Don't Miss!
- News Lok Sabha Election: ಗೂಗಲ್ನಲ್ಲೂ ಪ್ರಜಾಪ್ರಭುತ್ವದ ಹಬ್ಬದ ಸಂಭ್ರಮ
- Automobiles Google Maps: ಇವಿ ಮಾಲೀಕರೇ ಆತಂಕ ಬಿಡಿ... ಗೂಗಲ್ ಮ್ಯಾಪ್ಸ್ ಭರ್ಜರಿ ಅಪ್ಡೇಟ್!
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತೀಯ ಸಿನಿಮಾ ಮೇಲೆ ಹಿಂದಿ ಸಿನಿಮಾ ಪ್ರಭಾವ ದೊಡ್ಡದು: ಫಿಲ್ಮಿಬೀಟ್ ಜೊತೆ ರಿಷಬ್ ಶೆಟ್ಟಿ
'ಕಾಂತಾರ' ಸಿನಿಮಾ ಬಹುದೊಡ್ಡ ಯಶಸ್ಸು ಕಂಡಿದೆ. ಅದರಲ್ಲಿಯೂ ಬಾಲಿವುಡ್ ಭಾಗದಲ್ಲಿ ಕೆಲವೇ ದಿನಗಳಲ್ಲಿಯೇ 55 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಮುಂದೆ ಸಾಗುತ್ತಿದೆ.
ಬಾಲಿವುಡ್ ಪ್ರದೇಶದಲ್ಲಿ ಸಿನಿಮಾ ದೊಡ್ಡ ಹಿಟ್ ಆದ ಬೆನ್ನಲ್ಲೆ ರಿಷಬ್ ಶೆಟ್ಟಿಗೆ ಮುಂಬೈನಲ್ಲಿ ಅಭಿಮಾನಿ ವರ್ಗವೊಂದು ಸೃಷ್ಟಿಯಾಗಿದೆ. ಮಾಧ್ಯಮಗಳಲ್ಲಿ ಸತತವಾಗಿ ರಿಷಬ್ ಶೆಟ್ಟಿ ಸಂದರ್ಶನಗಳು ಪ್ರಸಾರವಾಗುತ್ತಿವೆ.
ಇದೀಗ ರಿಷಬ್ ಶೆಟ್ಟಿ, ಫಿಲ್ಮಿಬೀಟ್ ಇಂಗ್ಲೀಷ್ ಜೊತೆಗೆ ವಿಶೇಷ ಸಂದರ್ಶನ ನೀಡಿದ್ದು, 'ಕಾಂತಾರ' ಸಿನಿಮಾದ ಜೊತೆಗೆ ಬಾಲಿವುಡ್ ಸಿನಿಮಾ, ಅದರ ಏರಿಳಿತ ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಆ ಚರ್ಚೆಯಲ್ಲಿ ನಾನಿಲ್ಲ: ರಿಷಬ್ ಶೆಟ್ಟಿ
''ಬಾಲಿವುಡ್ನಲ್ಲಿ ಅದಾಗುತ್ತಿದೆ. ದಕ್ಷಿಣ ಭಾರತ ಸಿನಿಮಾಗಳು ಮೇಲುಗೈ ಸಾಧಿಸುತ್ತಿವೆ ಎಂಬೆಲ್ಲ ಅನವಶ್ಯಕ ಚರ್ಚೆಯಲ್ಲಿ ನಾನಿಲ್ಲ. ಪ್ರತಿಯೊಂದು ಚಿತ್ರರಂಗಕ್ಕೂ ಅದರದ್ದೇ ಆದ ವಿಶೇಷತೆ ಇರುತ್ತದೆ. ತನ್ನದೇ ನೆಲೆಯಲ್ಲಿ ಮುಖ್ಯವಾದದ್ದಾಗಿರುತ್ತದೆ. ಭಾರತೀಯ ಸಿನಿಮಾಕ್ಕೆ ಹಿಂದಿ ಸಿನಿಮಾದ ಯೋಗದಾನ ಬಹುದೊಡ್ಡದು, ಅದನ್ನು ನಾವು ಮರೆಯುವಂತಿಲ್ಲ'' ಎಂದಿದ್ದಾರೆ ರಿಷಬ್ ಶೆಟ್ಟಿ.
