Don't Miss!
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- News ಮಳೆ.. ಮಳೆ.. ಅಲ್ಲಲ್ಲ ಮುಂದಿನ 1 ವಾರ ಬೆಂಗಳೂರಲ್ಲಿ ಭಾರಿ ಬಿಸಿಲು!
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Sports CSK vs LSG IPL 2024: ಚೆನ್ನೈ vs ಲಕ್ನೋ ಹೈ-ವೋಲ್ಟೇಜ್ ಪಂದ್ಯದ ಟಾಸ್ ವರದಿ; ಆಡುವ 11ರ ಬಳಗ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವೈರಲ್ ಮಾಡೋದಲ್ಲ, ಗಿಡ ನೆಟ್ಟರೆ ನಂಗೆ ಖುಷಿಯಾಗುತ್ತೆ - ನಿನಾದ್
''ನಾನು ಕಾಡಿನ ಬಗ್ಗೆ ಮಾತನಾಡಿದ ವಿಡಿಯೋ ವೈರಲ್ ಆದ್ರೆ, ಅದಕ್ಕೆ ಲೈಕ್ ಬಂದ್ರೆ, ಏನು ಪ್ರಯೋಜನ?. ಆ ವಿಡಿಯೋ ನೋಡಿ ಯಾರಾದರೂ ಬದಲಾದರೇ ನನಗೆ ಖುಷಿ ಆಗುತ್ತದೆ.'' ಎಂದು ನಿನಾದ್ ತನ್ನ ಮಾತುಗಳ ಮೂಲಕವೇ ಮನಸ್ಸು ಗೆದ್ದ ಹುಡುಗ.
ನಿನಾದ್ ಚಿತ್ರದುರ್ಗದ ಮಾತಿನ ಚತುರ. ಯಾವುದೇ ವಿಷಯ ನೀಡಿದರೂ ತುಂಬ ಚೆನ್ನಾಗಿ ಮಾತನಾಡುತ್ತಾನೆ. ತನ್ನ ಮಾತುಗಳ ಮೂಲಕ ಕರ್ನಾಟಕಕ್ಕೆ ಸಂದೇಶ ನೀಡುತ್ತಾನೆ. ''ನಮ್ಮ ಟ್ಯಾಲೆಂಟ್ ನೋಡಿ ಬೇರೆಯವರು ಚೆನ್ನಾಗಿ ಮಾಡುತ್ತೀಯಾ ಎಂದಾಗ ಖುಷಿ, ಹೆಮ್ಮೆ'' ಆಗುತ್ತದೆ ಅಂತ್ತಾನೆ ನಿನಾದ್.
'ಡ್ರಾಮಾ ಜೂನಿಯರ್'ನಲ್ಲಿ ಫೇಲ್, 'ಕನ್ನಡದ ಕಣ್ಮಣಿ'ಯಲ್ಲಿ ಫೈನಲಿಸ್ಟ್
ನಿನಾದ್ ಒಂದು ಸಂಚಿಕೆಯಲ್ಲಿ ಕಾಡಿನ ಬಗ್ಗೆ ಮಾತನಾಡಿದ್ದ. ಆ ಸಂಚಿಕೆ ಆತನಿಗೆ ಒಳ್ಳೆಯ ಹೆಸರು ನೀಡಿತ್ತು. ಈ ಬಗ್ಗೆ ಕೇಳಿದ್ದರೆ ನಿನಾದ್ ''ನನ್ನ ವಿಡಿಯೋ ವೈರಲ್ ಆಗುವುದಕ್ಕಿಂತ ಗಿಡ ನೆಟ್ಟರೆ ನನಗೆ ಖುಷಿ ಆಗುತ್ತದೆ'' ಎನ್ನುತ್ತಾನೆ.
'ಕನ್ನಡದ ಕಣ್ಮಣಿ' ಕಾರ್ಯಕ್ರಮದ ಮಣ್ಣಿನ ಮಗ ಈ ಪವನ್
ರಾಜಕಾರಣಿಗಳು ನೀಡುವ ಸಮಸ್ಯೆ, ಗಂಡು ಮಕ್ಕಳಿಗೆ ಹೆಚ್ಚು ಜವಾಬ್ದಾರಿ, ಕಾಡು ನಮ್ದಲ್ವ, ಕುಟುಂಬದಲ್ಲಿ ಮಗ ಹೆಚ್ಚು ಖುಷಿ ನೀಡುತ್ತಾನೆ, ನಿದ್ದೆ ಗೆಡಿಸುವಂತೆ ಮಾಡುವುದು ಕನಸು, ಮತದಾರ ಈ ವಿಷಯಗಳ ಬಗ್ಗೆ ನಿನಾದ್ ಮಾತನಾಡಿದ್ದಾನೆ.
''ಅರಣ್ಯ ಅಂದರೆ ನನಗೆ ಇಷ್ಟ. ಅದಕ್ಕೆ ನಾನು ಏನಾದರೂ ಕೊಡುಗೆ ನೀಡಬೇಕು ಎನ್ನುವುದು ನನ್ನ ಆಸೆ. ಅದಕ್ಕೆ ಮುಂದೆ ಅರಣ್ಯ ಅಧಿಕಾರಿ ಆಗಬೇಕು ಎನ್ನುವುದು ನನ್ನ ಗುರಿ.'' ಅಂತಾನೆ ಈ ಪುಟ್ಟ ಬಾಲಕ.