Don't Miss!
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- News Realme Narzo 70: ಭರ್ಜರಿ ಕ್ಯಾಮೆರಾ ಫೀಚರ್ಗಳೊಂದಿಗೆ ರಿಯಲ್ಮಿ ನಾರ್ಜೊ 70 ಗ್ರ್ಯಾಂಡ್ ಲಾಂಚ್
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಂಚಕನೊಂದಿಗೆ ವ್ಯವಹಾರ ಸ್ಟಾರ್ ನಟ ಮೋಹನ್ಲಾಲ್ಗೆ ಇಡಿ ನೋಟಿಸ್
ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ನಟ ಮೋಹನ್ಲಾಲ್ ಅತ್ಯುತ್ತಮ ನಟ ಮಾತ್ರ ಅಲ್ಲ ಕೇರಳದ ಟಾಪ್ ಉದ್ಯಮಿಗಳಲ್ಲಿ ಒಬ್ಬರು. ಹಲವು ಭಿನ್ನ-ಭಿನ್ನ ಉದ್ಯಮಗಳ ಒಡೆತನವನ್ನು ಮೋಹನ್ಲಾಲ್ ಹೊಂದಿದ್ದಾರೆ. ಕೇರಳದಲ್ಲಿ ಮಾತ್ರವಲ್ಲ ದುಬೈನಲ್ಲಿಯೂ ಕೆಲವು ಉದ್ಯಮಗಳನ್ನು ಮೋಹನ್ಲಾಲ್ ಹೊಂದಿದ್ದಾರೆ.
ಈ ಹಿಂದೆ ಕೆಲ ಬಾರಿ ಮೋಹನ್ಲಾಲ್ ಐಟಿ ದಾಳಿಗಳು ನಡೆದಿದ್ದವು. ಇದೀಗ ಮೋಹನ್ಲಾಲ್ಗೆ ಇಡಿ (ಜಾರಿ ನಿರ್ದೇಶನಾಲಯ) ನೊಟೀಸ್ ಜಾರಿ ಮಾಡಿದೆ.
ಕೇರಳದ ವಂಚಕನೊಬ್ಬನೊಟ್ಟಿಗೆ ಮೋಹನ್ಲಾಲ್ ವ್ಯವಹಾರ ಹೊಂದಿರುವ ಕಾರಣದಿಂದ ಜಾರಿ ನಿರ್ದೇಶನಾಲಯವು ಮೋಹನ್ಲಾಲ್ಗೆ ನೊಟೀಸ್ ಜಾರಿ ಮಾಡಿದ್ದು ಕೆಲವೇ ದಿನಗಳಲ್ಲಿ ಮೋಹನ್ಲಾಲ್ ವಿಚಾರಣೆಗೆ ಹಾಜರಾಗಬೇಕಿದೆ.
ಮಹಾನ್ ವಂಚಕ ಮುನ್ಸುನ್ ಮವುಂಕಲ್ ಎಂಬಾತನೊಂದಿಗೆ ಮೋಹನ್ಲಾಲ್ಗೆ ಸಂಬಂಧವಿದ್ದು, ಆತನೊಟ್ಟಿಗೆ ವ್ಯವಹಾರವನ್ನು ಹೊಂದಿದ್ದಾರೆ ಎಂಬ ಕಾರಣಕ್ಕೆ ಮೋಹನ್ಲಾಲ್ಗೆ ನೊಟೀಸ್ ನೀಡಲಾಗಿದ್ದು, ಕೊಚ್ಚಿಯ ಇಡಿ ಕಚೇರಿಗೆ ಬಂದು ವಿಚಾರಣೆ ಎದುರಿಸುವಂತೆ ಸೂಚಿಸಲಾಗಿದೆ.
