ಅಭಿನೇತ್ರಿ (2015)(U/A)
Release date
30 Jan 2015
genre
ಅಭಿನೇತ್ರಿ ವಿಶೇಷತೆಗಳು
ಕಲಾವಿದೆಯಾಗಬೇಕು ಎಂದು ಕನಸು ಕಾಣುವ ಶರತ್ ಲತಾ (ಪೂಜಾಗಾಂಧಿ) ಮುಂದೆ ಖ್ಯಾತ ನಟಿಯಾಗುತ್ತಾಳೆ. ಇದು ಮಿನುಗುತಾರೆ ಕಲ್ಪನಾ ಅವರ ಮೂಲ ಹೆಸರೂ ಹೌದು. ಇದಕ್ಕಾಗಿ ಸಾಕಷ್ಟು ಕಷ್ಟನಷ್ಟ ಎದುರಿಸಬೇಕಾಗುತ್ತದೆ. ಇನ್ನೇನು ಎಲ್ಲವೂ ಮುಗಿದೇ ಹೋಯಿತು ಎಂಬಂತಹ ಸನ್ನಿವೇಶದಲ್ಲಿ ಅದೃಷ್ಟ ಬಾಗಿಲು ತೆರೆಯುತ್ತದೆ. ಅಲ್ಲಿಂದ ಬೆಳ್ಳಿತೆರೆ ಮೇಲೆ ನಂದಾ ಆಗಿ ಲತಾ ಬದಲಾಗುತ್ತಾಳೆ.
ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರೀಲಿ ಕೊಡೆ ಹಿಡಿದರಂತೆ ಎಂಬ ಮಾತು ನಂದಾ ಬಾಳಿನಲ್ಲಿ ಅಕ್ಷರಶಃ ನಿಜವಾಗುತ್ತದೆ. ತಾನು ಬೆಳ್ಳಿಪರದೆ ಬೆಳಗುವುದಕ್ಕೂ ಮುನ್ನ ತನ್ನನ್ನು ಹೀಯಾಳಿಸಿದ, ನಿಂದಿಸಿದವರ ಮೇಲೆ ಸೇಡು ತೀರಿಸಿಕೊಳ್ಳುತ್ತಾಳೆ.
ಹಣ, ಅಂತಸ್ತು, ಐಶ್ವರ್ಯ, ಜನಪ್ರಿಯತೆಗಳ ಜೊತೆಗೆ ನಂದಾ ಅವರಲ್ಲಿ ಅಹಂಭಾವ, ದರ್ಪ ದೌಲತ್ತುಗಳೂ ಸೇರಿಕೊಳ್ಳುತ್ತವೆ. 'ಅಮರತಾರೆ' ನಂದಾ ಅವರ ಜನಪ್ರಿಯತೆ ಬರುಬರುತ್ತಾ ತಳಕಚ್ಚುತ್ತದೆ. ಅವಕಾಶಗಳಿಲ್ಲದೆ ಕಡೆಗೆ ರಂಗಭೂಮಿಗೆ ಮರಳಬೇಕಾಗುತ್ತದೆ.
ತಾರೆಯೊಬ್ಬಳ ಏಳುಬೀಳಿನ ಕಥೆ ಹೀಗೆ ಸಾಗಿಹೋಗುತ್ತದೆ. ಆಕೆಯ ಬಾಳಿನಲ್ಲಿ ಗಟಿಗೇರಿ ಗಂಗರಾಜು (ರವಿಶಂಕರ್) ಆಗಮನವಾಗಿ ಹೊಸ ತಿರುವು ಪಡೆದುಕೊಳ್ಳುತ್ತದೆ. ಲಜ್ಜೆ ಬಿಟ್ಟು ತನ್ನನ್ನು ಮದುವೆಯಾಗುವಂತೆ ಕಾಡುತ್ತಾಳೆ ನಂದಾ. ಪ್ರೀತಿಗೆ ಕರಗಿ ನಂದಾರನ್ನು ಗಂಗರಾಜು ವರಿಸುತ್ತಾನೆ. ಮುಂದಿನದೆಲ್ಲವೂ ದುರಂತ.
