Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕರ್ನಾಟಕಕ್ಕೆ ಕಾಲಿಟ್ಟ ಆಂಧ್ರ ಆಡಿಯೋ ಕಂಪನಿ
ಇಪ್ಪತ್ತು ವರ್ಷಗಳಿಂದ ಆಂಧ್ರಪ್ರದೇಶದಲ್ಲಿ ಸಿನಿಮಾ ಕ್ಯಾಸೆಟ್, ಸೀಡಿಗಳನ್ನು ಮಾರುತ್ತಾ ಬಂದಿರುವ ಆದಿತ್ಯಾ ಆಡಿಯೋ ಕಂಪೆನಿ ಕನ್ನಡಕ್ಕೆ ಕಾಲಿಟ್ಟಿದೆ; ದುಬಯ್ ಬಾಬು ಚಿತ್ರದ ಮೂಲಕ. ನಿರ್ಮಾಪಕ ಶೈಲೇಂದ್ರ ಬಾಬು ಹಾಗೂ ನಾಯಕ ಉಪೇಂದ್ರ ತಮಗಿರುವ ಕಾಂಟಾಕ್ಟನ್ನು ಮುಂದುಮಾಡಿ ಈ ಬೆಳವಣಿಗೆಗೆ ಕಾರಣರಾಗಿದ್ದಾರೆ.
ಕನ್ನಡ ಸಿನಿಮಾಗಳ ಸಂಗೀತ ಈಗ ತುಟ್ಟಿಯ ಬಾಬತ್ತು. ಹಾಡುಗಳ ಧ್ವನಿಮುದ್ರಣ ಮುಗಿಸುವ ಹೊತ್ತಿಗೇ ಮೂವತ್ತೈದು ನಲವತ್ತು ಲಕ್ಷ ಕೈಬಿಟ್ಟಿರುತ್ತದೆ. ಶೈಲೇಂದ್ರ ಬಾಬು ಮೊದಲೇ ಅದ್ದೂರಿತನ ಬಯಸುವವರ ಪೈಕಿ. ಅವರೇ ಹೇಳಿಕೊಳ್ಳುವಂತೆ ದುಬಯ್ ಬಾಬು ದುಬಾರಿ ಬಾಬು ಆಗಿದೆ. ಆದಿತ್ಯಾ ಆಡಿಯೋ ಕಂಪೆನಿಯ ಜೊತೆ ಯಾವ ರೀತಿಯ ಡೀಲ್ ಆಗಿದೆ ಅನ್ನೋದು ಮಾತ್ರ ರಹಸ್ಯ.
ಆದರೆ, ಕನ್ನಡ ಆಡಿಯೋ ಜಗತ್ತಿಗೆ ಅದು ಕಾಲಿಟ್ಟಿದೆ ಎಂಬುದು ಬೇರೆ ಆಡಿಯೋ ಕಂಪೆನಿಗಳ ಕಣ್ಣು, ಕಿವಿ ತೆರೆಸಿದರೆ ಸಾಕು. ಬಿಗ್ ಮ್ಯೂಸಿಕ್ನಂಥ ಕಂಪೆನಿ ಕೂಡ ಹಿಂದೆ ಕನ್ನಡ ಕನ್ನಡ ಅಂತ ಬಂದಿತ್ತು. ಈಗ ಯಾಕೋ ಅದು ತಣ್ಣಗಾಗಿಬಿಟ್ಟಿದೆಯಲ್ಲ. ಆದಿತ್ಯಾ ಕಂಪೆನಿ ಇಲ್ಲಿ ಏನು ಕಿಸಿಯುತ್ತದೋ ನೋಡೋಣ ಅಂತ ಸ್ಥಳೀಯ ಆಡಿಯೋ ಕಂಪೆನಿಯ ಒಬ್ಬರು ಈಗಾಗಲೇ ಗುಟುರು ಹಾಕಿರುವ ಸುದ್ದಿಯೂ ಹೊರಬಿದ್ದಿದೆ.
ದುಬೈ
ಬಾಬುನಲ್ಲಿ
ಒಂದಾದ
ಉಪೇಂದ್ರ,ಗೋವಿಂದ
ಬಾಲಿವುಡ್
ನಟ
ಆರ್ಯನ್
ವೈದ್
ಕನ್ನಡ
ಪ್ರೇಮ
ಎಲ್ಲಾ
ಓಕೆ
ಮೀಸೆ
ಯಾಕೆ
ಎಂದ
ದುಬೈ
ಬಾಬು!
ಹದಿನೇಳರ
ಗೆಟಪ್ಪಿನಲ್ಲಿ
ಉಪೇಂದ್ರ
ಅವತಾರ