Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೋಹನ್ ಲಾಲ್ ಅಭಿನಯಕ್ಕೆ ಕೈಗನ್ನಡಿ ಸಂಸ್ಕೃತ ನಾಟಕ ಕರ್ನಾಭರಂ
'ದೇವರ ದಯೆ, ನಾನು ವಿವಿಧ ಭಾಷೆಗಳ 350ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದೇನೆ. ಮಲಯಾಳಿಗಳಂತೆ ಇತರ ಭಾಷೆಯ ಜನರು ಕೂಡ ನನ್ನನ್ನು ನಮ್ಮವರು ಎಂಬಂತೆ ಪ್ರೀತಿಸುತ್ತಿದ್ದಾರೆ. ನಾನು ಒಬ್ಬ ನಟ ಮಾತ್ರ, ನಟನಾಗಿ ನನ್ನ ಪಾತ್ರಕ್ಕೆ ಎಷ್ಟು ನ್ಯಾಯ ಒದಗಿಸಲು ಸಾಧ್ಯವೋ ಅಷ್ಟನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ನಾನು ಸದಾ ಮಾಡುತ್ತಲೇ ಇರುತ್ತೇನೆ. ಆದರೂ ಎಷ್ಟೋ ಸಲ ನಾನು ಶೇಕಡ 50ರಷ್ಟು ಅಭಿನಯಿಸಿದ್ದೇನೆ ಅಂತ ಅನಿಸುತ್ತದೆ. ನೂರರಷ್ಟು ಪರಿಪೂರ್ಣತೆ ಮತ್ತು ಪಕ್ವತೆಯನ್ನು ಯಾವ ನಟನೂ ಅಷ್ಟು ಸುಲಭವಾಗಿ ಕೊಡಲು ಸಾಧ್ಯವಿಲ್ಲ. ಹೀಗಂತ ನೇರವಾಗಿ ಹೇಳುವುದು ಮತ್ಯಾರು ಅಲ್ಲ ಖ್ಯಾತ ನಟ ಮೋಹನ್ ಲಾಲ್.
ಮಲಯಾಳಂ ಚಿತ್ರರಂಗದಲ್ಲಿ ಒಂದು ಕಾಲವನ್ನು ಪ್ರೇಮ್ ನಾಜೀರ್ ಕಾಲ ಅಂತ ಪರಿಗಣಿಸಲಾಗುತ್ತಿತ್ತು. 80 ಮತ್ತು 90ರ ದಶಕಕ್ಕೆ ಬಂದಾಗ ಮೋಹನ್ ಲಾಲ್ ಮತ್ತು ಮಮ್ಮುಟ್ಟಿ ಜೋಡಿ ಅಕ್ಷರಶಃ ಮಲಯಾಳಂ ಚಿತ್ರರಂಗವನ್ನು ಆವರಿಸಿಕೊಂಡಿತು. ಇಬ್ಬರ ಮಧ್ಯೆ ಯಾವುದೇ ವೈರತ್ವ ಇರಲಿಲ್ಲ. ಇಬ್ಬರೂ ಅವರವರ ಚಿತ್ರಗಳಲ್ಲಿ ಅವರವರ ಪಾತ್ರಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡುತ್ತಿದ್ದರು. ಜೊತೆಗೆ ಇಬ್ಬರು ಒಟ್ಟಿಗೆ ಅಭಿನಯವನ್ನು ಮಾಡಿ ಅಭಿನಯದಲ್ಲಿ ಪೈಪೋಟಿ ಕೊಡುತ್ತಿದ್ದರು.
