Don't Miss!
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- News ಮಹಾರಾಜರು ಬೆಂಗಳೂರು ಅರಮನೆ ಮೈದಾನ ಜಾಗ ಬಿಟ್ಟು ಕೊಡುವಂತೆ ಎಎಪಿ ಆಗ್ರಹ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೈಸೂರಿನ ಗಾಯಕ ವಿಜಯ್ ಪ್ರಕಾಶ್ ಜೈ ಹೊ!
ವಿಜಯ್ ಪ್ರಕಾಶ್ ಮೂಲತಃ ಮೈಸೂರಿನವ. ಹೆಚ್ಚಾಗಿ ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡ ಪ್ರತಿಭಾವಂತ. ಮುಂಬೈನತ್ತ ಪಲಾಯನವಾದ ಪ್ರತಿಭೆ.ಯುವರಾಜ, ಕಾಲ್, ಸ್ವೇಡ್ಸ್, ಲಕ್ಷ್ಯ, ಮಾತೃಭೂಮಿ, ತೇರೆ ನಾಮ್...ಚಿತ್ರಗಳ ಹಿನ್ನೆಲೆ ಗಾಯಕನಾಗಿ ಗುರುತಿಸಿಕೊಂಡವರು. ಅಪ್ಪಟ ಕನ್ನಡಿಗನಾದರೂ ಅನ್ಯ ಭಾಷೆಗಳಲ್ಲಿ ಗುರಿತಿಸಿಕೊಂಡಿದ್ದೇ ಹೆಚ್ಚು. ತಮಿಳು, ತೆಲುಗು ಸಿನಿಮಾಗಳಿಗೂ ವಿಜಯ್ ಗಾನಸುಧೆ ಹರಿದಿದೆ. ಯೋಗರಾಜ ಭಟ್ಟರ ಗಾಳಿಪಟ ಚಿತ್ರದ 'ಕವಿತೆ ನೀನೇಕೆ ಪದಗಳಲಿ ಅವಿತೆ .. ' ಎಂಬ ಹೃದಯಮಿಡಿಯುವ ಗೀತೆಗೆ ವಿಜಯ್ ಅವರದೇ ಕಂಠ. ಆದರೆ ಅದ್ಯಾಕೊ ಏನೋ ಕನ್ನಡ ಚಿತ್ರಗಳಲ್ಲಿ ವಿಜಯ್ ಗೆ ಅವಕಾಶಗಳು ಹುಡುಕಿಕೊಂಡು ಬರಲಿಲ್ಲ.
'ಕಾಂಡೊಮ್ ಕಾಂಡೊಮ್ ಕಾಂಡೊಮ್...ಕಾಂ..ಡೋಂ...ಮ್ ಎಂದು ಕೊನೆಯಲ್ಲಿ ಅಬ್ಬರದ ಸಂಗೀತದೊಂದಿಗೆ ಕೊನೆಯಾಗುವ ಜಾಹೀರಾತನ್ನು ತಿಳಿಯದ ಶೂರನೇ ಇಲ್ಲ. ಏಡ್ಸ್ ಕುರಿತು ಜಾಗೃತಿ ಮೂಡಿಸುವ ಈ ಜಾಹೀರಾತಿನ ಗಾಯಕರಲ್ಲಿ ವಿಜಯ್ ಸಹ ಒಬ್ಬರು! ಚೀನಿ ಚಿತ್ರ ಸೇರಿದಂತೆ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಡಿದ್ದಾರೆ. ಎಚ್ ಡಿಎಫ್ ಸಿ, ನಾರ್ ಸೂಪ್ಸ್ ಸೇರಿದಂತೆ ಹಲವಾರು ಜಾಹೀರಾತುಗಳ ಗಾಯಕ.
