Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪವನ್ ಕಲ್ಯಾಣ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಅನುಪಮಾ; ಕ್ಷಮೆಯಾಚಿಸಿದ ನಟಿ
ಮಲಯಾಳಂನ ಖ್ಯಾತ ನಟಿ ಅನುಪಮಾ ಪರಮೇಶ್ವರನ್ ಕನ್ನಡಿಗರು ಚಿರಪರಿಚಿತ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ನಟಸಾರ್ವಭೌಮ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಅನುಪಮಾ ಕನ್ನಡ ಪ್ರೇಕ್ಷಕರ ಹೃದಯ ಗೆದ್ದಿದ್ದರು. ಸದ್ಯ ಮಲಯಾಳಂ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅನುಪಮಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.
ತೆಲುಗು ಸ್ಟಾರ್ ನಟ ಪವನ್ ಕಲ್ಯಾಣ್ ನಟನೆಯ ವಕೀಲ್ ಸಾಬ್ ಸಿನಿಮಾದ ವಿಮರ್ಶೆ ಮಾಡಿ ಪವನ್ ಕಲ್ಯಾಣ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಕೀಲ್ ಸಾಬ್ ಸಿನಿಮಾ ನೋಡಿದ ಬಗ್ಗೆ ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಅನುಪಮಾ ಮಾಡಿದ ತಪ್ಪೇನು? ಪವನ್ ಕಲ್ಯಾಣ್ ಅಭಿಮಾನಿಗಳು ರೊಚ್ಚಿಗೆದ್ದಿದ್ದೇಕೆ? ಮುಂದೆ ಓದಿ...
ಅನುಪಮಾ ಮಾಡಿದ ವಕೀಲ್ ಸಾಬ್ ವಿಮರ್ಶೆ
'ಕಳೆದ ರಾತ್ರಿ ನಾನು ವಕೀಲ್ ಸಾಬ್ ಸಿನಿಮಾ ವೀಕ್ಷಿಸಿದೆ. ಹೇಳಲೇ ಬೇಕು, ಪವನ್ ಕಲ್ಯಾಣ್ ಅದ್ಭುತವಾದ ನಟನೆ ಮತ್ತು ಪ್ರಭಲವಾದ ಸಂದೇಶವಿದೆ. ಮೂವರು ನಾಯಕಿಯರಾದ ನಿವೇತಾ, ಅನನ್ಯಾ ಮತ್ತು ಅಂಜಲಿ ಚಿತ್ರದ ಹೈಲೆಟ್ಸ್. ಪ್ರಕಾಶ್ ರಾಜ್ ಸರ್ ನೀವು ಇಲ್ಲದೆ ಈ ಸಿನಿಮಾ ಅಪೂರ್ಣ' ಎಂದು ಬರೆದೆದಿದ್ದಾರೆ.
ಪವನ್ ಕಲ್ಯಾಣ್ ಗೆ ಸರ್ ಎಂದು ಕರೆಯದ ನಟಿ
ಅಷ್ಟಕ್ಕೂ ಅನುಪಮಾ ಮಾಡಿರುವ ವಿಮರ್ಶೆಯಲ್ಲಿ ತಪ್ಪೇನಿದೆ ಅಂತಿರಾ? ಅನುಪಮಾ, ಪವನ್ ಕಲ್ಯಾಣ್ ಹೆಸರಿನ ಜೊತೆ 'ಸರ್' ಎನ್ನುವುದನ್ನು ಸೇರಿಸಿಲ್ಲ. ಅಭಿಮಾನಿಗಳಿಗೆ ಇದೇ ದೊಡ್ಡ ತಪ್ಪಾಗಿ ಕಾಣುತ್ತಿದೆ. ಪವನ್ ಕಲ್ಯಾಣ್ ಅವರಿಗೆ ಗೌರವ ಕೊಟ್ಟಿಲ್ಲ, ಪ್ರಕಾಶ್ ರಾಜ್ ಅವರನ್ನು 'ಸರ್' ಎಂದು ಕರೆದಿದ್ದೀರಿ, ಆದರೆ ಪವನ್ ಕಲ್ಯಾಣ್ ಅವರನ್ನು ಯಾಕೆ ಗೌರವ ಕೊಟ್ಟಿಲ್ಲ ಎಂದು ಅನುಪಮಾ ವಿರುದ್ಧ ಮುಗಿಬಿದ್ದಿದ್ದಾರೆ.
ಕ್ಷಮೆಯಾಚಿಸಿದ ಅನುಪಮಾ
ಪವನ್ ಅಭಿಮಾನಿಗಳು ಕಾಮೆಂಟ್ ಸಿಟ್ಟಿಗೆದ್ದು ಕಾಮೆಂಟ್ ಮಾಡುವುದನ್ನು ಗಮನಿಸಿದ ಅನುಪಮಾ ಕ್ಷಮೆಯಾಚಿಸಿದ್ದಾರೆ. ಕ್ಷಮಿಸಿ ಹುಡುಗರೇ. ನನ್ನ ಗಮನಕ್ಕೆ ಈಗ ಬಂತು. ಪವನ್ ಕಲ್ಯಾಣ್ ಅವರಿಗೆ ನಾನು ತುಂಬಾ ಗೌರವ ಕೊಡುತ್ತೇನೆ ಮತ್ತು ಪ್ರೀತಿಸುತ್ತೇನೆ' ಎಂದು ಹೇಳಿದ್ದಾರೆ.
Recommended Video
ಸರ್ ಅಥವಾ ಗಾರು ಎಂದು ಕರೆಯಬೇಕೆಂದ ಅಭಿಮಾನಿಗಳು
ಅನುಪಮಾ ಕ್ಷಮೆಯಾಚಿಸಿದ ಬಳಿಕ ಕೆಲವು ನೆಟ್ಟಿಗರು ಪರವಾಗಿಲ್ಲ ಬಿಡಿ ಡಾರ್ಲಿಂಗ್ ಎಂದು ಹೇಳಿದ್ರೆ ಇನ್ನು ಕೆಲವರು ನಿಮ್ಮಿಂದ ಇದನ್ನ ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದ್ದಾರೆ. ಪವನ್ ಕಲ್ಯಾಣ್ ನಿಮಗಿಂತ ತುಂಬಾ ದೊಡ್ಡವರು ಅವರನ್ನು ಸರ್, ಗಾರು ಎಂದು ಹೇಳಿ ಕರೆಯಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಅನುಪಮಾ ಸದ್ಯ ತಮಿಳಿನಲ್ಲಿ ಒಂದು ಸಿನಿಮಾ ಮತ್ತು ತೆಲುಗಿನ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.