Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಕಲಕಲಾವಲ್ಲಭೆ ಗಾಯಕಿ ಅನನ್ಯಭಟ್
Recommended Video
ಅನನ್ಯ ಭಟ್.. ಈ ಹೆಸರು ಸದ್ಯ ಕನ್ನಡ ಸಂಗೀತ ಲೋಕದಲ್ಲಿ ಚಿರಪರಿಚಿತ. 'ಲೂಸಿಯಾ' ಸಿನಿಮಾದ "ನೀ ತೊರೆದ ಗಳಿಗೆಯಲ್ಲಿ.. ನನ್ನೆದೆಯ ತುಂಬಾ ನಿನ್ನ ಗುರುತು" ಎಂದು ಹಾಡಿ ಸಂಗೀತ ಪ್ರಿಯರ ಮನಸ್ಸು ಕದ್ದ ಗಾಯಕಿ. ಇತ್ತೀಚಿಗಷ್ಟೆ 'ಟಗರು' ಚಿತ್ರದಲ್ಲಿ ಮೆಂಟಲ್ ಹೋ ಜಾವ.. ಹಾಗೂ ಹೋಲ್ಡ್ ಆನ್, ಹೋಲ್ಡ್ ಆನ್ ಅಂತ ಹಾಡಿದ್ದ ಸಿಂಗರ್ ಅನನ್ಯ ಭಟ್ ಕೇವಲ ಸಂಗೀತ ಕ್ಷೇತ್ರದಲ್ಲಿ ಮಾತ್ರವಲ್ಲದೆ ಬೇರೆ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದಾರೆ.
ಉತ್ತಮ ಸಿಂಗರ್ ಆಗೋದಕ್ಕೆ ಶ್ರದ್ಧೆ ಬೇಕು, ಪ್ರತಿ ನಿತ್ಯ ಸಂಗೀತ ಅಭ್ಯಾಸ ಮಾಡಬೇಕು ಎಂದು ಹೇಳುವ ಅನನ್ಯ ಅವರಿಗೆ ಫ್ಯಾಷನ್ ಡಿಸೈನಿಂಗ್ ಬಗ್ಗೆ ಹೆಚ್ಚು ಒಲವಿತ್ತಂತೆ. ಸದ್ಯ ಗಾಯಕಿ ಆಗಿರುವ ಅನನ್ಯ ತಮ್ಮ ಡ್ರಸ್ ಗಳನ್ನ ತಾವೇ ಡಿಸೈನ್ ಮಾಡಿಕೊಳ್ಳುತ್ತಾರೆ ಎನ್ನುವುದು ಅವರು ಕಾರ್ಯಕ್ರಮಗಳಿಗೆ ಧರಿಸುವ ಔಟ್ ಫಿಟ್ ನೋಡಿದರೆ ತಿಳಿಯುತ್ತೆ.
ಸಂದರ್ಶನದ ನಡುವೆ ರಘು ದೀಕ್ಷಿತ್ ಹಾಡಿದ ಹಾಡು ಕೇಳಿ
ಇದರ ಜೊತೆಯಲ್ಲಿ ಆಯುರ್ವೇದದ ಬಗ್ಗೆಯೂ ಕೊಂಚ ತಿಳಿದುಕೊಂಡಿರುವ ಅನನ್ಯ ಸ್ನೇಹಿತರಿಗೆ ಆರೋಗ್ಯ ಕೆಟ್ಟಾಗ ಅಥವಾ ಅವರ ಆರೋಗ್ಯವನ್ನು ಕಾಪಾಡಲು ತಮ್ಮ ಆಯುರ್ವೇದ ಚಿಕಿತ್ಸೆಯಿಂದ ಸಹಾಯ ಮಾಡುತ್ತಾರಂತೆ.
ಇತ್ತೀಚಿನ ದಿನಗಳಲ್ಲಿ ಕಮರ್ಷಿಯಲ್ ಸಿನಿಮಾಗಳಿಗೆ ಹೆಚ್ಚಾಗಿ ಹಾಡುತ್ತಿರುವ ಅನನ್ಯ ಭಟ್ ಮೂಲತಃ ಮೈಸೂರಿನವರು. ನಾಗತಿಹಳ್ಳಿ ಚಂದ್ರಶೇಖರ್ ಅವರ ಚಿತ್ರಕ್ಕೆ ಮೊದಲ ಧ್ವನಿ ನೀಡದ ಅನನ್ಯ ಸಾಕಷ್ಟು ಏಳು ಬೀಳುಗಳನ್ನು ಎದುರಿಸಿಕೊಂಡು ನಂತರ ಚಿತ್ರರಂಗದಲ್ಲಿ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.