ಸೋನು ನಿಗಂ ಜೀ ವಾಹಿನಿಯಲ್ಲಿ ಪ್ರಸ್ತುತ ಪಡಿಸಿದ ಸರಿಗಮಪ ಕಾರ್ಯಕ್ರಮದ ಸ್ಪರ್ಧಿಯಾಗಿದ್ದ ಪ್ರಕಾಶ್ ನಂತರ1999ರಲ್ಲಿ ಮೆಗಾ ಫೈನಲ್ಸ್ ಗೆ ಪ್ರವೇಶಿಸಿ ಗೆದ್ದವರು. ಈ ಸ್ಪರ್ಧೆಯಲ್ಲಿ ಗಾಯಕಿ ಶ್ರೇಯಾಘೋಷಾಲ್, ಅರ್ಚನಾ ಉಡುಪ ಇದ್ದದ್ದೂ ವಿಶೇಷ. ಜೀ ಕನ್ನಡದ ಸರೆಗಮಪ ಎಂಬ ರಿಯಾಲಿಟಿ ಶೋ ಮೂಲಕ ಮನೆಮಾತಾದ ಗಾಯಕ. ನಂತರ ಅವಕಾಶಗಳು ಒಂದೊಂದಾಗಿ ಹುಡುಕಿಕೊಂಡು ಬರಲು ಪ್ರಾರಂಭಿಸಿದವು.
ವಿಜಯ್ ತಂದೆ ಎಲ್ ರಾಮಶೇಷ ಮತ್ತು ತಾಯಿ ಲೋಪ ಮುದ್ರಗಾಯಕರು. ಪತ್ನಿ ಮಹತಿ ಸಹ ಗಾಯಕಿ. ಇವರ ಸಹೋದರ ಫಣೀಂದರ್ ರಂಗ ಕಲಾವಿದ. ಸಂಗೀತ ಎಂಬುದು ರಕ್ತದೊಂದಿಗೇ ಬೆರೆತ ಕುಟುಂಬ. ಪ್ರಕಾಶ್ ಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಸಬೇಕು ಎಂಬುದು ತಂದೆಯ ಇಚ್ಛೆಯಾಗಿತ್ತು. ಆದರೆ ಪ್ರಕಾಶ್ ಗೆ ಮಾತ್ರ ಹಿಂದೂಸ್ತಾನಿ ಗಾಯನದಲ್ಲಿ ಒಲವು. ಹಿಂದೂಸ್ತಾನಿ ಸಂಗೀತ ಮುಂಬೈನತ್ತ ಸೆಳೆದುಕೊಂಡು ಹೋಯಿತು. ಅಲ್ಲಿ ಸುರೇಶ್ ವಾಡ್ಕರ್ ಬಳಿ ಶಿಷ್ಯವೃತ್ತಿ ಆರಂಭ.
ಮೊದಲ ಬಾರಿ ರೆಹಮಾನ್ ಸಾಬ್ ಸ್ಲಂಡಾಗ್ ಚಿತ್ರದ 'ಜೈ ಹೊ...' ಹಾಡಲು ಕರೆದಾಗ ನನಗೆ ನಿಜಕ್ಕೂ ಆಶ್ಚರ್ಯವಾಯಿತು. ಚಿತ್ರೋದ್ಯಮದಲ್ಲಿ ಅತಿರಥ ಮಹಾರಥ ಗಾಯಕರಿರಬೇಕಾದರೆ ನನ್ನನ್ನುಕರೆದದ್ದು ಅಚ್ಚರಿ ಮೂಡಿಸಿತ್ತು. ಆ ಹಾಡು ಆಸ್ಕರ್ ಪ್ರಶಸ್ತಿ ಗಳಿಸುತ್ತದೆ ಎಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ.ನನಗೆ ಅವಕಾಶ ಕೊಟ್ಟ ರೆಹಮಾನ್ ಗೆ ಚಿರಋಣಿ ಎನ್ನುವಮುಗ್ಧ.
ಅತ್ಯುತ್ತಮ
ಚಿತ್ರ
ಸೇರಿದಂತೆ
ಸ್ಲಂಡಾಗ್
ಗೆ
8
ಆಸ್ಕರ್
ಪೂಕುಟ್ಟಿ
ಪಡೆದ
ಆಸ್ಕರ್
ದೇಶಕ್ಕೆ
ಅರ್ಪಣೆ
ಆಸ್ಕರ್
2009
ಪ್ರಶಸ್ತಿ
ವಿಜೇತರ
ಪೂರ್ಣ
ಪಟ್ಟಿ