Don't Miss!
- News ಲೋಕಸಭಾ ಚುನಾವಣೆ 2024: ಮತದಾನಕ್ಕೆ ಸಕಲ ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
- Sports IPL 2024: ಸೋತು ಸುಣ್ಣವಾದರೂ ಪಾರ್ಟಿ ಮಾಡಿದ ಆರ್ಸಿಬಿ ಪ್ಲೇಯರ್ಸ್; ಕೊಹ್ಲಿ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್
- Automobiles Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ಟಂಟ್ ಮ್ಯಾನ್ ಗಳ ಕಣ್ಣೀರ ಕಥೆ ಹೇಳಿದ್ದ ಹಂಸ
ಟಿವಿಯಲ್ಲಿ ರಿಯಾಲಿಟಿ ಶೋ ನೋಡುವ ಅಪ್ಪ ಅಮ್ಮನಿಗೆ ತನ್ನ ಮಗ - ಮಗಳು ಈ ರೀತಿಯ ಕಾರ್ಯಕ್ರಮಕ್ಕೆ ಹೋಗಬೇಕು ಎನ್ನುವ ಆಸೆ ಇರುತ್ತದೆ. ಅಂತಹ ಆಸೆಯನ್ನು ಹಂಸ ಈಡೇರಿಸಿದ್ದಾಳೆ.
ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮ ನೋಡಿ ತನ್ನ ಮಗಳು ಅಂತಹ ಕಾರ್ಯಕ್ರಮಕ್ಕೆ ಹೋಗಬೇಕು ಎಂದು ಹಂಸ ಅವರ ತಾಯಿ ಕನಸು ಇಟ್ಟುಕೊಂಡಿದ್ದರು. ಅದೇ ವಾಹಿನಿಯ 'ಕನ್ನಡದ ಕಣ್ಮಣಿ' ಕಾರ್ಯಕ್ರಮಕ್ಕೆ ಆಯ್ಕೆ ಆಗುವ ಮೂಲಕ ಹಂಸ ಆ ಕನಸನ್ನು ನನಸು ಮಾಡಿದ್ದಾಳೆ.
ವೈರಲ್ ಮಾಡೋದಲ್ಲ, ಗಿಡ ನೆಟ್ಟರೆ ನಂಗೆ ಖುಷಿಯಾಗುತ್ತೆ - ನಿನಾದ್
ಶಾಲೆಯಲ್ಲಿ ಹಂಸ ಚೆನ್ನಾಗಿ ಮಾತನಾಡುತ್ತಾಳೆ ಎಂದು ಈ ಕಾರ್ಯಕ್ರಮದ ಆಡಿಷನ್ ನಲ್ಲಿ ಭಾಗಿಯಾಗಲು ಅವರ ಶಿಕ್ಷಕರು ಹೇಳಿದರು. ಆ ರೀತಿ ಕಾರ್ಯಕ್ರಮಕ್ಕೆ ಆಗಮಿಸಿದ ಹಂಸ ಇಂದು ಅಂತಿಮ ಹಂತಕ್ಕೆ ಬಂದು ನಿಂತಿದ್ದಾರೆ.
ಯಾವುದೇ ವಿಷಯ ನೀಡಿದರು ತನ್ನ ತನದ ಮೂಲಕ ಹಂಸ ಅದನ್ನು ವೇದಿಕೆ ಮೇಲೆ ನಿಂತು ಮಾತನಾಡುತ್ತಾಳೆ. ಈ ರೀತಿ ಕಾರ್ಯಕ್ರಮದ ಮೂಲಕ ತಮ್ಮ ಆತ್ಮ ವಿಶ್ವಾಸ ಹೆಚ್ಚಾಗಿದೆ ಎನ್ನುತ್ತಾರೆ ಹಂಸ.
ಟ್ರೋಫಿ ಗೆಲ್ಲದೆ ಬುಟ್ಬುತ್ತಿವಾ..! ಅಂದಿದ್ದಾರೆ 'ಕನ್ನಡದ ಕಣ್ಮಣಿ' ಸಂಹಿತಾ
ಹಂಸ ಈವರೆಗೆ, ಖಾಸಗಿ ಶಾಲೆ ಶಿಕ್ಷಣ ವ್ಯಾಪಾರಿಕರಣ, ಹೆಣ್ಮಕ್ಳೆ ಬೆಸ್ಟ್, ಇಂದಿನ ಧಾರಾವಾಹಿ, ವಿಜ್ಞಾನ ಒಳ್ಳೆಯದೇ ಕೆಟ್ಟದೆ, ಆಸೆಯೇ ದುಃಖಕ್ಕೆ ಮೂಲ, ಸ್ಟಂಟ್ ಮ್ಯಾನ್ ಈ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಸ್ಟಂಟ್ ಮ್ಯಾನ್ ಕಷ್ಟಗಳ ಬಗ್ಗೆ ಮಾತನಾಡಿದ್ದ ಸಂಚಿಕೆ ಹಂಸಗೆ ದೊಡ್ಡ ಹೆಸರು ತಂದುಕೊಟ್ಟಿದೆ.
ಹಂಸ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಅವರ ಅಪ್ಪ ಅಮ್ಮನಿಗೂ ಬಹಳ ಖುಷಿ ನೀಡಿದೆಯಂತೆ. ಅಪ್ಪ ಎಷ್ಟೋ ಬಾರಿ ಆಫೀಸ್ ಗೆ ರಜೆ ಹಾಕಿ ಕಾರ್ಯಕ್ರಮಕ್ಕೆ ಬರುತ್ತಾರಂತೆ. ಫೈನಲ್ ನಲ್ಲಿ ತುಂಬ ದೊಡ್ಡ ಸ್ಪರ್ಥೆ ಇದ್ದು, ಗೆಲ್ಲುವ ನಂಬಿಕೆ ಇದೆ ಎಂದರು ಹಂಸ.