'ಅಯ್ಯಪ್ಪನುಂ-ಕೋಶಿಯುಂ' ನಿರ್ದೇಶಕನಿಗೆ ಹೃದಯಾಘಾತ
ಅಯ್ಯಪ್ಪನುಂ-ಕೋಶಿಯುಂ ಇತ್ತೀಚಿನ ಸೂಪರ್ ಹಿಟ್ ಮಲಯಾಳಂ ಸಿನಿಮಾ. ಈ ಸುಂದರ ಸಿನಿಮಾದ ನಿರ್ದೇಶಕ ಹೃದಯಾಘಾತಕ್ಕೆ ತುತ್ತಾಗಿದ್ದಾರೆ.
Recommended Video
ಅಯ್ಯಪ್ಪನುಂ-ಕೋಶಿಯುಂ ಸಿನಿಮಾದ ನಿರ್ದೇಶಕ ಕೆ.ಆರ್.ಸಚ್ಚಿದಾನಂದ್ ಅವರಿಗೆ ನಿನ್ನೆ (ಜೂನ್ 16) ರಂದು ಬೆಳಿಗ್ಗೆ ಹೃದಯಾಘಾತವಾಗಿದ್ದು, ಅವರನ್ನು ತ್ರಿಶೂರ್ನ ಜೂಬ್ಲಿ ಮಿಷನ್ ಮೆಡಿಕಲ್ ಕಾಲೇಜ್ಗೆ ದಾಖಲು ಮಾಡಲಾಗಿದೆ.
ಕೆ.ಆರ್.ಸಚ್ಚಿದಾನಂದ್ ಅಥವಾ ಸಚ್ಚಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಐಸಿಯುನಲ್ಲಿ ವೆಂಟಿಲೇಟರ್ ನ ಸಹಾಯದೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯು ಹೇಳಿಕೆ ಬಿಡುಗಡೆ ಮಾಡಿದೆ.

ಹಲವು ರೀತಿಯ ಸ್ಕ್ಯಾನ್ಗಳು, ಪರೀಕ್ಷೆಗಳನ್ನು ಸಚ್ಚಿ ಅವರಿಗೆ ಮಾಡಿದ್ದಾಗಿ ಆಸ್ಪತ್ರೆ ಹೇಳಿದ್ದು, ಸಿಟಿ ಸ್ಕ್ಯಾನ್ ವರದಿ ಪ್ರಕಾರ ಸಚ್ಚಿ ಅವರಿಗೆ ಮೆದುಳಿಗೆ ಸಹ ಹಾನಿಯಾಗಿದೆಯಂತೆ. ಪ್ರಸ್ತುತ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರಾದರೂ 72 ಗಂಟೆ ನಂತರವೇ ಅವರ ಆರೋಗ್ಯದ ಬಗ್ಗೆ ಖಚಿತ ಮಾಹಿತಿ ನೀಡಬಹುದಾಗಿ ಎಂದಿದ್ದಾರೆ.

ಪೃಥ್ವಿರಾಜ್ ಸುಕುಮಾರನ್, ಬಿಜು ಮೆನನ್ ನಟಿಸಿರುವ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾ ಮಲೆಯಾಳಂನಲ್ಲಿ ಸೂಪರ್ ಹಿಟ್ ಆಗಿದ್ದು, ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ರೀಮೇಕ್ ಆಗುತ್ತಿದೆ. ಕನ್ನಡದಲ್ಲಿಯೂ ಸಿನಿಮಾವನ್ನು ರೀಮೇಕ್ ಮಾಡುವ ಸಾಧ್ಯತೆ ಇದೆ.


Click it and Unblock the Notifications