ಚಿತ್ರರಂಗದಲ್ಲಿ ಏರಿಳಿತ ಸಾಮಾನ್ಯ: ರಿಷಬ್
''ಏರಿಳಿತಗಳು ಪ್ರತಿಯೊಂದು ಚಿತ್ರರಂಗದಲ್ಲಿಯೂ ಇರುತ್ತವೆ. ಸಿನಿಮಾ ನೋಡುವ ಪ್ರೇಕ್ಷಕನಲ್ಲಿ ಬದಲಾವಣೆ ಆಗುತ್ತದೆ. ಅವನ ಅಪೇಕ್ಷೆಗಳು ಬದಲಾಗುತ್ತವೆ. ಒಟಿಟಿಗಳಿಂದ ಅವರ ಆಯ್ಕೆಯೂ ಬದಲಾಗಿದೆ. ಬೇರೆ ಥರಹದ ಸಿನಿಮಾಗಳನ್ನು ನೋಡುವ ಅಪೇಕ್ಷೆ ಪ್ರೇಕ್ಷಕನಲ್ಲಿದೆ. ಒಟಿಟಿಗಳಿಂದಾಗಿ ವಿಶ್ವ ಸಿನಿಮಾಗಳನ್ನು ಅವರು ನೋಡುತ್ತಿದ್ದಾರೆ. ಹಾಗಾಗಿ ಒರಿನಲ್ ಕಂಟೆಂಟ್ ಅವರಿಗೆ ಹೆಚ್ಚು ಇಷ್ಟವಾಗುತ್ತಿದೆ'' ಎಂದಿದ್ದಾರೆ ರಿಷಬ್ ಶೆಟ್ಟಿ.
ಹಿಂದಿ ಭಾಷಿಕ ಪ್ರದೇಶದಲ್ಲಿ ಸೂಪರ್ ಹಿಟ್
ರಿಷಬ್ ಶೆಟ್ಟಿ ನಟಿಸಿರುವ 'ಕಾಂತಾರ' ಸಿನಿಮಾ ಹಿಂದಿ ಭಾಷಿಕ ಪ್ರದೇಶದಲ್ಲಿ ಸೂಪರ್-ಡೂಪರ್ ಹಿಟ್ ಆಗಿದೆ. ಕನ್ನಡದಲ್ಲಿ ಬಿಡುಗಡೆ ಆಗಿ ಒಂದು ವಾರದ ಬಳಿಕ ಹಿಂದಿ ಭಾಷೆಗೆ ಡಬ್ ಆಗಿ 'ಕಾಂತಾರ' ಸಿನಿಮಾ ಬಿಡುಗಡೆ ಆಗಿದೆ. ಹಾಗಿದ್ದರೂ ಸಹ ಆ ಸಿನಿಮಾ ಸೂಪರ್ ಹಿಟ್ ಆಗಿದೆ. ಹಿಂದಿ ಭಾಷಿಕ ಪ್ರದೇಶದಲ್ಲಿ ಮಾತ್ರವೇ ಕಾಂತಾರ ಸಿನಿಮಾ 55 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಸಿನಿಮಾ ಒಟ್ಟಾರೆಯಾಗಿ 200 ಕೋಟಿ ಕಲೆಕ್ಷನ್ ಅನ್ನು ದಾಟಿ ಮುಂದೆ ಸಾಗಿದೆ. 'ಕೆಜಿಎಫ್ 2' ದಾಖಲೆಗಳನ್ನು ಸಹ ಕೆಲವೆಡೆ ಮುರಿದು ಹಾಕಿದೆ.
ಹೋಂಬಾಳೆ ಫಿಲಮ್ಸ್ ಬಂಡವಾಳ
'ಕಾಂತಾರ' ಸಿನಿಮಾವನ್ನು ರಿಷಬ್ ಶೆಟ್ಟಿ ನಿರ್ದೇಶನ ಮಾಡಿದ್ದು, ಅವರೇ ನಟಿಸಿದ್ದಾರೆ ಸಹ. ಸಿನಿಮಾದಲ್ಲಿ ಸಪ್ತಮಿ ಗೌಡ ನಾಯಕಿಯಾಗಿದ್ದಾರೆ. ಪ್ರಮುಖ ಪೋಷಕ ಪಾತ್ರಗಳಲ್ಲಿ ಅಚ್ಯುತ್ ಕುಮಾರ್, ಕಿಶೋರ್, ಪ್ರಮೋದ್ ಶೆಟ್ಟಿ ಅವರುಗಳು ನಟಿಸಿದ್ದಾರೆ. ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಆದರೆ ಸಿನಿಮಾದ 'ವರಾಹ ರೂಪಂ' ಹಾಡು ವಿವಾದಕ್ಕೆ ಕಾರಣವಾಗಿದೆ. ಸಿನಿಮಾಕ್ಕೆ ಬಂಡವಾಳ ಹಾಕಿರುವುದು ಹೊಂಬಾಳೆ ಫಿಲಮ್ಸ್.