Don't Miss!
- News ನೇಹಾ ಹಿರೇಮಠ್ ಹತ್ಯೆ ಪ್ರಕರಣ; ನಟ ಧ್ರುವ ಸರ್ಜಾ ಏನಂದ್ರು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Finance ನಾಳೆ ಬೆಂಗಳೂರಿನಲ್ಲಿ ಚಿಕನ್, ಮಟನ್ ಮಾರಾಟಕ್ಕೆ ನಿಷೇಧ
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿರಿಕಂಠದ ಗಾಯಕ ಪಿ ಬಿ ಶ್ರೀನಿವಾಸ್ ಬೆಳ್ಳಿ ಹೆಜ್ಜೆ
ಕನ್ನಡ ಚಿತ್ರಗೀತೆಗಳಿಗೆ ಮಾಧುರ್ಯದ ಸ್ಪರ್ಶ ನೀಡಿದ ಪಿ ಬಿ ಶ್ರೀನಿವಾಸ್ ಕಂಠದಿಂದ 3450ಕ್ಕೂ ಹೆಚ್ಚು ಕನ್ನಡ ಗೀತೆಗಳನ್ನು ಹೊರಹೊಮ್ಮಿವೆ. ತಮ್ಮ ಶಾಲಾ ದಿನಗಳಲ್ಲೆ ಸಂಗೀತದ ಮೋಹ ಬೆಳಸಿಕೊಂಡವರು ಪಿ ಬಿ ಶ್ರೀನಿವಾಸ್. ಓದಿದ್ದು ಬಿ.ಕಾಂ ಆದರೆ ಹೆಸರು ಮಾಡಿದ್ದು ಸಂಗೀತ ಕ್ಷೇತ್ರದಲ್ಲಿ.
ಸ್ವತಃ ಗೀತರಚನೆಕಾರರಾದ ಪಿಬಿಎಸ್ ಕನ್ನಡ ಮಾತ್ರವಲ್ಲದೆ ಎಂಟು ಭಾಷೆಯ ಗೀತೆಗಳನ್ನು ಹಾಡಿದ್ದಾರೆ. ಸಂಸ್ಕೃತದಲ್ಲಿ ಅನೇಕ ಕಾವ್ಯಗಳನ್ನು ರಚಿಸಿ ಅವಕ್ಕೆ ಧ್ವನಿ ನೀಡಿದ್ದಾರೆ. ಗೌರವ ಡಾಕ್ಟರೇಟ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗೆ ಅವರು ಭಾಜನರಾದವರು. ಬೆಳ್ಳಿ ಹೆಜ್ಜೆ ಕಾರ್ಯಕ್ರಮದ ಸ್ಥಳ: ಬಾದಾಮಿ ಹೌಸ್, ಮಹಾನಗರ ಪಾಲಿಕೆ ಪ್ರಧಾನ ಕಚೇರಿ ಎದುರು. ಸಮಯ ಸಂಜೆ 4.30ಕ್ಕೆ ಸರಿಯಾಗಿ.
ಸತಿ ಸಾವಿತ್ರಿ, ಬಂಗಾರದ ಹೂವು, ಸೋತು ಗೆದ್ದವಳು, ನಮ್ಮ ಸಂಸಾರ, ಸಾಕ್ಷಾತ್ಕಾರ, ಕಸ್ತೂರಿ ನಿವಾಸ, ಕುಲಗೌರವ, ಭಲೇ ಹುಚ್ಚ, ಸಿಪಾಯಿ ರಾಮು, ಕ್ರಾಂತಿವೀರ, ಬಂಗಾರದ ಮನುಷ್ಯ, ಎರಡು ಕನಸು, ಭಕ್ತ ಕುಂಬಾರ...ಹೀಗೆ ಅವರ ಹಿನ್ನೆಲೆ ಗಾಯನದಲ್ಲಿ ಮೂಡಿಬಂದ ಚಿತ್ರಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.