ನೈಜಕಥೆಯೊಂದನ್ನು ಯಾವುದೇ ವಿವಾದಗಳಿಲ್ಲದಂತೆ, ಬಹಳ ಸೂಕ್ಷ್ಮವಾಗಿ ತೆರೆಗೆ ತಂದಿದ್ದಾರೆ ನಿರ್ದೇಶಕ ಸತೀಶ್ ಪ್ರಧಾನ್. ಕಥೆಯ ವಿಚಾರದಲ್ಲಿ ಅವರು ಸಾಕಷ್ಟು ಜಾಗ್ರತೆ ವಹಿಸಿರುವುದನ್ನು ಕಾಣಬಹುದು. ತಾರೆ ಎಂದ ಮೇಲೆ ಆಕೆಯ ಸಂಬಂಧಗಳು, ಗಾಸಿಪ್ ಗಳು ಇದ್ದದ್ದೇ. ಇದನ್ನು ಎಲ್ಲೂ ತಾಳ ತಪ್ಪದಂತೆ ತೆರೆಗೆ ತಂದಿದ್ದಾರೆ ನಿರ್ದೇಶಕರು.
ಇನ್ನು ಗಟಿಗೇರಿ ಗಂಗರಾಜು ಅವರ ಪಾತ್ರವೂ ಅಷ್ಟೇ. ಚಿತ್ರದಲ್ಲಿ ಪ್ರಮುಖ ಆಕರ್ಷಣೆಯಾಗಿ ನಿಲ್ಲುತ್ತದೆ. ಇನ್ನು ಆಗಿನ ಕಾಲದ ಖ್ಯಾತ ನಿರ್ದೇಶಕ ಶಿವಯ್ಯ (ಅತುಲ್ ಕುಲಕರ್ಣಿ) ಪಾತ್ರವನ್ನು ಅಳೆದುತೂಗಿ ವಿವಾದತೀತವಾಗಿ ತೆರೆಗೆ ತಂದಿದ್ದಾರೆ ನಿರ್ದೇಶಕರು. ಶಿವಯ್ಯ ಪಾತ್ರ ಪುಟ್ಟಣ್ಣ ಕಣಗಾಲ್ ರನ್ನು ನೆನಪಿಸುತ್ತದೆ. 'ಅಭಿನೇತ್ರಿ' ನಂದಾ ಪಾತ್ರದ ಮುಂದೆ ಅವೆಲ್ಲವೂ ಅಷ್ಟಾಗಿ ಗಮನಕ್ಕೂ ಬರುವುದೂ ಇಲ್ಲ.
ಎಪ್ಪತ್ತು, ಎಂಬತ್ತರ ತಾರೆಯ ಗೆಟಪ್, ಅಂದಿನ ಕಾಸ್ಟ್ಯೂಮ್ಸ್ ಗಳನ್ನು ತೆರೆಗೆ ತಂದಿರುವ ರೀತಿ ಗಮನಸೆಳೆಯುವ ಅಂಶಗಳಲ್ಲಿ ಒಂದು. ಸಂಭಾಷಣೆ ಅಲ್ಲಲ್ಲಿ ಸ್ವಲ್ಪ ಕೃತಕವಾಯಿತು ಎನ್ನಿಸಿದರೂ ಒಟ್ಟಾರೆ ಚಿತ್ರ ಅದನ್ನು ಮರೆಮಾಚುತ್ತದೆ.
ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರೀಲಿ ಕೊಡೆ ಹಿಡಿದರಂತೆ ಎಂಬ ಮಾತು ನಂದಾ ಬಾಳಿನಲ್ಲಿ ಅಕ್ಷರಶಃ ನಿಜವಾಗುತ್ತದೆ. ತಾನು ಬೆಳ್ಳಿಪರದೆ ಬೆಳಗುವುದಕ್ಕೂ ಮುನ್ನ ತನ್ನನ್ನು ಹೀಯಾಳಿಸಿದ, ನಿಂದಿಸಿದವರ ಮೇಲೆ ಸೇಡು ತೀರಿಸಿಕೊಳ್ಳುತ್ತಾಳೆ.
ಹಣ, ಅಂತಸ್ತು, ಐಶ್ವರ್ಯ, ಜನಪ್ರಿಯತೆಗಳ ಜೊತೆಗೆ ನಂದಾ ಅವರಲ್ಲಿ ಅಹಂಭಾವ, ದರ್ಪ ದೌಲತ್ತುಗಳೂ ಸೇರಿಕೊಳ್ಳುತ್ತವೆ. 'ಅಮರತಾರೆ' ನಂದಾ ಅವರ ಜನಪ್ರಿಯತೆ ಬರುಬರುತ್ತಾ ತಳಕಚ್ಚುತ್ತದೆ. ಅವಕಾಶಗಳಿಲ್ಲದೆ ಕಡೆಗೆ ರಂಗಭೂಮಿಗೆ ಮರಳಬೇಕಾಗುತ್ತದೆ.
