Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನನ್ನ ಹೆಸರಲ್ಲ, ನಮ್ಮೂರಿನ ಹೆಸರನ್ನು ಮುಂದೆ ತರಬೇಕು - ಸೃಷ್ಟಿ
ತನ್ನ ಹೆಸರಿಗಿಂತ, ತನ್ನ ಊರಿನ ಹಾಗೂ ಸರ್ಕಾರಿ ಶಾಲೆಯ ಹೆಸರನ್ನು ಮುಂದೆ ತರಬೇಕು ಎನ್ನುವುದು ಸೃಷ್ಟಿ ಹಿರೇಮಠ್ ಆಸೆಯಂತೆ.
'ಕನ್ನಡದ ಕಣ್ಮಣಿ' ಕಾರ್ಯಕ್ರಮದ ಸ್ಪರ್ಧಿಯಾಗಿದ್ದ ಸೃಷ್ಟಿ ಹಿರೇಮಠ್ ಈಗ ಅಂತಿಮ ಹಂತಕ್ಕೆ ಬಂದಿದ್ದಾರೆ. ಇಂತಹ ದೊಡ್ಡ ವೇದಿಕೆಯಲ್ಲಿ ಮಾತನಾಡಲು ಅವಕಾಶ ಸಿಗುತ್ತದೆ ಎಂದು ತಿಳಿದಿರಲಿಲ್ಲ. ಈ ಅವಕಾಶ ನನಗೆ ಸಿಕ್ಕಿದ್ದು ತುಂಬ ಸಂತೋಷ ನೀಡಿದೆ ಎಂದರು ಸೃಷ್ಟಿ.
ಬಿಜಾಪುರದ ಹುಡುಗಿ ವರದಳ ಗಟ್ಟಿ ಮಾತು ಕೇಳೋದೆ ಚಂದ
ಸೃಷ್ಟಿ ಈವರೆಗೆ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆ, ಹಳ್ಳಿ, ಮುಖ ನೋಡಿ ಮೊಳ ಹಾಕಬೇಡ, ಶಿಕ್ಷಣದ ಉದ್ದೇಶ ಜೀವನ ಕಲಿಸುವುದು, ಗಾಂಧೀಜಿ ಅವರ 'ಬದಲಾವಣೆ ನಿನ್ನಿಂದಲೇ ಶುರು ಆಗಲಿ' ಇಂತಹ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಧಾರವಾಡ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಸೃಷ್ಟಿಗೆ ತಮ್ಮ ಸರ್ಕಾರಿ ಶಾಲೆಯ ಬಗ್ಗೆ ಬಹಳ ಅಭಿಮಾನ ಇದೆ. ತಮ್ಮ ಶಾಲೆಯ ಬಗ್ಗೆ ಮಾತನಾಡಲು ಸೃಷ್ಟಿಗೆ ತುಂಬ ಇಷ್ಟವಂತೆ.
ಶಾಲೆಗೆ ರಜೆ ಇದ್ದ ದಿನ ತಮ್ಮ ನಾಲ್ಕು ಗೆಳತಿಯರ ಜೊತೆಗೆ ಆಡಿಷನ್ ನೀಡಿದ್ದರು. ಅದರಲ್ಲಿ ಸೃಷ್ಟಿ ಆಯ್ಕೆ ಆಗಿ, ಮೆಗಾ ಆಡಿಷನ್ ನಲ್ಲಿಯೂ ಪಾಸ್ ಆದರು.
ಗಂಡು ಮೆಟ್ಟಿದ ನಾಡಿನ ಶ್ರೇಯಾಳ ಮಾತೇ ಬುಲೆಟ್
ಸೃಷ್ಟಿ ಈ ಹಂತಕ್ಕೆ ಬಂದಿರುವುದಕ್ಕೆ ಇಡೀ ಊರಿನವರು ಹೆಮ್ಮೆ ಪಡುತ್ತಿದ್ದಾರಂತೆ. ನಮ್ಮ ತಾಲ್ಲೂಕು, ನಮ್ಮ ಊರು ಯಾವುದರಲ್ಲಿಯೂ ಫೇಮಸ್ ಇರಲಿಲ್ಲ. ನೀನು ನಮ್ಮ ಊರಿನ ಹೆಸರನ್ನು ಕರ್ನಾಟಕಕ್ಕೆ ತಿಳಿಯುವಂತೆ ಮಾಡಿದೆ ಎನ್ನುತ್ತಿದ್ದಾರಂತೆ.
''ನಮ್ಮ ಸರ್ಕಾರಿ ಶಾಲೆ ಹಾಗೂ ನಮ್ಮ ಊರನ್ನು ಮುಂದೆ ತರಬೇಕು'' ಎನ್ನುವುದು ಸೃಷ್ಟಿ ಅವರ ಆಸೆಯಾಗಿದೆ.