Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫೇಸ್ಬುಕ್ನಲ್ಲಿ ಅಶ್ಲೀಲವಾಗಿ ಬೈದಿದ್ದ ವ್ಯಕ್ತಿಯನ್ನು ನೇರವಾಗಿ ಭೇಟಿ ಮಾಡಿ ಶಾಕ್ ಕೊಟ್ಟ ನಟಿ
ಸಾಮಾಜಿಕ ಜಾಲತಾಣದಲ್ಲಿ ನಟಿಯರು ಪ್ರತಿದಿನ ಕಿರುಕುಳ ಅನುಭವಿಸುತ್ತಿದ್ದಾರೆ. ಕೆಟ್ಟ ಬೈಗುಳಗಳು, ಅಸಹ್ಯಕರ ಕಮೆಂಟ್ಗಳು ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಇದನ್ನು ಎದುರಿಸುತ್ತಿದ್ದಾರೆ ಬಹುತೇಕ ಸಿನಿಮಾ ನಟಿಯರು.
ಆದರೆ ಇತ್ತೀಚಿನ ದಿನಗಳಲ್ಲಿ ಇದರ ವಿರುದ್ಧ ಸಿಡಿದು ಬೀಳುವ ಗಟ್ಟಿ ಪ್ರವೃತ್ತಿಯನ್ನು ಕೆಲವು ನಟಿಯರು ತೋರುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೆ ಟ್ರೋಲ್ಗಳನ್ನು ಟೀಕಿಸಿ ಪೋಸ್ಟ್ ಹಾಕಿದ್ದರು.
ಆ ಸ್ಟಾರ್ ನಿರ್ದೇಶಕ ನನ್ನ ಜೀವನ ಹಾಳು ಮಾಡಿದ: ನಟಿ ಪೂನಂ ಕೌರ್
ನಟಿ ಮೀರಾ ಚೋಪ್ರಾ ಅಂತೂ ಒಂದು ಹೆಜ್ಜೆ ಮುಂದೆ ಹೋಗಿ ತನಗೆ ಅತ್ಯಾಚಾರ ಬೆದರಿಕೆ ಹಾಕಿದ ಜೂ ಎನ್ಟಿಆರ್ ಅಭಿಮಾನಿಗಳಿಗೆ ಛೀಮಾರಿ ಹಾಕಿದ್ದಲ್ಲದೆ, ನಟನನ್ನೂ ಪ್ರಶ್ನೆ ಮಾಡಿದರು ಜೊತೆಗೆ ಪೊಲೀಸ್ ದೂರು ಸಹ ನೀಡಿದರು. ಇದೇ ಸಾಲಿಗೆ ಸೇರುತ್ತಾರೆ ಮಾಲಯಾಳಂ ಸಿನಿಮಾ ನಟಿ ಅಪರ್ಣಾ ನಾಯರ್.
ಏಕೆ ಹೀಗೆ ಮಾಡಿದೆ ಎಂದು ಪ್ರಶ್ನಿಸಿದರು
ಸಾಮಾಜಿಕ ಜಾಲತಾಣದಲ್ಲಿ ತನ್ನ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ ಅಜಿತ್ ಕುಮಾರ್ ಎಂಬ ವ್ಯಕ್ತಿಯ ವಿರುದ್ಧ ದೂರು ನೀಡಿದ್ದರು ಅಪರ್ಣಾ ನಾಯರ್. ಅಷ್ಟೆ ಅಲ್ಲ ಆತನನ್ನು ನೇರವಾಗಿ ಭೇಟಿ ಮಾಡಿ 'ಏಕೆ ಹೀಗೆ ಮಾಡಿದೆ?' ಎಂದು ಪ್ರಶ್ನೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಶ್ಲೀಲ ಕಮೆಂಟ್ ಮಾಡಿದ್ದ ಅಜಿತ್ ವಿರುದ್ಧ ದೂರು
ಈ ಬಗ್ಗೆ ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಅಪರ್ಣಾ, 'ನನ್ನ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ ಅಜಿತ್ ಕುಮಾರ್ ವಿರುದ್ಧ ಸೈಬರ್ ಠಾಣೆಗೆ ದೂರು ನೀಡಿದ್ದೆ. ಅದರಂತೆ ಠಾಣೆಯಿಂದ ಇಂದು ನನಗೆ ಕರೆ ಬಂತು, ಕಚೇರಿಗೆ ಬರುವಂತೆ ತಿಳಿಸಿದರು. ನಾನೂ ಸಹ ಹೋದೆ ಕೆಲವು ನಿಮಿಷ ಕಾಯ್ದ ಬಳಿಕ, ನನ್ನ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದ ಅಜಿತ್ ಕುಮಾರ್ ಎದುರಿಗೆ ಸಿಕ್ಕಿದ' ಎಂದು ಬರೆದುಕೊಂಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ತಂಗಿಯನ್ನು ಅಶ್ಲೀಲ ಪದಗಳಿಂದ ನಿಂದಿಸಿದ ಜೂ. ಎನ್ಟಿಆರ್ ಫ್ಯಾನ್ಸ್
ದೂರು ಹಿಂಪಡೆದ ಅಪರ್ಣಾ: ಕಾರಣವೇನು?
