Don't Miss!
- News Toilet Photo Viral: ಕಡಿಮೆ ಖರ್ಚಿನಲ್ಲಿ 'ಲೀಕೆಜ್ ಟ್ಯಾಂಕರ್'ನಿಂದ ಟಾಯ್ಲೆಟ್ ನಿರ್ಮಾಣ: ನೀವೂ ಟ್ರೈ ಮಾಡಿ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೀಪಕ್ ಗೆ ಭಾಗ್ಯ ತಂದುಕೊಡುತ್ತಾನಂತೆ ರಾಜು
ಹೊಸಬರನ್ನು ಸೇರಿಸಿಕೊಂಡು 'ಭಾಗ್ಯರಾಜ್' ಎಂಬ ವಿಭಿನ್ನ ಸಿನಿಮಾವನ್ನು ಗಾಂಧಿನಗರಕ್ಕೆ ಹೊತ್ತು ತಂದಿರುವ ನವ ನಿರ್ದೇಶಕ ದೀಪಕ್ ಮಧುವನ ಹಳ್ಳಿ ಅವರು ಹೊಸ ನಟ ಮಹೇಶ್ ಮತ್ತು 'ಪರಾರಿ' ಸಿನಿಮಾ ಖ್ಯಾತಿಯ ನಟಿ ಜಾಹ್ನವಿ ಕಾಮತ್ ಅವರನ್ನು ಸೇರಿಸಿಕೊಂಡು ಒಂದೊಳ್ಳೆ ಪ್ರಯತ್ನ ಮಾಡಿದ್ದಾರೆ.
ಲೂಸ್ ಮಾದ ಯೋಗಿ ಅವರ ಸಹೋದರ ನಟ ಮಹೇಶ್ ಅವರು ಈ ಚಿತ್ರದ ನಾಯಕರಾಗಿದ್ದು, ಜೊತೆಗೆ ತಮ್ಮ ಹೋಮ್ ಬ್ಯಾನರ್ ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.[ಈ ವಾರ 'ಭಾಗ್ಯರಾಜ್' ನೋಡುವ ಭಾಗ್ಯ ಪ್ರೇಕ್ಷಕರಿಗೆ!]
ಹೊಸ ಕಥೆಯನ್ನು ವಿಭಿನ್ನವಾಗಿ ಪ್ರೇಕ್ಷಕರಿಗೆ ತಲುಪಿಸುವಲ್ಲಿ ನಿರ್ದೇಶಕರು ಪ್ರಯತ್ನಿಸಿದ್ದಾರೆ ಎಂಬುದು ಈಗಾಗಲೇ ಟ್ರೈಲರ್ ನಲ್ಲಿ ಗೊತ್ತಾಗಿದೆ. ಹೊಸಬರ 'ರಂಗಿತರಂಗ' ಎಂಬ ಸಿನಿಮಾ ಗಾಂಧಿನಗರಕ್ಕೆ ಬಂದು ಹೋದ ಮೇಲೆ ಹೊಸಬರ ನಸೀಬು ಚೆನ್ನಾಗಿದೆ.
ಈಗಾಗಲೇ ಟ್ರೈಲರ್ ಮೂಲಕ ಭಾರಿ ಹಿಟ್ ಆಗಿರುವ 'ಭಾಗ್ಯರಾಜ್' ಸಿನಿಮಾದ ಬಗ್ಗೆ ಸಿನಿರಸಿಕರು ಬಹಳ ಕುತೂಹಲ ಸೃಷ್ಟಿಸಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನವಾಗಿ ಚಿತ್ರದ ಪ್ರಚಾರ ಕಾರ್ಯ ಕೈಗೊಂಡಿರುವ ಹೊಸಬರ ತಂಡ ಅಭಿಮಾನಿಗಳನ್ನು ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಹೊಸಬರ 'ಭಾಗ್ಯರಾಜ್' ಸಿನಿಮಾಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದ್ದು, ಸಿನಿಮಾ ಫೆಬ್ರವರಿ 5ಕ್ಕೆ ಬಿಡುಗಡೆ ಆಗಲಿದೆ.
ನವ ನಿರ್ದೇಶಕ ದೀಪಕ್ ಮಧುವನ ಹಳ್ಳಿ ಅವರು ಫಿಲ್ಮಿಬೀಟ್ ಕನ್ನಡದ ಜೊತೆಗೆ ತಮ್ಮ ಚಿತ್ರದ ಬಗ್ಗೆ ಮತ್ತು ಮೊದಲ ನಿರ್ದೇಶನದ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
ನಿರ್ದೇಶಕ ದೀಪಕ್ ಮಧುವನ ಹಳ್ಳಿ ಅವರ ಜೊತೆ ಫಿಲ್ಮಿಬೀಟ್ ಕನ್ನಡ ನಡೆಸಿದ ಎಕ್ಸ್ ಕ್ಲ್ಯೂಸಿವ್ ಸಂದರ್ಶನ ನೋಡಲು ಈ ವಿಡಿಯೋ ನೋಡಿ...