ರಾಷ್ಟ್ರೀಯ ನಾಟಕ ಶಾಲೆಯ ನೂತನ ಅಧ್ಯಕ್ಷರಾಗಿ ಪರೇಶ್ ರಾವಲ್ ಆಯ್ಕೆ
ಇಬ್ಬರು ಮಲಯಾಳಂ ಚಿತ್ರರಂಗವನ್ನು ವ್ಯಾಪಕತೆ ಗೊಳಿಸಿದರು. ಇಬ್ಬರು ಇತರ ಭಾಷೆಗಳ ಚಿತ್ರರಂಗಗಳಲ್ಲಿ ನಟಿಸಿ ಹೆಸರು ಕೂಡ ಗಳಿಸಿದರು. ಇಬ್ಬರು ಪ್ರಯೋಗಗಳನ್ನು ಇಷ್ಟಪಡುತ್ತಿದ್ದರು, ಪಡುತ್ತಿದ್ದಾರೆ ಮತ್ತು ಪ್ರಯೋಗಗಳನ್ನು ಮಾಡುತ್ತಲೇ ಇದ್ದಾರೆ. ಸಿನಿಮಾ ರಂಗದ ಹೊರಗೆ ಮೋಹನ್ ಲಾಲ್ ಮಾಡಿದ ಒಂದು ಪ್ರಯೋಗ ಬಹಳ ವಿಶಿಷ್ಟವಾದದ್ದು. ಅದೇ ಸಂಸ್ಕೃತದ ಭಾಸ ನಾಟಕದ ಕವಿಯ ನಾಟಕವನ್ನು ಆಧರಿಸಿದ ಕರ್ನಾಭರಂ. ಮುಂದೆ ಓದಿ...
ರಾಷ್ಟ್ರ ಪ್ರಶಸ್ತಿ ಗೆದ್ದ 'ಮರಕ್ಕರ್' ಬಿಡುಗಡೆ ದಿನಾಂಕ ಪ್ರಕಟ
ಕರ್ಣನ ಸಂಕಟ
ಕರ್ಣಭಾರಂ ಅಥವಾ ಕರ್ಣನ ಸಂಕಟ (ಅಕ್ಷರಶಃ: ಕರ್ಣನ ಹೊರೆ) ಭಾಸಕವಿ ಬರೆದಿರುವ ಸಂಸ್ಕೃತ ನಾಟಕವಾಗಿದ್ದು, ಕಾಳಿದಾಸ ತನ್ನ ಮಾಳವಿಕಾಗ್ನಿಮಿತ್ರಂ ನಾಟಕದ ಆರಂಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ನಾಟಕವು ಕುರುಕ್ಷೇತ್ರ ಯುದ್ಧದ ಹಿಂದಿನ ದಿನದ ಕರ್ಣನ ಮಾನಸಿಕ ನೋವನ್ನು ವಿವರಿಸುತ್ತದೆ. ಕರ್ಣಭಾರಂ ಮೂಲಭೂತವಾಗಿ ಭಾರತೀಯ ಮಹಾಕಾವ್ಯ ಮಹಾಭಾರತವನ್ನು ಆಧರಿಸಿ ಭಾಸಕವಿ ರಚಿಸಿದ್ದಾನೆ. ಧೀರ, ಉದಾರ, ನೀತಿವಂತ ಕರ್ಣನು ಯುದ್ಧಭೂಮಿಯತ್ತ ಸವಾರಿ ಮಾಡುತ್ತಿರುವುದನ್ನು ಕರ್ಣಭಾರಂ ತೋರಿಸುತ್ತದೆ, ಅಲ್ಲಿ ಹೃದಯ ವಿದ್ರಾವಕ ಸಂದರ್ಭಗಳಲ್ಲಿ ಅವನ ಸಾವು ಖಚಿತವಾಗಿದೆ. ಸಾವು ಖಚಿತವಾದ ಸಂದರ್ಭದಲ್ಲೂ ಕರ್ಣನ ಮನಸ್ಥಿತಿ ಹೇಗಿತ್ತು? ಅವನು ಹೇಗೆ ವರ್ತಿಸುತ್ತಾನೆ? ಅಂತ ಎಳೆಎಳೆಯಾಗಿ ಈ ನಾಟಕ ತೆರೆದಿಡುತ್ತದೆ. ಹಾಗಂತ ದುರಂತ ವೇದಿಕೆಯ ಮೇಲೆ ಸಂಭವಿಸುವುದಿಲ್ಲ.
