ಸಂದರ್ಶನ: ಮುದ್ದು ಮನಸೇ ಸ್ವರ ಸಂಯೋಜಕ ವಿನೀತ್
''ಮುದ್ದು ಮನಸೇ" ಹೆಸರೇ ಹೇಳುವಂತೆ ಒಂದು ಮುದ್ದಾದ ತ್ರಿಕೋನ ಪ್ರೇಮಕಥಾ ಹಂದರವುಳ್ಳ ಕನ್ನಡ ಚಿತ್ರ ಇದೇ ಶುಕ್ರವಾರ (ಆಗಸ್ಟ್ 28) ವರ ಮಹಾಲಕ್ಷ್ಮಿ ಹಬ್ಬದಂದು ರಾಜ್ಯಾದ್ಯಂತ ಸುಮಾರು ೧೫೦ ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ಇನ್ನೂ ಇಡೀ ಚಿತ್ರ ತಂಡ ಫಿಲ್ಮೀ ಬೀಟ್ ಜೊತೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರ. ಇದೀಗ ಚಿತ್ರದ ಸಂಗೀತ ನಿರ್ದೇಶಕ ವಿನೀತ್ ಜೊತೆ ಮಾಡಿರುವ ಸಂದರ್ಶನ ನಿಮಗಾಗಿ.['ಮುದ್ದು ಮನಸೇ' ಅರು ಗೌಡ ಮನದಾಳದ ಮಾತು]
ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಸಂಗೀತ ನಿರ್ದೇಶಕ ವಿನೀತ್ ರಾಜ್ ಮೆನನ್ ಸಂಯೋಜಿಸಿರುವ ಹಾಡುಗಳಿಗೆ ಕನ್ನಡದ ಆರು ಪ್ರತಿಭಾನ್ವಿತ ನಿರ್ದೇಶಕರು ಒಂದೊಂದು ಹಾಡಿಗೆ ಪದ ಪೋಣಿಸಿರುವುದು ಅದರಲ್ಲಿ ಯೋಗರಾಜ್ ಭಟ್ ( ನೀವು ಹೇಳಬಾರದು ನಾವು ಕೇಳಬಾರದು ) , ಶಶಾಂಕ್ ( ತಿಂತಾಳೆ ತಿಂತಾಳೆ ) ವಿ . ನಾಗೇಂದ್ರ ಪ್ರಸಾದ್ ( ಎದೆಯೋಳ್ ಯಾರೋ ) , ಸಿಂಪಲ್ ಸುನಿ ( ಮೀಸೆ ಚಿಗುರು ) ಅಲೆಮಾರಿ ಸಂತು ( ದೂರದೊಂದು ) ಎ.ಪಿ. ಅರ್ಜುನ್ ( ಹಾಗೋ ಹೀಗೋ ) ಹೀಗೆ ಹೊಸಬರ ಚಿತ್ರಕ್ಕೆ ಈ ನಿರ್ದೇಶಕರು ತಮ್ಮ ಸಾಹಿತ್ಯ ಮೂಲಕ ಪ್ರೋತ್ಸಾಹಿಸಿದ್ದಾರೆ.
'ಮುದ್ದಾದ ಮನಸ್ಸುಗಳಿಗೆ ಸುಂದರವಾದ ಹಾಡುಗಳನ್ನು ಪೋಣಿಸಿರುವ ಸಂಗೀತ ನಿರ್ದೇಶಕ ವಿನೀತ್ ರಾಜ್ ಮೆನನ್ ಅವರು ಫಿಲ್ಮಿಬೀಟ್ ಜೊತೆ ಕೆಲಕಾಲ ಹರಟಿದ್ದಾರೆ. ಮ್ಯೂಸಿಕ್ ಕಂಪೋಸರ್ ವಿನೀತ್ ಚಿಟ್ ಚಾಟ್ ನೋಡಲು ಈ ವಿಡಿಯೋ ನೋಡಿ


Click it and Unblock the Notifications