ವಿಚಿತ್ರವೇನೆಂದರೆ ಆತನನ್ನು ಭೇಟಿ ಮಾಡಿದ ಬಳಿಕ ಅಪರ್ಣಾ ತಾವು ನೀಡಿದ್ದ ದೂರನ್ನು ಹಿಂಪಡೆದಿದ್ದಾರೆ. ಅಜಿತ್ನ ಕುಟುಂಬ ಮತ್ತು ಆರ್ಥಿಕ ಸ್ಥಿತಿ ನೋಡಿ ನಾನು ನನ್ನ ದೂರನ್ನು ಹಿಂಪಡೆದೆ ಆದರೆ ಆತನಿಂದ ಒಂದು ಕ್ಷಮಾಪಣಾ ಪತ್ರವನ್ನು ಬರೆಸಿಕೊಂಡೆ, ಇನ್ನೆಂದೂ, ಇನ್ಯಾರಿಗೂ ಹೀಗೆ ಮಾಡಬೇಡ ಎಂದು ಹೇಳಿದೆ' ಎಂದು ಬರೆದಿಕೊಂಡಿದ್ದಾರೆ ಅಪರ್ಣಾ.
ಅಶ್ಲೀಲ ಕಮೆಂಟ್ ಮಾಡಿದ್ದು ಏಕೆ?
ಆದರೆ ಅಶ್ಲೀಲ ಕಮೆಂಟ್ ಮಾಡಲು ಕಾರಣವೇನು? ಎಂದು ನಾನು ಆತನನ್ನು ಪ್ರಶ್ನೆ ಮಾಡಿದೆ. ಅದಕ್ಕೆ ಆತ ಹೇಳಿದ್ದು, 'ನಾನು ಸಾಕಷ್ಟು ಈ ರೀತಿಯ ಕಮೆಂಟ್ಗಳನ್ನು ಮಾಡುತ್ತಿರುತ್ತೇನೆ, ಇದನ್ನೂ ಹಾಗೆಯೇ 'ಸ್ವಾಭಾವಿಕ'ವಾಗಿ ಮಾಡಿದೆ' ಎಂದನಂತೆ. ಆತ ರಾಜಕಾರಣಿಗಳಿಗೆ, ಇತರ ನಟಿಯರಿಗೂ ಕೆಟ್ಟ ಕಮೆಂಟ್ಗಳನ್ನು ಮಾಡುತ್ತಿರುತ್ತಾನಂತೆ.
ಬಹಳ ಅಶ್ಲೀಲವಾಗಿ ಕಮೆಂಟ್ ಮಾಡಿದ್ದ ಅಜಿತ್
ಅಪರ್ಣಾ ನಾಯರ್ ಕೆಲವು ದಿನಗಳ ಹಿಂದೆ ತಮ್ಮ ಚಿತ್ರವೊಂದನ್ನು ಹಂಚಿಕೊಂಡಿದ್ದರು. ಅಪರ್ಣಾ ಮರ್ಮಾಂಗಳನ್ನು ಉಲ್ಲೇಖಿಸಿ ಬಹು ಅಶ್ಲೀಶವಾಗಿ ಅಜಿತ್ ಎಂಬಾತ ಕಮೆಂಟ್ ಹಾಕಿದ್ದ. ಅಜಿತ್ ಕಮೆಂಟ್ ಬಗ್ಗೆ ದೂರು ಕೊಡುವುದಕ್ಕೆ ಮುನ್ನವೇ ಅಪರ್ಣಾ ಅದರ ಬಗ್ಗೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದರು.
'ಹೆಣ್ಣನ್ನು ಗೌರವಿಸುವುದು ತಾರಕ್ಗೆ ಗೊತ್ತು': ಜೂ. ಎನ್ಟಿಆರ್ ಬೆಂಬಲಕ್ಕೆ ಬಂದ ನಟಿ