Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ಯಾಲೇಸ್ಗ್ರೌಂಡ್ಸ್ನಲ್ಲಿ ಮಲಯಾಳಂ ಮನೋರಮ!
ಕನ್ನಡ ನೆಲದಲ್ಲಿ ಮಲಯಾಳಂ ಚಿತ್ರರಂಗದ ದೊಡ್ಡ ಸಮಾರಂಭ ಇದೇ ಫೆ. 27ರಂದು ನಡೆಯಲಿದೆ. ಇದನ್ನ ಕರ್ನಾಟಕ ನಾಯರ್ ಅಸೋಸಿಯೇಷನ್ ಹಮ್ಮಿಕೊಂಡಿದೆ. ನಗರದ ಅರಮನೆ ಮೈದಾನದಲ್ಲಿ ನಡೀತಿರೋ ಈ ಭರ್ಜರಿ ಮನರಂಜನಾ ಸಮಾರಂಭದಲ್ಲಿ ಕೇರಳ ಇಂಡಸ್ಟ್ರಿಯ ದೊಡ್ಡ ದೊಡ್ಡ ಕಲಾವಿದರಾದ ಮಮ್ಮುಟ್ಟಿ, ಮೋಹನ್ ಲಾಲ್, ಪೃಥ್ವಿರಾಜ್, ಮೀರಾ ಜಾಸ್ಮಿನ್ ಮೊದಲಾದವರು ಭಾಗವಹಿಹಿಸುತ್ತಿದ್ದಾರೆ.
ನಮ್ಮಲ್ಲಿ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ ಇರುವ ಹಾಗೇ ಕೇರಳ ಸಿನಿಮಾ ಉದ್ಯಮದಲ್ಲೂ ನಟ, ನಟಿಯರೆಲ್ಲ ಸೇರಿ "ಅಮ್ಮಾ ಅಸೋಸಿಯೇಷನ್" ಎಂಬ ಹೆಸರಿನಲ್ಲಿ ಸಂಘಟನೆ ಮಾಡಿಕೊಂಡಿದ್ದಾರೆ. ನಾಯರ್ ಅಸೋಸಿಯೇಷನ್ ಜೊತೆ ಅವರು ಟೈ ಅಪ್ ಆಗಿದ್ದಾರೆ. ಇಷ್ಟಾಗಿದ್ದರೆ ಇದು ದೊಡ್ಡ ಸುದ್ದಿಯಾಗುತ್ತಿರಲಿಲ್ಲ.
ನಮ್ಮ ಕನ್ನಡದ ನೆಲದಲ್ಲೇ ದೊಡ್ಡ ಪ್ರಮಾಣದ ಸಮಾರಂಭ ನಡೆಸುತ್ತಿದ್ದರೂ ನಮ್ಮಲ್ಲಿನ ಯಾವೊಬ್ಬ ಸಿನಿಮಾ ತಾರೆಗೂ ಅಮ್ಮಾ ಟೀಮ್ ನಿಂದ ಒಂದೇ ಒಂದು ಇನ್ವಿಟೇಷನ್ ಕೂಡ ಬಂದಿಲ್ಲ. ನೂರಾರು ಮಲಯಾಳಂ ತಾರೆಯರು ಭಾಗವಹಿಸುವ ಸಮಾರಂಭದಲ್ಲಿ ನಮ್ಮ ಉದ್ಯಮದಯಾರೊಬ್ಬರೂ ಪಾಲ್ಗೊಳ್ಳುತ್ತಿಲ್ಲ. ಅಂಬರೀಷ್, ರವಿಚಂದ್ರನ್, ಜಯಮಾಲಾ, ರಾಕ್ಲೈನ್ ವೆಂಟಕೇಶ್ ಯಾರೊಬ್ಬರಿಗೂ ಆಹ್ವಾನ ಬಂದಿಲ್ಲ!