Don't Miss!
- News Heavy Rain: ಭಾರೀ ಗಾಳಿ, ಮಳೆಗೆ ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು: ಸಿಡಿಲು ಬಡಿದು 25 ಮೇಕೆಗಳ ಸಾವು
- Lifestyle ಹೊಟ್ಟೆಯೇ ಇಲ್ಲದೆ ಬದುಕಿದ್ದ ನತಾಶಾ ದಿಡ್ಡಿ ನಿಧನ...! ಈಕೆ ಯಾರು ಗೊತ್ತಾ?
- Finance ಸುಗಮ, ಸುರಕ್ಷಿತ ಸಂಚಾರಕ್ಕಾಗಿ ವಿಶೇಷ ಅಭಿಯಾನ ಆರಂಭಿಸಿದ ಬೆಂಗಳೂರು ಸಂಚಾರಿ ಪೊಲೀಸ್
- Automobiles ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್ ಥಾರ್: ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟ ಮಹೀಂದ್ರಾ ಫ್ಯಾನ್ಸ್!
- Sports ಟಿ20 ವಿಶ್ವಕಪ್ 2024: ಟೀಮ್ ಇಂಡಿಯಾಗೆ ದೊಡ್ಡ ಚಿಂತೆಯಾದ ಈ ಆರಂಭಿಕನ ಫಾರ್ಮ್
- Technology iPhone: ಐಫೋನ್ 16 ಸರಣಿಯ ಕ್ಯಾಮೆರಾ ಫೀಚರ್ಸ್ ಲೀಕ್! ಏನೆಲ್ಲಾ ವಿಶೇಷತೆ ಇವೆ?..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ಮೋಹನ್ಲಾಲ್ಗಾಗಿ ನಿಯಮ ಸಡಿಲಿಸಲು ಮುಂದಾದ ಕೇರಳ ಸರ್ಕಾರ!
ಕೋರೊನಾ ಲಾಕ್ಡೌನ್ ನಿಯಮಗಳನ್ನು ಕಠಿಣವಾಗಿ ಹೇರಿದ, ಪಾಲಿಸಿದ ರಾಜ್ಯಗಳಲ್ಲಿ ಕೇರಳ ಸಹ ಒಂದು. ಹಠಾತ್ತನೆ ಏರಿಕೆಯಾದ ಕೊರೊನಾ ಪ್ರಕರಣಗಳು ಇದಕ್ಕೆ ಕಾರಣ.
ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಚಿತ್ರಮಂದಿರಗಳು ಪೂರ್ಣ ಆಸನ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಆದರೆ ಕೇರಳದಲ್ಲಿ ಮಾತ್ರ ಇನ್ನೂ 50% ಸೀಟು ಸಾಮರ್ಥ್ಯದೊಂದಿಗೆ ಚಿತ್ರಮಂದಿರಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಇದೀಗ ನಟ ಮೋಹನ್ಲಾಲ್ಗಾಗಿ ಕೇರಳ ಸರ್ಕಾರವು ನಿಯಮ ಸಡಿಲಿಸಲು ಮುಂದಾಗಿದೆ.
ಮೋಹನ್ಲಾಲ್ ನಟನೆಯ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ 'ಮರಕ್ಕರ್' ಬಿಡುಗಡೆ ಕೇರಳದಲ್ಲಿ ವಿವಾದವಾಗಿತ್ತು. ನಿರ್ಮಾಪಕ ಆಂಟೊನಿ ಪೆರಂಬವೂರ್, 'ಮರಕ್ಕರ್' ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆಗೆ ಮುಂದಾಗಿದ್ದರು. ಇದಕ್ಕೆ ಚಿತ್ರಮಂದಿರ ಮಾಲೀಕರು, ವಿತರಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸರ್ಕಾರವು ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು.
