Don't Miss!
- News Lok Sabha Election 2024 Phase 1 Polling LIVE: ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಂಡು ಮೆಟ್ಟಿದ ನಾಡಿನ ಶ್ರೇಯಾಳ ಮಾತೇ ಬುಲೆಟ್
ಒಂದು ಕಡೆ ಬಸವಣ್ಣನ ವಚನ ಹೇಳುವ ಶ್ರೇಯಾ ಬಿ ಪಾಟೀಲ್ ಮತ್ತೊಂದು ಕಡೆ ಬುಲೆಟ್ ಹೊಡೆದ ರೀತಿ ಮಾತನಾಡುತ್ತಾಳೆ. ತನ್ನ ಮಾತುಗಳು ಮೂಲಕ ಮಲಗಿದ್ದವರನ್ನು ಬಡಿದೆಬ್ಬಿಸುವ ತಾಕತ್ತು ಈ ಹುಡುಗಿ ಕಂಠದಲ್ಲಿ ಇದೆ.
'ಕನ್ನಡದ ಕಣ್ಮಣಿ' ಕಾರ್ಯಕ್ರಮದ ಸ್ಪರ್ಧಿ ಶ್ರೇಯಾ ಗಂಡು ಮೆಟ್ಟಿದ ನಾಡು ಹುಬ್ಬಳಿಯಿಂದ ಬಂದಿದ್ದಾಳೆ. ಕಾರ್ಯಕ್ರಮಕ್ಕೆ ಬಂದ ಮೊದಲ ಸಂಚಿಕೆಯಲ್ಲಿಯೇ ಈ ಹುಡುಗಿ ತೊಡೆ ತಟ್ಟಿ ಮಾತನಾಡಿ ಎಲ್ಲರಲ್ಲಿ ರೋಮಾಂಚನ ಉಂಟು ಮಾಡಿದ್ದಳು.
ಬಿಜಾಪುರದ ಹುಡುಗಿ ವರದಳ ಗಟ್ಟಿ ಮಾತು ಕೇಳೋದೆ ಚಂದ
ಮಹದಾಯಿ ನೀರಿನ ಸಮಸ್ಯೆ ಬಗ್ಗೆ ಮಾತನಾಡಿ ಶ್ರೇಯಾ ಕರ್ನಾಟಕದ ಜನರ ಮನಸ್ಸಿನಲ್ಲಿ ಜಾಗ ಪಡೆದುಕೊಂಡಿದ್ದಾಳೆ. ಆ ಸಂಚಿಕೆ ಆಕೆಗೆ ಒಳ್ಳೆಯ ಹೆಸರು ನೀಡಿದೆ.
ಮಹದಾಯಿ, ಇಂದಿನ ದಿನ ಸಂಸ್ಕೃತಿ ಉಳಿಯುತ್ತಿಲ್ಲ, ಭ್ರಷ್ಟಾಚಾರ, ವಿಜ್ಞಾನದ ಅನುಕೂಲ, ಡ್ರೈವರ್, ಪಂಪ ಅವರ 'ಮನುಷ್ಯ ಕುಲಂ ತಾನೋದೆ ಬಲಂ' ಈ ವಿಷಯಗಳ ಬಗ್ಗೆ ಈವರೆಗೆ ಶ್ರೇಯಾ ಮಾತನಾಡಿದ್ದಾಳೆ.
ಶ್ರೇಯಾ ಮಾತು ವೀಕ್ಷಕರಿಗೆ ಎಷ್ಟು ಇಷ್ಟ ಆಗುತ್ತದೆಯೋ, ತೀರ್ಪುಗಾರರಿಗೂ ಅಷ್ಟೇ ಇಷ್ಟ ಆಗುತ್ತಿದೆ. ಸಣ್ಣ ಹುಡುಗಿ ಇದ್ದಾಗಿನಿಂದ ಟಿವಿ ಆಡಿಷನ್ ನಲ್ಲಿ ಪ್ರಯತ್ನ ಮಾಡುತ್ತಿದ್ದ ಶ್ರೇಯಾಗೆ ಈಗ ಒಂದು ಅವಕಾಶ ಸಿಕ್ಕಿದೆ.
ಆಂಕರ್ ಆಗುವ ಆಸೆಯಿಂದಲೇ 'ಕನ್ನಡದ ಕಣ್ಮಣಿ' ವೇದಿಕೆ ಏರಿದ ಸನಿಕಾ
ಶಾಲೆಯಲ್ಲಿ ಮತ್ತು ಮನೆಯಲ್ಲಿ ಶ್ರೇಯಾ ಸಾಧನೆಗೆ ಖುಷಿ ಪಡುತ್ತಾರಂತೆ. ಮೂರು ತೀರ್ಪುಗಾರರ ಮುಂದೆ ಮಾತನಾಡುವುದು ನನಗೆ ಹೆಮ್ಮೆ ಅಂತ್ತಾರೆ ಶ್ರೇಯಾ.