Don't Miss!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- News ಅರವಿಂದ್ ಕೇಜ್ರಿವಾಲ್ ಹತ್ಯೆ ಮಾಡಲು ಸಂಚು ನಡೆಯುತ್ತಿದೆ: ಎಎಪಿ ಗಂಭೀರ ಆರೋಪ
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೀ ಕನ್ನಡದಲ್ಲಿ ಸರಿಗಮಪ ಲಿಟ್ಲ್ ಚಾಂಪ್ಸ್ ಫೈನಲ್
ಜೀ ಕನ್ನಡದ ಕಾರ್ಯಕ್ರಮ ಪುಟಾಣಿಗಳ ಸರಿಗಮಪ ಲಿಟ್ಲ್ ಚಾಂಪ್ಸ್ ಸಂಗೀತ ಸ್ಪರ್ಧೆಯ ಅಂತಿಮ ಸುತ್ತು ಭಾನುವಾರ ಅಕ್ಟೋಬರ್ 5ರಂದು ಸಂಜೆ 4.30ರಿಂದ ಪ್ರಸಾರವಾಗಲಿದೆ. ಕಾರ್ಯಕ್ರಮದ ಅಂತಿಮ ಸುತ್ತಿಗೆ ಮೂರು ಹುಡುಗರು ಹಾಗೂ ಮೂರು ಹುಡುಗಿಯರು ಆಯ್ಕೆಯಾಗಿದ್ದಾರೆ. ಅಂತಿಮ ಹಣಾಹಣಿಯಲ್ಲಿ ಮನೋಜವಂ, ಅಶ್ವಿನ್, ಮಧ್ವೇಶ್ ಹಾಗೂ ಕಾವ್ಯ, ಶಿಲ್ಪ, ಪಲ್ಲವಿ ತಮ್ಮ ಅದ್ಭುತ ಗಾಯನದಿಂದ ಜನಮನಸೂರೆಗೊಳ್ಳಲಿದ್ದಾರೆ. ವಿಶೇಷ ಅತಿಥಿಯಾಗಿ ವಾಣಿ ಜಯರಾಂ ಭಾಗವಹಿಸಲಿದ್ದಾರೆ.
ಜೀ ಕನ್ನಡ, ಸರಿಗಮಪ ಲಿಟ್ಲ್ಚಾಂಪ್ ಸ್ಪರ್ಧೆಗೆ ಕರ್ನಾಟಕದಾದ್ಯಂತದಿಂದ ಪುಟಾಣಿ ಪ್ರತಿಭೆಗಳನ್ನು ಆಯ್ಕೆ ಮಾಡಿಕೊಂಡಿತ್ತು. ಇವರಲ್ಲಿ ಈಗ ಆರು ಜನರನ್ನು ಅಂದರೆ ಮೂರು ಜೋಡಿಗಳನ್ನು ಫೈನಲ್ಗೆ ಆಯ್ಕೆ ಮಾಡಲಾಗಿದೆ. ಅಂತಿಮ ಸುತ್ತಿಗೆ ಇಬ್ಬರು ಹುಡುಗರು ಮತ್ತು ಇಬ್ಬರು ಹುಡುಗಿಯರನ್ನು ಮಾತ್ರ ಆಯ್ಕೆ ಮಾಡಬೇಕಾಗಿತ್ತು. ಆದರೆ, ಕಣದಲ್ಲಿದ್ದ ಆರು ಮಕ್ಕಳೂ ಅತ್ಯುತ್ತಮ ಹಾಡುತ್ತಿದ್ದರಿಂದ ಆರು ಜನರನ್ನೂ ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿದೆ.
ಕಂಡು ಕೇಳರಿಯದ ಬಹುಮಾನ : ವಿಜೇತರಿಗೆ 40x60 ನಿವೇಶನ, ಫಸ್ಟ್ ರನ್ನರ್ ಅಪ್ ಜೋಡಿಗೆ 30x40 ನಿವೇಶನ ಹಾಗೂ ಎರಡನೇ ರನ್ನರ್ ಅಪ್ ಜೋಡಿಗೆ ಸುಮಾರು ಮೂರು ಲಕ್ಷ ಮೌಲ್ಯದ ಶಿಷ್ಯವೇತನ ನೀಡಲಾಗುತ್ತದೆ. ಇಂಥ ರಿಯಾಲಿಟಿ ಶೋಗಳಲ್ಲಿ ಗೆದ್ದವರಿಗೆ, ಅದರಲ್ಲೂ ಮಕ್ಕಳಿಗೆ ನಿವೇಶನಗಳನ್ನು ನೀಡಿದ ನಿದರ್ಶನ ಸಿಗಲಿಕ್ಕಿಲ್ಲ.
ರಿಯಾಲಿಟಿ ಶೋಗಳಿಗೆ ಪ್ರಸಿದ್ಧವಾಗಿರುವ ಜೀ ಕನ್ನಡ ಕರ್ನಾಟಕದ ಎಲೆಮರೆಯ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ನಿರತವಾಗಿದೆ. ವಾಹಿನಿಯ ಕಾಮಿಡಿ ಕಿಲಾಡಿಗಳು, ಕುಣಿಯೋಣು ಬಾರಾ ಮತ್ತು ಸರಿಗಮಪ ಕಲಾವಿದರಿಗೆ ಒಂದು ಉತ್ತಮ ವೇದಿಕೆಯಾಗಿದೆ ಎಂದು ಜೀ ಕನ್ನಡ ವ್ಯವಹಾರ ಮುಖ್ಯಸ್ಥ ಅನುಪ್ ಚಂದ್ರಶೇಖರನ್ ಹೇಳಿದ್ದಾರೆ. ಸರಿಗಮಪ ಲಿಟ್ಲ್ ಚಾಂಪ್ಸ್ ಸ್ಫರ್ಧೆಯ ತೀರ್ಪುಗಾರರಾಗಿ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಹಾಗೂ ನಿರೂಪಕರಾಗಿ ಅರ್ಚನಾ ಉಡುಪ ಕಾರ್ಯನಿರ್ವಹಿಸುತ್ತಿದ್ದಾರೆ.
ಪೂರಕ
ಓದಿಗೆ
ಸಂಗೀತದ
ನೆಪದಲ್ಲಿ
ಜಿದ್ದಿಗೆ
ಬಿದ್ದ
ಟಿವಿ
ಮಾಧ್ಯಮ