Don't Miss!
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒಂದು ಹಾಡಿಗೆ ಗಾಯಕಿ ಅನನ್ಯ ಭಟ್ ಪಡೆಯುವ ಸಂಭಾವನೆ ಎಷ್ಟು.?
ಸ್ಯಾಂಡಲ್ ವುಡ್ ನಲ್ಲಿ ಮಾತ್ರ ಅಲ್ಲದೇ, ಕಾಲಿವುಡ್ ಹಾಗೂ ಟಾಲಿವುಡ್ ನಲ್ಲಿಯೂ ತಮ್ಮ ಪ್ರತಿಭೆಯಿಂದ ಗುರುತಿಸಿಕೊಳ್ಳುತ್ತಿರುವ ಗಾಯಕಿ ಅನನ್ಯ ಭಟ್.
ಸೂಪರ್ ಹಿಟ್ 'ಟಗರು' ಸಿನಿಮಾದ 'ಮೆಂಟಲ್ ಹೋ ಜಾವಾ...' ಸೇರಿದಂತೆ ಹಲವು ಹಾಡುಗಳಿಗೆ ದನಿಯಾಗಿರುವ ಅನನ್ಯ ಭಟ್ ಒಂದು ಹಾಡಿಗೆ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ.?
ಕನ್ನಡದಲ್ಲಿ ಬಹು ಬೇಡಿಕೆ ಹೊಂದಿರುವ ಗಾಯಕಿ ಅನನ್ಯ ಭಟ್ ಸಂಭಾವನೆ ಎಷ್ಟು ಅಂತ ಕೇಳಿದ್ರೆ, ಆಕೆ ಕೊಡುವ ಉತ್ತರ ''ದುಡ್ಡು ಮಾಡಬೇಕು ಎಂಬುದು ನನ್ನ ಉದ್ದೇಶ ಅಲ್ಲ. ಒಳ್ಳೆಯ ಮ್ಯೂಸಿಕ್ ಗೆ ನಾನು ದನಿಯಾದರೆ ಸಾಕು''.
ಹೌದು, ಗಾಯಕಿ ಅನನ್ಯ ಭಟ್ ಗೆ ಹಣಕ್ಕಿಂತ ಗಾಯನವೇ ಮುಖ್ಯ. ಹಾಗಂತ ಅವರೇ ನಿಮ್ಮ 'ಫಿಲ್ಮಿಬೀಟ್ ಕನ್ನಡ'ದ 'ಸಖತ್ ಶುಕ್ರವಾರ' ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಸುಮಧುರ ಹಾಡುಗಳಿಗೆ ದನಿಯಾಗಬೇಕು ಎಂಬ ಇಚ್ಛೆ ಹೊಂದಿರುವ ಅನನ್ಯ ಭಟ್ ಗೆ ರಾಜು ಅನಂತಸ್ವಾಮಿ ಅವರೇ ಸ್ಫೂರ್ತಿ. ರಾಜು ಅನಂತಸ್ವಾಮಿ ಗರಡಿಯಲ್ಲಿ ಪಳಗಿದ ಅನನ್ಯ ಭಟ್, ಎ.ಪಿ.ಜೆ.ಅಬ್ದುಲ್ ಕಲಾಂ ಪಕ್ಕದಲ್ಲಿ ನಿಂತು ಹಾಡಿದ ಅನುಭವವನ್ನೂ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ಗಾಯನದ ಜೊತೆಗೆ ಅನನ್ಯ ಭಟ್ ಫ್ಯಾಶನ್ ಡಿಸೈನರ್ ಹಾಗೂ ಆಯುರ್ವೇದಿಕ್ ಡಾಕ್ಟರ್ ಕೂಡ ಹೌದು. 'ಸಖತ್ ಶುಕ್ರವಾರ' ಕಾರ್ಯಕ್ರಮಕ್ಕಾಗಿ ಅನನ್ಯ ಭಟ್ ನೀಡಿರುವ ಸಂದರ್ಶನದ ಎರಡನೇ ಭಾಗ ಇಲ್ಲಿದೆ, ನೋಡಿರಿ...