ಜಿ.ವಿ.ಕೆ ಕಂಬೈನ್ಸ್ ಅಡಿಯಲ್ಲಿ ನಿರ್ಮಿಸುತ್ತಿರುವ ಪ್ರಿಯಾಮಣಿ ಮತ್ತು ಮಯೂರಿ ಮುಖ್ಯಪಾತ್ರಗಳಲ್ಲಿ ನಟಿಸುತ್ತಿರುವ `ನನ್ನ ಪ್ರಕಾರ' ಚಿತ್ರವನ್ನು ವಿನಯ್ ಬಾಲಾಜಿ ನಿರ್ದೇಶಿಸುತ್ತಿದ್ದಾರೆ. ಥ್ರಿಲ್ಲರ್ ಕಥಾನಕವನ್ನು ಹೊಂದಿರುವ ಈ ಚಿತ್ರವನ್ನು ಗುರುರಾಜ ಎಸ್ ನಿರ್ಮಿಸುತ್ತಿದ್ದಾರೆ.ಕಿಶೋರ್, ನಿರಂಜನ್ ದೇಶಪಾಂಡೆ ಮುಂತಾದ ಕಲಾವಿದರು ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಮೊದಲ ಪೋಸ್ಟರ್ನ್ನು ರಕ್ಷಿತ್ ಶೆಟ್ಟಿ ಜನೇವರಿ 4,2019 ರಂದು ಫೇಸ್ಬುಕ್ನಲ್ಲಿ ಬಿಡುಗಡೆ ಮಾಡಿದರು.
ಸಮಾಜ ಸೇವೆ ಮಾಡುತ್ತಾ ಅನಾಥಾಶ್ರಮದಲ್ಲಿ ಕೆಲಸ ಮಾಡುವ ವಿಸ್ಮಯ ಅಪಾರ್ಟಮೆಂಟ್ ನಲ್ಲಿ ವಾಸವಾಗಿರುತ್ತಾರೆ. ತನಗೆ ಸಹಾಯ ಮಾಡಲು ಬಂದ ಹುಡುಗ ಸುಮಂತ್ ಜೊತೆ ಮದುವೆ ಆಗಲು ನಿರ್ಧರಿಸಿ ಮದುವೆ ಕನಸು ಕಾಣ್ತಾಳೆ. ಅದೆ ಅಪಾರ್ಟ್ ಮೆಂಟ್ ನಲ್ಲಿ ಇರುವ ಮೇರಿ ಮತ್ತು ಆಕೆಯ ಗ್ಯಾಂಗ್ ನವರದ್ದು ಇನ್ನೊಂದು ಕಥೆ. ಮತ್ತೊಂದೆಡೆ ಶ್ರೀಮಂತ...
Read: Complete ನನ್ನ ಪ್ರಕಾರ ಕಥೆ
-
ವಿನಯ್ ಬಾಲಾಜಿDirector
-
ಅರ್ಜುನ್ ರಾಮುMusic Director
-
"ಇವರು ಆಡೋ ಮಾತುಗಳಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ"; ಕಣ್ಣೀರಿಟ್ಟ ವರ್ತೂರು ಸಂತೋಷ್
-
ಅರ್ಜುನ್ ಮಹಾಕ್ಷಯ್ ಅಡ್ಡಾದಲ್ಲೂ ಆಯುಧ ಪೂಜೆ; 'ಮ್ಯಾಕ್ಸ್' ಕ್ರೇಜಿ ಅಪ್ಡೇಟ್
-
'ಕಾಂತಾರ' ಬೆಡಗಿ ಸಪ್ತಮಿ ಗೌಡ ವಯಸ್ಸು, ಮೊದಲು ಪಡೆದ ಸಂಬಳ ಎಷ್ಟು?
