎಂದು ಹೇಳುವ ಅನನ್ಯ ಅವರಿಗೆ ಫ್ಯಾಷನ್ ಡಿಸೈನಿಂಗ್ ಬಗ್ಗೆ ಹೆಚ್ಚು ಒಲವಿತ್ತಂತೆ. ಸದ್ಯ ಗಾಯಕಿ ಆಗಿರುವ ಅನನ್ಯ ತಮ್ಮ ಡ್ರಸ್ ಗಳನ್ನ ತಾವೇ ಡಿಸೈನ್ ಮಾಡಿಕೊಳ್ಳುತ್ತಾರೆ ಎನ್ನುವುದು ಅವರು ಕಾರ್ಯಕ್ರಮಗಳಿಗೆ ಧರಿಸುವ ಔಟ್ ಫಿಟ್ ನೋಡಿದರೆ ತಿಳಿಯುತ್ತೆ.
ಸಂದರ್ಶನದ ನಡುವೆ ರಘು ದೀಕ್ಷಿತ್ ಹಾಡಿದ ಹಾಡು ಕೇಳಿ
ಇದರ ಜೊತೆಯಲ್ಲಿ ಆಯುರ್ವೇದದ ಬಗ್ಗೆಯೂ ಕೊಂಚ ತಿಳಿದುಕೊಂಡಿರುವ ಅನನ್ಯ ಸ್ನೇಹಿತರಿಗೆ ಆರೋಗ್ಯ ಕೆಟ್ಟಾಗ ಅಥವಾ ಅವರ ಆರೋಗ್ಯವನ್ನು ಕಾಪಾಡಲು ತಮ್ಮ ಆಯುರ್ವೇದ ಚಿಕಿತ್ಸೆಯಿಂದ ಸಹಾಯ ಮಾಡುತ್ತಾರಂತೆ.
ಇತ್ತೀಚಿನ ದಿನಗಳಲ್ಲಿ ಕಮರ್ಷಿಯಲ್ ಸಿನಿಮಾಗಳಿಗೆ ಹೆಚ್ಚಾಗಿ ಹಾಡುತ್ತಿರುವ ಅನನ್ಯ ಭಟ್ ಮೂಲತಃ ಮೈಸೂರಿನವರು. ನಾಗತಿಹಳ್ಳಿ ಚಂದ್ರಶೇಖರ್ ಅವರ ಚಿತ್ರಕ್ಕೆ ಮೊದಲ ಧ್ವನಿ ನೀಡದ ಅನನ್ಯ ಸಾಕಷ್ಟು ಏಳು ಬೀಳುಗಳನ್ನು ಎದುರಿಸಿಕೊಂಡು ನಂತರ ಚಿತ್ರರಂಗದಲ್ಲಿ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.