Don't Miss!
- Finance ಆಧಾರ್ ಉಚಿತ ಅಪ್ಡೇಟ್ ದಿನಾಂಕ ಜೂ.14ರವರೆಗೆ ವಿಸ್ತರಣೆ: ಆನ್ಲೈನ್ನಲ್ಲಿ ಹೀಗೆ ನವೀಕರಿಸಿ
- Lifestyle ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
- News 7th Pay Commission : ಸರ್ಕಾರಕ್ಕೆ ಸಲ್ಲಿಸಲಾಗಿರುವ ಏಳನೇ ವೇತನ ಆಯೋಗದ ವರದಿಯಲ್ಲಿರುವ ಪ್ರಮುಖ ಅಂಶಗಳ ಪಟ್ಟಿ ಇಲ್ಲಿದೆ
- Sports IPL 2024: ಮುಂಬೈ ನಾಯಕನಿಗೆ ಪತ್ರಕರ್ತರಿಂದ ಬೌನ್ಸರ್: ಉತ್ತರಿಸದೆ ಮೌನಕ್ಕೆ ಶರಣಾದ ಹಾರ್ದಿಕ್ ಪಾಂಡ್ಯ
- Technology Best Coolers: ಭಾರತದಲ್ಲಿ 5 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ ಇರುವ ಅತ್ಯುತ್ತಮ ಕೂಲರ್ಗಳು! ಫೀಚರ್ಸ್ ಏನಿದೆ?
- Automobiles ಡಿ ಬಾಸ್ ಪತ್ನಿ ಖರೀದಿಸಿದ್ದು ಸಾಮಾನ್ಯ ಕಾರಲ್ಲ: ಬಂಗಲೆಯಂತಹ ಇಂಟೀರಿಯರ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಂಡು ಮೆಟ್ಟಿದ ನಾಡಿನ ಶ್ರೇಯಾಳ ಮಾತೇ ಬುಲೆಟ್
ಒಂದು ಕಡೆ ಬಸವಣ್ಣನ ವಚನ ಹೇಳುವ ಶ್ರೇಯಾ ಬಿ ಪಾಟೀಲ್ ಮತ್ತೊಂದು ಕಡೆ ಬುಲೆಟ್ ಹೊಡೆದ ರೀತಿ ಮಾತನಾಡುತ್ತಾಳೆ. ತನ್ನ ಮಾತುಗಳು ಮೂಲಕ ಮಲಗಿದ್ದವರನ್ನು ಬಡಿದೆಬ್ಬಿಸುವ ತಾಕತ್ತು ಈ ಹುಡುಗಿ ಕಂಠದಲ್ಲಿ ಇದೆ.
'ಕನ್ನಡದ ಕಣ್ಮಣಿ' ಕಾರ್ಯಕ್ರಮದ ಸ್ಪರ್ಧಿ ಶ್ರೇಯಾ ಗಂಡು ಮೆಟ್ಟಿದ ನಾಡು ಹುಬ್ಬಳಿಯಿಂದ ಬಂದಿದ್ದಾಳೆ. ಕಾರ್ಯಕ್ರಮಕ್ಕೆ ಬಂದ ಮೊದಲ ಸಂಚಿಕೆಯಲ್ಲಿಯೇ ಈ ಹುಡುಗಿ ತೊಡೆ ತಟ್ಟಿ ಮಾತನಾಡಿ ಎಲ್ಲರಲ್ಲಿ ರೋಮಾಂಚನ ಉಂಟು ಮಾಡಿದ್ದಳು.
ಬಿಜಾಪುರದ ಹುಡುಗಿ ವರದಳ ಗಟ್ಟಿ ಮಾತು ಕೇಳೋದೆ ಚಂದ
ಮಹದಾಯಿ ನೀರಿನ ಸಮಸ್ಯೆ ಬಗ್ಗೆ ಮಾತನಾಡಿ ಶ್ರೇಯಾ ಕರ್ನಾಟಕದ ಜನರ ಮನಸ್ಸಿನಲ್ಲಿ ಜಾಗ ಪಡೆದುಕೊಂಡಿದ್ದಾಳೆ. ಆ ಸಂಚಿಕೆ ಆಕೆಗೆ ಒಳ್ಳೆಯ ಹೆಸರು ನೀಡಿದೆ.
ಮಹದಾಯಿ, ಇಂದಿನ ದಿನ ಸಂಸ್ಕೃತಿ ಉಳಿಯುತ್ತಿಲ್ಲ, ಭ್ರಷ್ಟಾಚಾರ, ವಿಜ್ಞಾನದ ಅನುಕೂಲ, ಡ್ರೈವರ್, ಪಂಪ ಅವರ 'ಮನುಷ್ಯ ಕುಲಂ ತಾನೋದೆ ಬಲಂ' ಈ ವಿಷಯಗಳ ಬಗ್ಗೆ ಈವರೆಗೆ ಶ್ರೇಯಾ ಮಾತನಾಡಿದ್ದಾಳೆ.
ಶ್ರೇಯಾ ಮಾತು ವೀಕ್ಷಕರಿಗೆ ಎಷ್ಟು ಇಷ್ಟ ಆಗುತ್ತದೆಯೋ, ತೀರ್ಪುಗಾರರಿಗೂ ಅಷ್ಟೇ ಇಷ್ಟ ಆಗುತ್ತಿದೆ. ಸಣ್ಣ ಹುಡುಗಿ ಇದ್ದಾಗಿನಿಂದ ಟಿವಿ ಆಡಿಷನ್ ನಲ್ಲಿ ಪ್ರಯತ್ನ ಮಾಡುತ್ತಿದ್ದ ಶ್ರೇಯಾಗೆ ಈಗ ಒಂದು ಅವಕಾಶ ಸಿಕ್ಕಿದೆ.
ಆಂಕರ್ ಆಗುವ ಆಸೆಯಿಂದಲೇ 'ಕನ್ನಡದ ಕಣ್ಮಣಿ' ವೇದಿಕೆ ಏರಿದ ಸನಿಕಾ
ಶಾಲೆಯಲ್ಲಿ ಮತ್ತು ಮನೆಯಲ್ಲಿ ಶ್ರೇಯಾ ಸಾಧನೆಗೆ ಖುಷಿ ಪಡುತ್ತಾರಂತೆ. ಮೂರು ತೀರ್ಪುಗಾರರ ಮುಂದೆ ಮಾತನಾಡುವುದು ನನಗೆ ಹೆಮ್ಮೆ ಅಂತ್ತಾರೆ ಶ್ರೇಯಾ.