Don't Miss!
- News ಲೋಕಸಭಾ ಚುನಾವಣೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್ಡಿಕೆ ಮೇಕೆದಾಟು ಅಸ್ತ್ರ
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆ ನಟಿಯಿಂದಾಗಿ ಸಾಲು-ಸಾಲು ಸಿನಿಮಾಗಳು ಕೈತಪ್ಪಿದ್ದವಂತೆ ನಟಿ ಕಾವೇರಿಗೆ
ಸಂಭ್ರಮ, ರಾಮಕೃಷ್ಣ, ಚೈತ್ರದ ಚಿಗುರು ಕನ್ನಡ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ಕಾವೇರಿ ಅಲಿಯಾಸ್ ಕಲ್ಯಾಣಿಯನ್ನು ಹೆಚ್ಚಿನ ಜನ ಮರೆತಿಲ್ಲ. ಮರೆಯುವಂತಹಾ ಸೌಂದರ್ಯವೂ ಅವರದ್ದಲ್ಲ.
Recommended Video
ಮಲೆಯಾಳಂ ಸಿನಿಮಾದಿಂದ ಅಭಿನಯ ಆರಂಭಿಸಿದ ಕಾವೇರಿ ಅಲಿಯಾಸ್ ಕಲ್ಯಾಣಿ ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಸಿನಿಮಾಗಳಲ್ಲಿಯೂ ಅಭಿನಯಿಸಿದರು. ಕೌಂಬಿಕ ಸಿನಿಮಾಗಳಿಗೆ ಅವರೇ ಮೊದಲ ಆಯ್ಕೆ ಆಗಿದ್ದ ಕಾಲವೊಂದಿತ್ತು.
'ಮಾಸ್ಟರ್' ನಾಯಕಿ ಮೇಲೆ ಮುಗಿಬಿದ್ದ ವಿಜಯ್ ಅಭಿಮಾನಿಗಳು: ಟ್ವೀಟ್ ಡಿಲೀಟ್
ಮೊದಲ ಸಿನಿಮಾದಲ್ಲಿಯೇ ಮುಮ್ಮುಟಿಯೊಂದಿಗೆ ನಟಿಸಿದ್ದ ಕಾವೇರಿ, ರವಿತೇಜಾ, ಜಗಪತಿ ಬಾಬು, ರವಿಚಂದ್ರನ್, ರಮೇಶ್ ಅರವಿಂದ ಹಲವರೊಂದಿಗೆ ನಟಿಸಿ ಸೈ ಎನಿಸಿಕೊಂಡರು. ಆದರೆ ಸಿನಿಮಾ ಯಾನದ ಆರಂಭದಲ್ಲಿಯೇ ನಟಿಯೊಬ್ಬರಿಂದಾಗಿ ಸಾಲು-ಸಾಲು ಸಿನಿಮಾಗಳು ಇವರ ಕೈ ತಪ್ಪಿದವಂತೆ.
ಆರಂಭದಲ್ಲಿಯೇ ಸಿನಿಮಾಗಳನ್ನು ಕಳೆದುಕೊಂಡ ನಟಿ
ಕಾವೇರಿ ಅವರು ಸಿನಿಮಾ ರಂಗ ಪ್ರವೇಶಿಸಿದ ಮೊದಲಲ್ಲೇ ನಾಯಕ ನಟಿಯೊಬ್ಬರಿಂದಾಗಿ ಸಾಲು-ಸಾಲು ಸಿನಿಮಾಗಳನ್ನು ಕಳೆದುಕೊಳ್ಳಬೇಕಾಯಿತಂತೆ. ಹೀಗಾಗಲು ಕಾರಣವೇನೆಂದು ಅವರೇ ವಿವರಿಸಿದ್ದಾರೆ.
ಹುಚ್ಚ ಸಿನಿಮಾ ರೀಮೇಕ್ ಮಾಡುವಾಗ ಹೀಗೆ ಹೇಳಿದ್ದರು ಸಲ್ಮಾನ್ ಖಾನ್
ಮುಮ್ಮುಟಿ ಜೊತೆ ಮೊದಲ ಸಿನಿಮಾ
ಮುಮ್ಮುಟಿಯೊಂದಿಗೆ ಮೊದಲ ಸಿನಿಮಾ ಮಾಡಿದ ನಂತರ ಸಾಕಷ್ಟು ಅವಕಾಶಗಳು ಬಂದವು, ನನ್ನ ಸಿನಿ ಜೀವನ ದೊಡ್ಡದಾಗಿ ಆರಂಭವಾಯಿತೆಂದು ಖುಷಿಯಲ್ಲಿದ್ದೆ. ಸತತವಾಗಿ ಎರಡು ಸಿನಿಮಾಗಳ ಕತೆ ಕೇಳಿ ಓಕೆ ಎಂದಿದ್ದೆ, ಚಿತ್ರೀಕರಣದಲ್ಲಿ ತೊಡಗಿಕೊಳ್ಳುವ ಉತ್ಸಾಹದಲ್ಲಿದ್ದೆ ಆದರೆ ಸಿನಿಮಾಗಳು ಕೈ ತಪ್ಪಿದವು ಎಂದು ಕಾವೇರಿ ಹೇಳಿಕೊಂಡಿದ್ದಾರೆ.
ನಟಿ ದಿವ್ಯಾ ಉನ್ನಿ ಪಾಲಾಗಿತ್ತಂತೆ
ಎರಡೂ ಸಿನಿಮಾಗಳು ಆಗಿನ ಮತ್ತೊಬ್ಬ ಖ್ಯಾತ ಮಲೆಯಾಳಂ ನಟಿ ದಿವ್ಯಾ ಉನ್ನಿ ಅವರ ಪಾಲಾದವು. ನಂತರ ಒಪ್ಪಿಕೊಂಡಿದ್ದ ಮತ್ತೊಂದು ಸಿನಿಮಾ ಕಾವ್ಯಾ ಮಾಧವನ್ ಪಾಲಾಯಿತಂತೆ. ತನಗೆ ಬಂದ ಅವಕಾಶಗಳು ದಿವ್ಯಾ ಪಾಲಾಗುತ್ತಿದುದ್ದಕ್ಕೆ ತೀವ್ರ ಬೇಸರವಾಗಿತ್ತಂತೆ ಕಾವೇರಿಗೆ.
ಸಿನಿಮಾ ಉದ್ಯಮ ಅರ್ಥವೇ ಆಗಿರಲಿಲ್ಲವಂತೆ
ಆಗೆಲ್ಲಾ ನಾಯಕಿಯರಿಗೆ ಸಿನಿಮಾ ತಂದು ಕೊಡಲೆಂದೇ ತಂಡಗಳು (ಪಿಆರ್ ಟೀಮ್) ಇರುತ್ತಿತ್ತು, ಆದರೆ ಅದು ನನಗೆ ಇರಲಿಲ್ಲ. ಹಾಗೊಂದು ತಂಡ ಇರಬೇಕೆಂಬ ಅರಿವೂ ಸಹ ನನಗೆ ಇರಲಿಲ್ಲ. ಹಾಗಾಗಿ ಸಾಕಷ್ಟು ಅವಕಾಶಗಳನ್ನು ನಾನು ಕಳೆದುಕೊಂಡೆ ಎಂದಿದ್ದಾರೆ.