ಮುನ್ಸುನ್ ಮವುಂಕಲ್ ಕೇರಳದ ಮಹಾನ್ ವಂಚಕರಲ್ಲಿ ಒಬ್ಬ ಎನ್ನಲಾಗುತ್ತದೆ. ಬೈಬಲ್ನ ಮೊಟ್ಟ ಮೊದಲ ಪ್ರತಿ, ಟಿಪ್ಪು ಸುಲ್ತಾನನ ಖಡ್ಗ ಇನ್ನಿತರೆ ಪುರಾತನ ಐತಿಹಾಸಿಕ ವಸ್ತುಗಳು ತನ್ನ ಬಳಿ ಇವೆ ಎಂದು ಹೇಳಿ ಅದನ್ನು ಮಾರಾಟ ಮಾಡುವುದಾಗಿ ಹೇಳಿ ಹಲವರಿಗೆ ಈತ ಮೋಸ ಮಾಡಿದ್ದಾನೆ.
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಕೇರಳ ಸಿಐಡಿ ಈತನನ್ನು ಬಂಧಿಸಿತ್ತು. ಈತನ ಮೇಲೆ ಹಲವರಿಗೆ ಮೋಸ ಮಾಡಿರುವ ಆರೋಪಗಳಿದ್ದವು. ಸುಮಾರು 30 ಕೋಟಿ ಹಣವನ್ನು ಈತ ವಿವಿಧ ಜನರಿಗೆ ಮೋಸ ಮಾಡಿದ್ದ. ಈತನ ಪ್ರಕರಣವನ್ನು ಇಡಿ ಸಹ ತನಿಖೆ ನಡೆಸುತ್ತಿತ್ತು. ಈ ಸಮಯ ಈತನಿಗೂ ನಟ ಮೋಹನ್ಲಾಲ್ಗೂ ನಂಟು ಇರುವ ಅಂಶ ಬೆಳಕಿಗೆ ಬಂದು ಅದರ ವಿಚಾರಣೆಗೆಂದು ಮೋಹನ್ಲಾಲ್ಗೆ ನೊಟೀಸ್ ನೀಡಲಾಗಿದೆ.
ಮುನ್ಸುನ್ ಮವುಂಕಲ್ ಜೊತೆ ವ್ಯವಹಾರ ಮಾತ್ರವೇ ಅಲ್ಲದೆ ಮೋಹನ್ ಲಾಲ್ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವ ಅನುಮಾನವನ್ನೂ ಇಡಿ ವ್ಯಕ್ತಪಡಿಸಿದೆ.
ಮುನ್ಸುನ್ ಮವುಂಕಲ್ ಮಹಾ ವಂಚಕನಾಗಿದ್ದು ತನ್ನ ಬಳಿ ಬೈಬಲ್ನ ಮೊದಲ ಪ್ರತಿ, ತಾಳೆ ಗರಿಗಳಲ್ಲಿ ಬರೆದ ಮಹಾಭಾರತ, ರಾಜಾ ರವಿವರ್ಮನ ಪೇಂಟಿಂಗ್, ಪಿಕಾಸೊ ಪೇಂಟಿಗ್ಗಳು ಇವೆಯೆಂದು ನಂಬಿಸಿ ಜನರಿಂದ ಕೋಟ್ಯಂತರ ಹಣ ವಸೂಲಿ ಮಾಡುತ್ತಿದ್ದ. ಈತನ ಬಳಿ ಕೆಲವು ಚಿತ್ರಗಳು, ತಾಳೆಗರಿ ಶಾಸನಗಳು ಇದ್ದು ಅದನ್ನು ಪೊಲೀಸರು ವಶಪಡಿಸಿಕೊಂಡು ಪರಿಶೀಲಿಸಿದಾಗ ಅವುಗಳೆಲ್ಲವನ್ನೂ ಅಲ್ಲಪ್ಪಿ ಜಿಲ್ಲೆಯ ಚೇರ್ತಲ ಎಂಬಲ್ಲಿನ ಮರಗೆಲಸದವನೊಬ್ಬ ಮಾಡಿಕೊಟ್ಟಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.