ಸಂಸ್ಕೃತಿ ಇಲಾಖೆ ಸಚಿವರು ಚಿತ್ರಮಂದಿರ ಮಾಲೀಕರ ಸಂಘ, ವಿತರಕರ ಸಂಘ ಹಾಗೂ ಮೋಹನ್ಲಾಲ್, ನಿರ್ಮಾಪಕ ಆಂಟೊನಿ ಜೊತೆಗೆ ಸಂಧಾನ ನಡೆಸಿ ಸಿನಿಮಾವು ಚಿತ್ರಮಂದಿರದಲ್ಲಿಯೇ ಬಿಡುಗಡೆ ಮಾಡುವಂತೆ ಮನವೊಲಿಸಿದ್ದಾರೆ. ಆದರೆ ಈ ಸಂಧಾನದ ವೇಳೆ ಸಿನಿಮಾ ಬಿಡಗುಡೆ ವೇಳೆಗೆ ಚಿತ್ರಮಂದಿರಗಳಲ್ಲಿ 100% ಆಸನ ಭರ್ತಿಗೆ ಸರ್ಕಾರ ಅವಕಾಶ ಕೊಡಬೇಕೆಂಬ ಷರತ್ತನ್ನು ನಿರ್ಮಾಪಕರು ಇಟ್ಟಿದ್ದರು, ಷರತ್ತಿಗೆ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ.
ಇದೀಗ 50% ಸೀಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕೇರಳ ಚಿತ್ರಮಂದಿರಗಳು ಡಿಸೆಂಬರ್ ಆರಂಭದ ವೇಳೆಗೆ ಪೂರ್ಣ ಸೀಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲಿವೆ. ಡಿಸೆಂಬರ್ 02 ರಂದು 'ಮರಕ್ಕರ್' ಸಿನಿಮಾ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
ಅದೇ ಸಮಯಕ್ಕೆ ಸರಿಯಾಗಿ ತೆಲುಗಿನ 'ಪುಷ್ಪ' ಸಿನಿಮಾ ಸಹ ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗಲಿದ್ದು, ಆ ಸಿನಿಮಾಕ್ಕೂ ಪೂರ್ಣ ಸೀಟು ಸಾಮರ್ಥ್ಯದೊಂದಿಗೆ ಸಿನಿಮಾ ಬಿಡಗುಡೆ ಮಾಡುವ ಅವಕಾಶ ಲಭ್ಯವಾಗಲಿದೆ. ಅಲ್ಲು ಅರ್ಜುನ್ಗೆ ಕೇರಳದಲ್ಲಿಯೂ ಬಹಳ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ.
2018 ರಲ್ಲಿ ಚಿತ್ರೀಕರಣ ಆರಂಭಿಸಿದ 'ಮರಕ್ಕರ್' ಸಿನಿಮಾ 2019 ರಲ್ಲಿ ಚಿತ್ರೀಕರಣ ಮುಗಿಸಿ ಅದೇ ವರ್ಷದಲ್ಲಿ ಸೆನ್ಸಾರ್ ಸಹ ಪೂರ್ಣಗೊಳಿಸಿ ಬಿಡುಗಡೆಗೆ ತಯಾರಾಗಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಬಿಡುಗಡೆ ತಡವಾಗುತ್ತಲೇ ಬಂದಿದೆ. ಪ್ರಿಯದರ್ಶನ್ ನಿರ್ದೇಶನದ ಈ ಸಿನಿಮಾಕ್ಕೆ ಅತ್ಯುತ್ತಮ ಸಿನಿಮಾ ರಾಷ್ಟ್ರಪ್ರಶಸ್ತಿ ಸಹ ಲಭಿಸಿದೆ. ಸಿನಿಮಾದಲ್ಲಿ ಅರ್ಜುನ್ ಸರ್ಜಾ, ಸುನಿಲ್ ಶೆಟ್ಟಿ, ಕೀರ್ತಿ ಸುರೇಶ್, ಪ್ರಭು, ಮಂಜು ವಾರಿಯರ್ ಇನ್ನೂ ಹಲವು ಸ್ಟಾರ್ ನಟರ ದಂಡೇ ಇದೆ. ಸಿನಿಮಾದಲ್ಲಿ ನಾಲ್ಕನೇ ಕುಂಜಳಿ ಮರಕ್ಕರ್ ಪಾತ್ರದಲ್ಲಿ ಮೋಹನ್ಲಾಲ್ ನಟಿಸಿದ್ದಾರೆ.