ಭರಾಟೆ (2019)(U/A)
ಭರಾಟೆ ವಿಶೇಷತೆಗಳು
1. ಬೆಂಗಳೂರಿನ ಅತ್ತಿಗುಪ್ಪೆಯಲ್ಲಿರುವ ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ 2018 ಜೂನ್ 25ರ ಬೆಳಿಗ್ಗೆ 5 ಗಂಟೆಗೆ ಚಿತ್ರತಂಡ ಸ್ಕ್ರಿಪ್ಟ್ ಪೂಜೆ ಮಾಡಿತು.
2. ಸಾಮಾನ್ಯವಾಗಿ ಹಾಡುಗಳ ಚಿತ್ರೀಕರಣ ಹಾಗೂ ದೃಶ್ಯ ಗಳ ಚಿತ್ರೀಕರಣಕ್ಕೆ ಬೇರೆ ಊರುಗಳಿಗೆ ಹೋದಾಗ ಚಿತ್ರದ ಫೋಟೋ ಶೂಟ್ ಮಾಡಿಸುತ್ತಾರೆ. ಆದರೆ ಇದೇ ಮೊದಲ ಬಾರಿಗೆ 'ಭರಾಟೆ' ಚಿತ್ರತಂಡ ಫೋಟೋ ಶೂಟ್ ಗಾಗಿಯೇ ರಾಜಸ್ಥಾನಕ್ಕೆ ಹೋಗಿ ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದಿದೆ.
3. ಬಲ್ಲ ಮೂಲಗಳ ಪ್ರಕಾರ ಭರಾಟೆ ಚಿತ್ರದಲ್ಲಿ 10 ಪ್ರಮುಖ ಖಳನಾಯಕರು ಅಭನಯಿಸಲಿದ್ದಾರೆ.ಚಿತ್ರದ ಪ್ರಮುಖ ಸಾಹಸ ಸನ್ನಿವೇಶಗಳನ್ನು ಬೆಂಗಳೂರಿನ ನೆಲಮಂಗಲ ಹತ್ತಿರ ಚಿತ್ರೀಕರಣ ಮಾಡಲಾಗಿದೆ
4. ಭರಾಟೆ ಚಿತ್ರ ಬಹುಪಾಲು ರಾಜಸ್ಥಾನದಲ್ಲಿ ಚಿತ್ರೀಕರಣ ಆಗುತ್ತಿರುವುದರಿಂದ ಹಿಂದಿ ಮತ್ತು ಭೋಜಪುರಿ ಭಾಷೆಗಳಲ್ಲಿ ಚಿತ್ರದ ಡಬ್ಬಿಂಗ್ ರೈಟ್ಸಗಾಗಿ ತುಂಬಾ ಡಿಮ್ಯಾಂಡ ಸೃಷ್ಟಿಯಾಗಿದೆ.
5. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ಬಿಡುವಿದ್ದಾಗ ರಾಜಸ್ಥಾನದಲ್ಲಿ ಕೋಟೆಯ ಬೀದಿಯ ನೆರಳಿನಲ್ಲಿ ಮುರಳಿ ಮಲಗಿ ವಿಶ್ರಾಂತಿ ಪಡೆಯುವ ಪೋಟೋ ವೈರಲ್ ಆಗಿತ್ತು. ಇದನ್ನು ಕಂಡು ಮುರಳಿ ಪತ್ನಿ ವಿದ್ಯಾಶ್ರೀಯವರು ಸೋಷಿಯಲ್ ಮಿಡೀಯಾದಲ್ಲಿ ಕೆಳಗಿನಂತೆ ಬರೆದುಕೊಂಡಿದ್ದರು.
"ಯಾವತ್ತಿಗೂ ಇಂದಿನ ದಿನ ಹೇಗಿತ್ತು ಎಂದರೆ ಚೆನ್ನಾಗಿತ್ತು ಎನ್ನುವುದನ್ನು ಮಾತ್ರ ಹೇಳುತ್ತಿದ್ದರು. ಎಂದಿಗೂ ಯಾವುದರ ಬಗ್ಗೆಯೂ ದೂರು ಹೇಳಿಲ್ಲ. ಆದರೆ ಈ ಫೋಟೋಗಳು ನಿಮ್ಮ ಬಗ್ಗೆ ಹೇಳುತ್ತಿವೆ, ನಮಗಾಗಿ ಇಷ್ಟೆಲ್ಲಾ ಶ್ರಮ ಪಡುತ್ತಿರುವ ನಿಮ್ಮ ಬಗ್ಗೆ ಹೆಮ್ಮೆ ಆಗುತ್ತಿದೆ".
6. ಈ ಚಿತ್ರದ ಬಿಡುವಿನ ವೇಳೆಯಲ್ಲಿ ಬೆಂಗಳೂರಿನಲ್ಲಿದ್ದ ಮುರಳಿ `ಸದಾ ನಿಮ್ಮೊಂದಿಗೆ' ಕಿರುತೆರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬದ ಸಹಾಯಕ್ಕಾಗಿ ರಸ್ತೆ ಪಕ್ಕದಲ್ಲಿ ನಿಂತು ಕಬ್ಬಿನ ಹಾಲು ಮಾರಿದ್ದರು.
7.ಚಿತ್ರದ ಟೀಸರ್ ನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಿಸೆಂಬರ್ 17,2018 ರಂದು ಶ್ರೀಮುರಳಿ ಜನ್ಮದಿನ ಪ್ರಯುಕ್ತ ಬಿಡುಗಡೆ ಮಾಡಿದರು. ಈ ಚಿತ್ರದ ಟೀಸರ್ ಜೊತೆಗೆ ದರ್ಶನ್ ಮುರಳಿಯವರ ಮುಂದಿನ ಚಿತ್ರ `ಮದಗಜ' ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಿದರು.
8.'ಭರಾಟೆ' ಚಿತ್ರದಲ್ಲಿ ಸಾಯಿ ಕುಮಾರ್, ರವಿಶಂಕರ್ ಮತ್ತು ಅಯ್ಯಪ್ಪ.ಪಿ.ಶರ್ಮ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ಅಣ್ಣಮ್ಮಂದಿರನ್ನ ಒಂದೇ ಸಿನಿಮಾದಲ್ಲಿ ಒಟ್ಟುಗೂಡಿಸುತ್ತಿರುವ ಖ್ಯಾತಿ 'ಭರಾಟೆ' ಚಿತ್ರತಂಡದ ಪಾಲಾಗಿದೆ.