twitter
    For Quick Alerts
    ALLOW NOTIFICATIONS  
    For Daily Alerts

    ವಿದೇಶದಲ್ಲಿ ಸಿಲುಕಿಕೊಂಡಿರುವ ಖ್ಯಾತ ನಟ ಕೊನೆಗೂ ವಾಪಸ್ ಬರಲಿದ್ದಾರೆ

    |

    ಶೂಟಿಂಗ್‌ ಗೆಂದು ವಿದೇಶಕ್ಕೆ ತೆರಳಿದ್ದ ಮಲೆಯಾಳಂ ಖ್ಯಾತ ನಟ ಕೊನೆಗೂ ಭಾರತಕ್ಕೆ ವಾಪಸ್ಸಾಗುತ್ತಿದ್ದಾರೆ. ಅವರೊಂದಿಗೆ ಚಿತ್ರೀಕರಣ ತಂಡವೂ ವಾಪಸ್ ಬರಲಿದೆ.

    Recommended Video

    Shwetha srivatsav playing with her cute daughter.

    ಮಲೆಯಾಳಂ ಖ್ಯಾತ ನಟ ಫೃಥ್ವಿರಾಜ್ ಸುಕುಮಾರನ್ ಸಿನಿಮಾದ ಚಿತ್ರೀಕರಣಕ್ಕೆಂದು ಆಫ್ರಿಕಾದ ಜೋರ್ಡನ್‌ ಗೆ ತೆರಳಿದ್ದರು. ಆಗಲೇ ಕೊರೊನಾ ವಕ್ಕರಿಸಿದ ಕಾರಣ ಎರಡು ತಿಂಗಳಿಗೂ ಹೆಚ್ಚು ಕಾಲ ಅವರು ಅಲ್ಲಿಯೇ ಸಿಲುಕಿಕೊಂಡಿದ್ದಾರೆ.

    'ಅಪ್ಪ ಇವತ್ತು ಮನೆಗೆ ಬರ್ತಾರಾ?': ಕಣ್ಣೀರಿಡುತ್ತಾ ಕೇಳುತ್ತಿದ್ದಾಳೆ ಹೀರೋ ಮಗಳು'ಅಪ್ಪ ಇವತ್ತು ಮನೆಗೆ ಬರ್ತಾರಾ?': ಕಣ್ಣೀರಿಡುತ್ತಾ ಕೇಳುತ್ತಿದ್ದಾಳೆ ಹೀರೋ ಮಗಳು

    ಫೃಥ್ವಿರಾಜ್ ಸುಕುಮಾರನ್ ಮತ್ತು ನಿರ್ದೇಶಕ ಬ್ಲೆಸ್ಸಿ ಹಾಗೂ 58 ಮಂದಿ ಜೋರ್ಡನ್‌ನಲ್ಲಿ ಸಿಲುಕಿದ್ದಾರೆ. ಆದರೆ ಕೊನೆಗೂ ಅವರು ಭಾರತಕ್ಕೆ ಹಿಂದಿರುಗುವ ಅವಕಾಶ ಒದಗಿ ಬಂದಿದೆ.

    ಶುಕ್ರವಾರ ಭಾರತಕ್ಕೆ ಬರಲಿದ್ದಾರೆ

    ಶುಕ್ರವಾರ ಭಾರತಕ್ಕೆ ಬರಲಿದ್ದಾರೆ

    ಪೃಥ್ವಿರಾಜ್ ಸುಕುಮಾರನ್ ಹಾಗೂ ಚಿತ್ರತಂಡವು ಶುಕ್ರವಾರ ಭಾರತಕ್ಕೆ ವಾಪಸ್ ಬರಲಿದ್ದಾರೆ. ಏರ್ ಇಂಡಿಯಾ ಫ್ಲೈಟ್ ಮುಖಾಂತರ ಅವರು ದೆಹಲಿಗೆ ಬಂದು, ಅಲ್ಲಿಂದ ವಿಶೇಷ ವಿಮಾನದಲ್ಲಿ ಕೊಚ್ಚಿ ಗೆ ತಲುಪಲಿದ್ದಾರೆ.