ತಾರೆಯೊಬ್ಬಳ ಏಳುಬೀಳಿನ ಕಥೆ ಹೀಗೆ ಸಾಗಿಹೋಗುತ್ತದೆ. ಆಕೆಯ ಬಾಳಿನಲ್ಲಿ ಗಟಿಗೇರಿ ಗಂಗರಾಜು (ರವಿಶಂಕರ್) ಆಗಮನವಾಗಿ ಹೊಸ ತಿರುವು ಪಡೆದುಕೊಳ್ಳುತ್ತದೆ. ಲಜ್ಜೆ ಬಿಟ್ಟು ತನ್ನನ್ನು ಮದುವೆಯಾಗುವಂತೆ ಕಾಡುತ್ತಾಳೆ ನಂದಾ. ಪ್ರೀತಿಗೆ ಕರಗಿ ನಂದಾರನ್ನು ಗಂಗರಾಜು ವರಿಸುತ್ತಾನೆ. ಮುಂದಿನದೆಲ್ಲವೂ ದುರಂತ.
ನೈಜಕಥೆಯೊಂದನ್ನು ಯಾವುದೇ ವಿವಾದಗಳಿಲ್ಲದಂತೆ, ಬಹಳ ಸೂಕ್ಷ್ಮವಾಗಿ ತೆರೆಗೆ ತಂದಿದ್ದಾರೆ ನಿರ್ದೇಶಕ ಸತೀಶ್ ಪ್ರಧಾನ್. ಕಥೆಯ ವಿಚಾರದಲ್ಲಿ ಅವರು ಸಾಕಷ್ಟು ಜಾಗ್ರತೆ ವಹಿಸಿರುವುದನ್ನು ಕಾಣಬಹುದು. ತಾರೆ ಎಂದ ಮೇಲೆ ಆಕೆಯ ಸಂಬಂಧಗಳು, ಗಾಸಿಪ್ ಗಳು ಇದ್ದದ್ದೇ. ಇದನ್ನು ಎಲ್ಲೂ ತಾಳ ತಪ್ಪದಂತೆ ತೆರೆಗೆ ತಂದಿದ್ದಾರೆ ನಿರ್ದೇಶಕರು.
ಇನ್ನು ಗಟಿಗೇರಿ ಗಂಗರಾಜು ಅವರ ಪಾತ್ರವೂ ಅಷ್ಟೇ. ಚಿತ್ರದಲ್ಲಿ ಪ್ರಮುಖ ಆಕರ್ಷಣೆಯಾಗಿ ನಿಲ್ಲುತ್ತದೆ. ಇನ್ನು ಆಗಿನ ಕಾಲದ ಖ್ಯಾತ ನಿರ್ದೇಶಕ ಶಿವಯ್ಯ (ಅತುಲ್ ಕುಲಕರ್ಣಿ) ಪಾತ್ರವನ್ನು ಅಳೆದುತೂಗಿ ವಿವಾದತೀತವಾಗಿ ತೆರೆಗೆ ತಂದಿದ್ದಾರೆ ನಿರ್ದೇಶಕರು. ಶಿವಯ್ಯ ಪಾತ್ರ ಪುಟ್ಟಣ್ಣ ಕಣಗಾಲ್ ರನ್ನು ನೆನಪಿಸುತ್ತದೆ. 'ಅಭಿನೇತ್ರಿ' ನಂದಾ ಪಾತ್ರದ ಮುಂದೆ ಅವೆಲ್ಲವೂ ಅಷ್ಟಾಗಿ ಗಮನಕ್ಕೂ ಬರುವುದೂ ಇಲ್ಲ.
ಎಪ್ಪತ್ತು, ಎಂಬತ್ತರ ತಾರೆಯ ಗೆಟಪ್, ಅಂದಿನ ಕಾಸ್ಟ್ಯೂಮ್ಸ್ ಗಳನ್ನು ತೆರೆಗೆ ತಂದಿರುವ ರೀತಿ ಗಮನಸೆಳೆಯುವ ಅಂಶಗಳಲ್ಲಿ ಒಂದು. ಸಂಭಾಷಣೆ ಅಲ್ಲಲ್ಲಿ ಸ್ವಲ್ಪ ಕೃತಕವಾಯಿತು ಎನ್ನಿಸಿದರೂ ಒಟ್ಟಾರೆ ಚಿತ್ರ ಅದನ್ನು ಮರೆಮಾಚುತ್ತದೆ.
ಸಂಬಂಧಿತ ಸುದ್ದಿ