ಭುಜ್ನಲ್ಲಿ ಮೀಸೆ ಹೊತ್ತ ಗಂಡು ಕೆಂಪೇಗೌಡ ಹಾಡು
ಸುದೀಪ್ ಅಭಿನಯದ 'ಕೆಂಪೇಗೌಡ' ಚಿತ್ರತಂಡ ಗುಜರಾತ್ನ ಭುಜ್ಗೆ ಪ್ರಯಾಣ ಬೆಳೆಸಿದೆ. ಪ್ರದೀಪ್ ಆಂಟೋನಿ ಅವರ ನೃತ್ಯ ನಿರ್ದೇಶನದಲ್ಲಿ ಹಾಡೊಂದರ ಚಿತ್ರೀಕರಣ ಭುಜ್ ನಲ್ಲಿ ನಡೆಯಲಿದೆ. ಕಿಚ್ಚ ಸುದೀಪ್ ಮತ್ತು ರಾಗಿಣಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇತ್ತೀಚೆಗೆ ಪುಣೆಯ ಮಹಾಬಲೇಶ್ವರದಲ್ಲಿ ಹಾಡೊಂದನ್ನು ಮೂರು ದಿನಗಳ ಕಾಲ ಕೆಂಪೇಗೌಡನಿಗಾಗಿ ಚಿತ್ರೀಕರಿಸಲಾಗಿತ್ತು. ಚಿತ್ರದ ಹಾಡುಗಳು ಅದ್ಭುತವಾಗಿ ಮೂಡಿಬಂದಿವೆ ಎಂಬ ವಿಶ್ವಾಸವನ್ನು ಚಿತ್ರತಂಡ ವ್ಯಕ್ತಪಡಿಸಿದೆ. ಅರ್ಜುನ್ ಸಂಗೀತ ಸಂಯೋಜನೆ 'ಕೆಂಪೇಗೌಡ'ನಿಗಿದೆ.
ಈ ಹಾಡುಗಳ ಚಿತ್ರೀಕರಣ ಬಳಿಕ 'ಕೆಂಪೇಗೌಡ' ಬೆಂಗಳೂರಿಗೆ ಹಿಂತಿರುಗಲಿದ್ದಾನೆ. 'ಕೆಂಪೇಗೌಡ'ನಿಗೆ ಬೆಂಗಳೂರಿನಲ್ಲಿ ವಿಶೇಷ ಸೆಟ್ ಹಾಕಲಾಗಿದ್ದು, ಹರ್ಷ ನೃತ್ಯ ಸಂಯೋಜನೆಯಲ್ಲಿ ಮತ್ತೊಂದು ಹಾಡಿನ ಚಿತ್ರೀಕರಣ ನಡೆಯಲಿದೆ. ಅಂದಹಾಗೆ ಈ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ಹೊಸೆದಿರುವುದು ವಿಶೇಷ.
More from Filmibeat
English summary
Sudeep, Ragini starrer Kempe Gowda shooting to be progressed in Bhuj choreographed by Pradeep Anthony. Arjun scores the music for this film. Recently one more song shot in in Mahabaleshwar near Pune. Renowned director Yogaraj Bhat has been written the song.
ಸುದೀಪ್ ಕೆಂಪೇಗೌಡ ಮಂಡ್ಯ ಮದ್ದೂರು ಭುಜ್ ಶಂಕರೇಗೌಡ ರಾಗಿಣಿ ರೀಮೇಕ್ sudeep kempe gowda ragini bhuj mandya maddur remake ashok kheny


Click it and Unblock the Notifications