    ಮಾರ್ಚ್‌ನಲ್ಲಿ ಜೋರ್ಡನ್‌ ಗೆ ತೆರಳಿದ್ದರು

    ಮಾರ್ಚ್‌ನಲ್ಲಿ ಜೋರ್ಡನ್‌ ಗೆ ತೆರಳಿದ್ದರು

    ಮಾರ್ಚ್‌ ನಲ್ಲಿ ಪೃಥ್ವಿರಾಜ್ ಸುಕುಮಾರನ್ ಮತ್ತು ಚಿತ್ರತಂಡ ಜೋರ್ಡನ್‌ ಗೆ ತೆರಳಿದ್ದರು. ಅವರು ಅಲ್ಲಿ ತಲುಪಿದ ಕೆಲವೇ ದಿನಕ್ಕೆ ಅಂತರಾಷ್ಟ್ರೀಯ ವಿಮಾನಗಳನ್ನು ಬಂದ್ ಮಾಡಲಾಯಿತು. ಹಾಗಾಗಿ ಚಿತ್ರತಂಡ ಚಿತ್ರೀಕರಣ ಮಾಡಿಕೊಂಡು ಅಲ್ಲಿಯೇ ಉಳಿದು ಬಿಟ್ಟರು.

    ನಮ್ಮನ್ನು ಭಾರತಕ್ಕೆ ಕರೆತನ್ನಿ: ವಿದೇಶದ ಮರಳುಗಾಡಿನಲ್ಲಿ ಸಿಲುಕಿಕೊಂಡಿರುವ ನಟ ಪೃಥ್ವಿರಾಜ್ ಮನವಿನಮ್ಮನ್ನು ಭಾರತಕ್ಕೆ ಕರೆತನ್ನಿ: ವಿದೇಶದ ಮರಳುಗಾಡಿನಲ್ಲಿ ಸಿಲುಕಿಕೊಂಡಿರುವ ನಟ ಪೃಥ್ವಿರಾಜ್ ಮನವಿ

    ವಾಪಸ್ ಕರೆದೊಯ್ಯಿರಿ ಎಂದು ಪೃಥ್ವಿರಾಜ್ ಮನವಿ

    ವಾಪಸ್ ಕರೆದೊಯ್ಯಿರಿ ಎಂದು ಪೃಥ್ವಿರಾಜ್ ಮನವಿ

    ಜೋರ್ಡನ್ ನಲ್ಲಿ ತಮ್ಮ ತಂಡ ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಿರುವುದಾಗಿ ಫೃಥ್ವಿರಾಜ್ ಸುಕುಮಾರನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ತಮ್ಮ ತಂಡವನ್ನು ಆದಷ್ಟು ಶೀಘ್ರವಾಗಿ ಇಲ್ಲಿಂದ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿ ಎಂದು ಅವರು ಕೇಳಿಕೊಂಡಿದ್ದರು.

    ಕೇಂದ್ರಕ್ಕೆ ಕೇರಳ ಸರ್ಕಾರ ಮನವಿ ಮಾಡಿತ್ತು

    ಕೇಂದ್ರಕ್ಕೆ ಕೇರಳ ಸರ್ಕಾರ ಮನವಿ ಮಾಡಿತ್ತು

    ಫೃಥ್ವಿರಾಜ್ ಮತ್ತು ಚಿತ್ರತಂಡವನ್ನು ವಾಪಸ್ ಕರೆತರುವಂತೆ ಕೇರಳ ಸರ್ಕಾರವು ಕೇಂದ್ರಕ್ಕೆ ಮನವಿ ಮಾಡಿತ್ತು, ಅಂತೆಯೇ ಕೇಂದ್ರವೂ ಸಹ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಏರ್‌ಲಿಫ್ಟ್ ಮಾಡುವ ಕಾರ್ಯ ಮಾಡುತ್ತಿದೆ. ಇದರ ಭಾಗವಾಗಿಯೇ ವಿಶೇಷ ವಿಮಾನದಲ್ಲಿ ಪೃಥ್ವಿರಾಜ್ ಮತ್ತು ತಂಡ ಈಗ ವಾಪಸ್ ಬರುತ್ತಿದೆ.

    ಲಾಕ್‌ಡೌನ್ ನಡುವೆ ಎರಡನೇ ಮದುವೆಯಾದ ಮಲೆಯಾಳಂ ಖ್ಯಾತ ನಟಲಾಕ್‌ಡೌನ್ ನಡುವೆ ಎರಡನೇ ಮದುವೆಯಾದ ಮಲೆಯಾಳಂ ಖ್ಯಾತ ನಟ

    English summary
    Malayalam famous actor Prithviraj Sukumaran and is team stuck in Jordan from past two months. They are finally coming back to India.
    Wednesday, May 20, 2020, 13:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X