Don't Miss!
- News Kotak Mahindra Bank: ಕೋಟಕ್ ಮಹಿಂದ್ರಾ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ: ಗ್ರಾಹಕರ ಮೇಲೆ ಪರಿಣಾಮಗಳೇನು?
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿರಿಕಂಠದ ಗಾಯಕ ಪಿ ಬಿ ಶ್ರೀನಿವಾಸ್ ಬೆಳ್ಳಿ ಹೆಜ್ಜೆ
ಕನ್ನಡ ಚಿತ್ರಗೀತೆಗಳಿಗೆ ಮಾಧುರ್ಯದ ಸ್ಪರ್ಶ ನೀಡಿದ ಪಿ ಬಿ ಶ್ರೀನಿವಾಸ್ ಕಂಠದಿಂದ 3450ಕ್ಕೂ ಹೆಚ್ಚು ಕನ್ನಡ ಗೀತೆಗಳನ್ನು ಹೊರಹೊಮ್ಮಿವೆ. ತಮ್ಮ ಶಾಲಾ ದಿನಗಳಲ್ಲೆ ಸಂಗೀತದ ಮೋಹ ಬೆಳಸಿಕೊಂಡವರು ಪಿ ಬಿ ಶ್ರೀನಿವಾಸ್. ಓದಿದ್ದು ಬಿ.ಕಾಂ ಆದರೆ ಹೆಸರು ಮಾಡಿದ್ದು ಸಂಗೀತ ಕ್ಷೇತ್ರದಲ್ಲಿ.
ಸ್ವತಃ ಗೀತರಚನೆಕಾರರಾದ ಪಿಬಿಎಸ್ ಕನ್ನಡ ಮಾತ್ರವಲ್ಲದೆ ಎಂಟು ಭಾಷೆಯ ಗೀತೆಗಳನ್ನು ಹಾಡಿದ್ದಾರೆ. ಸಂಸ್ಕೃತದಲ್ಲಿ ಅನೇಕ ಕಾವ್ಯಗಳನ್ನು ರಚಿಸಿ ಅವಕ್ಕೆ ಧ್ವನಿ ನೀಡಿದ್ದಾರೆ. ಗೌರವ ಡಾಕ್ಟರೇಟ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗೆ ಅವರು ಭಾಜನರಾದವರು. ಬೆಳ್ಳಿ ಹೆಜ್ಜೆ ಕಾರ್ಯಕ್ರಮದ ಸ್ಥಳ: ಬಾದಾಮಿ ಹೌಸ್, ಮಹಾನಗರ ಪಾಲಿಕೆ ಪ್ರಧಾನ ಕಚೇರಿ ಎದುರು. ಸಮಯ ಸಂಜೆ 4.30ಕ್ಕೆ ಸರಿಯಾಗಿ.
ಸತಿ ಸಾವಿತ್ರಿ, ಬಂಗಾರದ ಹೂವು, ಸೋತು ಗೆದ್ದವಳು, ನಮ್ಮ ಸಂಸಾರ, ಸಾಕ್ಷಾತ್ಕಾರ, ಕಸ್ತೂರಿ ನಿವಾಸ, ಕುಲಗೌರವ, ಭಲೇ ಹುಚ್ಚ, ಸಿಪಾಯಿ ರಾಮು, ಕ್ರಾಂತಿವೀರ, ಬಂಗಾರದ ಮನುಷ್ಯ, ಎರಡು ಕನಸು, ಭಕ್ತ ಕುಂಬಾರ...ಹೀಗೆ ಅವರ ಹಿನ್ನೆಲೆ ಗಾಯನದಲ್ಲಿ ಮೂಡಿಬಂದ ಚಿತ್ರಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.