Don't Miss!
- News ಡಿಕೆ ಸುರೇಶ್ ಆಪ್ತರಿಗೆ ಐಟಿ ಶಾಕ್; ಬಿಜೆಪಿ ದುಡ್ಡು ಹಂಚುತ್ತಿರುವುದು ಗೊತ್ತಿಲ್ಲವೆ? : ಡಿ ಕೆ ಶಿವಕುಮಾರ್ ಹೇಳಿದ್ದೇನು?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Finance Bengaluru Suburban Rail Project: ದೊಡ್ಡಜಾಲದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ, ವಿವರ
- Technology Jio: ಅಗ್ಗದ ಜಿಯೋ ಸಿನಿಮಾ ಪ್ರೀಮಿಯಂ ಚಂದಾದಾರಿಕೆ ಘೋಷಣೆ! 29 ರೂ.ಗಳಿಂದ ಪ್ರಾರಂಭ..
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಂಡು ಮೆಟ್ಟಿದ ನಾಡಿನ ಶ್ರೇಯಾಳ ಮಾತೇ ಬುಲೆಟ್
ಒಂದು ಕಡೆ ಬಸವಣ್ಣನ ವಚನ ಹೇಳುವ ಶ್ರೇಯಾ ಬಿ ಪಾಟೀಲ್ ಮತ್ತೊಂದು ಕಡೆ ಬುಲೆಟ್ ಹೊಡೆದ ರೀತಿ ಮಾತನಾಡುತ್ತಾಳೆ. ತನ್ನ ಮಾತುಗಳು ಮೂಲಕ ಮಲಗಿದ್ದವರನ್ನು ಬಡಿದೆಬ್ಬಿಸುವ ತಾಕತ್ತು ಈ ಹುಡುಗಿ ಕಂಠದಲ್ಲಿ ಇದೆ.
'ಕನ್ನಡದ ಕಣ್ಮಣಿ' ಕಾರ್ಯಕ್ರಮದ ಸ್ಪರ್ಧಿ ಶ್ರೇಯಾ ಗಂಡು ಮೆಟ್ಟಿದ ನಾಡು ಹುಬ್ಬಳಿಯಿಂದ ಬಂದಿದ್ದಾಳೆ. ಕಾರ್ಯಕ್ರಮಕ್ಕೆ ಬಂದ ಮೊದಲ ಸಂಚಿಕೆಯಲ್ಲಿಯೇ ಈ ಹುಡುಗಿ ತೊಡೆ ತಟ್ಟಿ ಮಾತನಾಡಿ ಎಲ್ಲರಲ್ಲಿ ರೋಮಾಂಚನ ಉಂಟು ಮಾಡಿದ್ದಳು.
ಬಿಜಾಪುರದ ಹುಡುಗಿ ವರದಳ ಗಟ್ಟಿ ಮಾತು ಕೇಳೋದೆ ಚಂದ
ಮಹದಾಯಿ ನೀರಿನ ಸಮಸ್ಯೆ ಬಗ್ಗೆ ಮಾತನಾಡಿ ಶ್ರೇಯಾ ಕರ್ನಾಟಕದ ಜನರ ಮನಸ್ಸಿನಲ್ಲಿ ಜಾಗ ಪಡೆದುಕೊಂಡಿದ್ದಾಳೆ. ಆ ಸಂಚಿಕೆ ಆಕೆಗೆ ಒಳ್ಳೆಯ ಹೆಸರು ನೀಡಿದೆ.
ಮಹದಾಯಿ, ಇಂದಿನ ದಿನ ಸಂಸ್ಕೃತಿ ಉಳಿಯುತ್ತಿಲ್ಲ, ಭ್ರಷ್ಟಾಚಾರ, ವಿಜ್ಞಾನದ ಅನುಕೂಲ, ಡ್ರೈವರ್, ಪಂಪ ಅವರ 'ಮನುಷ್ಯ ಕುಲಂ ತಾನೋದೆ ಬಲಂ' ಈ ವಿಷಯಗಳ ಬಗ್ಗೆ ಈವರೆಗೆ ಶ್ರೇಯಾ ಮಾತನಾಡಿದ್ದಾಳೆ.
ಶ್ರೇಯಾ ಮಾತು ವೀಕ್ಷಕರಿಗೆ ಎಷ್ಟು ಇಷ್ಟ ಆಗುತ್ತದೆಯೋ, ತೀರ್ಪುಗಾರರಿಗೂ ಅಷ್ಟೇ ಇಷ್ಟ ಆಗುತ್ತಿದೆ. ಸಣ್ಣ ಹುಡುಗಿ ಇದ್ದಾಗಿನಿಂದ ಟಿವಿ ಆಡಿಷನ್ ನಲ್ಲಿ ಪ್ರಯತ್ನ ಮಾಡುತ್ತಿದ್ದ ಶ್ರೇಯಾಗೆ ಈಗ ಒಂದು ಅವಕಾಶ ಸಿಕ್ಕಿದೆ.
ಆಂಕರ್ ಆಗುವ ಆಸೆಯಿಂದಲೇ 'ಕನ್ನಡದ ಕಣ್ಮಣಿ' ವೇದಿಕೆ ಏರಿದ ಸನಿಕಾ
ಶಾಲೆಯಲ್ಲಿ ಮತ್ತು ಮನೆಯಲ್ಲಿ ಶ್ರೇಯಾ ಸಾಧನೆಗೆ ಖುಷಿ ಪಡುತ್ತಾರಂತೆ. ಮೂರು ತೀರ್ಪುಗಾರರ ಮುಂದೆ ಮಾತನಾಡುವುದು ನನಗೆ ಹೆಮ್ಮೆ ಅಂತ್ತಾರೆ ಶ್ರೇಯಾ.