-
'ರಾಬರ್ಟ್' ಚಿತ್ರದಲ್ಲಿ ನನಗಿಷ್ಟವಾದ ಪಾತ್ರ ಕಿತ್ಕೊಂಡ್ರು ಅಂತ ಇವತ್ತಿಗೂ ಬೇಸರವಿದೆ": ದರ್ಶನ್
-
ಗುರುಪ್ರಸಾದ್ಗೆ ತಿರುಗೇಟು ಕೊಟ್ಟ ಶ್ರುತಿ ಹರಿಹರನ್ ; ನನ್ನ ಮೀಟೂ ಕಥೆ ಇನ್ನೂ ಮುಗಿದಿಲ್ಲ ಎಂದ ನಟಿ..!
-
'ಉಳಿದವರು ಕಂಡಂತೆ' ದಶಕದ ಸಂಭ್ರಮ; ಟ್ವೀಟ್ ಮಾಡಿ 'ರಿಚರ್ಡ್ ಆಂಟನಿ' ಬಗ್ಗೆ ಮೌನ ಮುರಿದ ರಕ್ಷಿತ್
-
ಕನ್ನಡ ಫಿಲ್ಮಿಬೀಟ್ - ಮೂರು ಥ್ರಿಲ್ಲಿಂಗ್ ಕಥೆಗಳ ಒಂದು ಸಿನಿಮಾನಿರ್ದೇಶಕ ವಿನಯ್ ಬಾಲಾಜಿ ಮೊದಲ ಪ್ರಯತ್ನದಲ್ಲೆ ಪ್ರೇಕ್ಷಕರ ಮನಗೆದ್ದಿದ್ದಾರೆ. ಸ್ಕ್ರೀನ್ ಪ್ಲೇ ಕೂಡ ಅದ್ಭುತವಾಗಿದೆ. ಸಾಕಷ್ಟು ಟ್ವಿಸ್ಟ್ ಮತ್ತು ಟರ್ನ್ ಗಳ ಮೂಲಕ ವೀಕ್ಷಕರನ್ನು ಸೀಟಿನ ತುದಿಯಲ್ಲಿ ಕೂತು ನೋಡುವಂತೆ ಮಾಡಿದ್ದಾರೆ. ನಿರೂಪಣಾ ಶೈಲಿ ಕೂಡ ಉತ್ತಮವಾಗಿದೆ. ಚಿಕ್ಕ ಪುಟ್ಟ ತಪ್ಪುಗಳು ಬಿಟ್ಟರೆ ಉಳಿದಂತೆ ಉತ್ತಮವಾದ ಥ್ರಿಲ್ಲಿಂಗ್ ಸಿನಿಮಾ.
-
ವಿಜಯ ಕರ್ನಾಟಕಕಿಶೋರ್ ಮಾತಿಗಿಂತ ನೋಟದಲ್ಲೇ ಇಡೀ ಸಿನಿಮಾ ಸಾಗಿಸುತ್ತಾರೆ. ಇದೇ ಪ್ರತಿಭಾವಂತ ಕಲಾವಿದನಿಗೆ ಇರಬೇಕಾದ ತಾಕತ್ತು. ಮಯೂರಿ ಎರಡೂ ಶೇಡ್ನಲ್ಲೂ ಮಿಂಚಿದ್ದಾರೆ. ಈ ಸಿನಿಮಾದಲ್ಲಿ ಒತ್ತಾಯದ ಕಾಮಿಡಿಗಿಂತ ಸನ್ನಿವೇಶಗಳು ಮನರಂಜನೆ ನೀಡುತ್ತವೆ.
-
kannada.asianetnews.comಸಿನಿಮಾದ ದಾರಿ ಸರಿ ಇದೆ. ಆದರೆ ಹೋಗ್ತಾ ಹೋಗ್ತಾ ದಾರಿಯಲ್ಲಿ ಅಲ್ಲಲ್ಲಿ ಮುಗ್ಗರಿಸುವಂತಾಗುತ್ತದೆ. ಅದಕ್ಕೆ ಕಾರಣ ಲಾಜಿಕ್ ಇಲ್ಲದೇ ಇರುವುದು. ಥ್ರಿಲ್ಲರ್ನ ಶಕ್ತಿಯೇ ಚಿತ್ರಕತೆ.
ನಿಮ್ಮ ಪ್ರತಿಕ್ರಿಯೆ