ಮೂಲ ಸಂಸ್ಕೃತವೇ ಆದರೂ ಮಲಯಾಳಂ ಪ್ರಭಾವ!
ಮೂಲತಃ ಇದು ಸಂಸ್ಕೃತ ನಾಟಕವೇ ಆಗಿದ್ದರು, ಇದು ಭಾಸನಿಗೆ ಕೆಲವು ಭಿನ್ನಾಭಿಪ್ರಾಯಗಳನ್ನು ಹೊಂದಿದೆ. ಈ ನಾಟಕ ಸಂಸ್ಕೃತ ಭಾಷೆಯ ಮಲಯಾಳಿ ಲಿಪಿಯು 105 ತಾಳೆ ಎಲೆಗಳ ಮೇಲೆ ಕಂಡುಬಂದಿದೆ, ಕಂಡುಬಂದಾಗ ಸುಮಾರು 300 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ.
-ನಾಟಕದ ಪ್ರಮುಖ ಅಂಶಗಳು
ಈ ನಾಟಕದ ಪ್ರಮುಖ ಅಂಶಗಳೆಂದರೆ ಮಂಗಳ ಶ್ಲೋಕ, ಮುನ್ನುಡಿ, ಸೈನಿಕನ ಪ್ರವೇಶ, ಕರ್ಣನ ವೇದನೆ, ಪರಶುರಾಮನ ಶಾಪ, ಕರ್ಣನಿಂದ ಆಂತರಿಕ ತೇಜಸ್ಸು ಕಂಡುಕೊಳ್ಳುವುದು, ಕವಚ ಮತ್ತು ಕುಂಡಲ ದಾನ, ವಿಮಲ ಶಕ್ತಿ ಮತ್ತು ಭಾರತ ವಾಕ್ಯ.
ನಾಟಕದ ಆರಂಭದ ಅಂಕ
ನಾಟಕವು ದುರ್ಯೋಧನನಿಂದ ಕಳುಹಿಸಲ್ಪಟ್ಟ ಸೈನಿಕನೊಬ್ಬ ಕರ್ಣನಿಗೆ ಯುದ್ಧಭೂಮಿಗೆ ಹೋಗುವ ಸಮಯ ಬಂದಿದೆ ಎಂದು ತಿಳಿಸುವ ದೃಶ್ಯದೊಂದಿಗೆ ಆರಂಭವಾಗುತ್ತದೆ. ಕರ್ಣನು ತನ್ನ ಸಂಪೂರ್ಣ ನಡವಳಿಕೆಯಿಂದ ತನ್ನನ್ನು ತಾನೇ ಪ್ರಕಟಪಡಿಸಿಕೊಳ್ಳುವ ತೀವ್ರ ಯಾತನೆ ಮತ್ತು ದುಃಖದಿಂದ ತುಂಬಿರುವುದನ್ನು ಕಂಡುಕೊಳ್ಳುತ್ತಾನೆ. ಇದು ಅವನಿಗೆ ಮಹಾನ್ ಯುದ್ಧದ ದಿನ ಎಂದು ವ್ಯಂಗ್ಯವಾಗಿರುತ್ತದೆ (ಶ್ಲೋಕ -6). ಆದರೆ, ಕರ್ಣನು ಕುಂತಿಯ (ಶ್ಲೋಕ -7) ಹಿರಿಯ ಮಗನೆಂಬ ಸತ್ಯ ತನ್ನನ್ನು ಅಲುಗಾಡಿಸಲು ಸಾಧ್ಯವಿಲ್ಲ, ತನ್ನ ಪರಮ ಶತ್ರು ಈಗ ಅವನ ಕಿರಿಯ ಸಹೋದರ -ಅರ್ಜುನ (ಶ್ಲೋಕ -8). ಕರ್ಣನು ತನ್ನ ಗುರುಗಳ ಶಾಪವನ್ನು ಒಳಗೊಂಡ ಘಟನೆಯನ್ನು ನೆನಪಿಸಿಕೊಳ್ಳುತ್ತಾನೆ. ಮದ್ರ ರಾಜ ಮತ್ತು ಕರ್ಣನ ಸಾರಥಿಯಾದ ಶಲ್ಯನಿಗೆ ಅವನು ಈ ವಿಷಯಗಳನ್ನು ಹೇಳುತ್ತಿದ್ದಂತೆ, ಅಲ್ಲಿಗೆ ಬ್ರಾಹ್ಮಣ ವೇಷಧಾರಿಯಾಗಿ ಬರುವ ಇಂದ್ರನನ್ನು ಗಮನಿಸಿದ ಶಲ್ಯನು ಇಂದ್ರನ ಬಗ್ಗೆ ಎಚ್ಚರಿಕೆ ಕೊಡುತ್ತಾನೆ. ಆದರೆ ದೇಹಿ ಎಂದು ಬಂದ ಇಂದ್ರನಿಗೆ ಕರ್ಣನು ತನ್ನ ರಕ್ಷಾಕವಚ ಮತ್ತು ಕಿವಿಯೋಲೆಗಳನ್ನು ನೀಡುತ್ತಾನೆ. ಅದನ್ನು ಪಡೆದ ಇಂದ್ರನು ಅಲ್ಲಿಂದ ನಿರ್ಗಮಿಸುತ್ತಾನೆ. "ಇಂದ್ರನು ನಿಮಗೆ ಮೋಸ ಮಾಡಿದನು!", ಶಲ್ಯ ಅಳುತ್ತಾನೆ. "ಇಲ್ಲ, ನನ್ನಿಂದ ಮೋಸ ಹೋದವನು ಇಂದ್ರ" ಎಂದು ಕರ್ಣ ಪ್ರತಿಕ್ರಿಯಿಸುತ್ತಾನೆ. ಕರ್ಣನ ಉದಾರ ದಾನದ ಎದುರು ತಲೆ ತಗ್ಗಿಸಿ ಇಂದ್ರನು ನಿರ್ಗಮಿಸಿದ ಸ್ವಲ್ಪ ಸಮಯದ ನಂತರ, ಇಂದ್ರನು ಕಳುಹಿಸಿದ ಸಂದೇಶವಾಹಕನು ಬಂದ ಇಂದ್ರನು ಪ್ರತಿಯಾಗಿ ಕಳುಹಿಸಿದದನ್ನು ಅವನಿಗೆ ನೀಡುತ್ತಾನೆ (ವಿಮ್ಲ ಆಯುಧ). ನಾಟಕವು ದುರ್ಯೋಧನನ ಸಂದೇಶವಾಹಕನಿಂದ ಆರಂಭವಾಗುತ್ತದೆ ಮತ್ತು ಇಂದ್ರನ ಸಂದೇಶವಾಹಕ ಒಳಗೊಂಡ ದೃಶ್ಯದೊಂದಿಗೆ ಕೊನೆಗೊಳ್ಳುತ್ತದೆ.
ಕಾಡುವ ಮೋಹನ್ ಲಾಲ್ ಅಭಿನಯ
ಈ ನಾಟಕವನ್ನು ನೋಡುವಷ್ಟು ಸಮಯ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಾರೆ ಮೋಹನ್ ಲಾಲ್. ಅಲ್ಲಿ ಅವರ ಭಾವಾಭಿನಯ ಮೋಹನ್ ಲಾಲ್ ಅವರನ್ನು ಮರೆಸಿ ನಮ್ಮನ್ನು ಕರ್ಣನನ್ನು ಮಾತ್ರ ಅಲ್ಲಿ ಉಳಿಸುತ್ತದೆ. ಮೋಹನ್ ಲಾಲ್ ಯಾಕೆ ಅದ್ಭುತವಾದ ನಟ ಎಂಬುವುದಕ್ಕೆ ಈ ನಾಟಕವೇ ಕೈಗನ್ನಡಿ!