Don't Miss!
- News Lok Sabha Election: ಕರ್ನಾಟಕದ ಈ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ನಿರ್ಣಾಯಕ
- Sports ರೋಹಿತ್ ಶರ್ಮಾ ಬಳಿಕ ಭಾರತ ತಂಡದ ನಾಯಕನಾರು?; ಅಚ್ಚರಿ ಹೆಸರು ತಿಳಿಸಿದ ಹರ್ಭಜನ್ ಸಿಂಗ್!
- Lifestyle ಚಪಾತಿ, ಅನ್ನಕ್ಕೆ ಟೊಮೆಟೋ ಬೇಳೆ ಸಾರು ಸಖತ್ ರುಚಿ..! ಮಾಡೋದು ಸುಲಭ..!
- Automobiles ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಮಾಜಕ್ಕೆ ಕನ್ನಡಿ ಹಿಡಿಯುವ ಮುಖಪುಟ
ಏಡ್ಸ್ ಪೀಡತ ಮಕ್ಕಳ ಪುಟ್ಟ ಕೈಗಳಲ್ಲಿ 'ಮುಖಪುಟ' ಚಿತ್ರದ ಧ್ವನಿಸುರುಳಿಗಳು ಇದ್ದವು. ವೇದಿಕೆ ಮೇಲೆ ಮಕ್ಕಳೊಂದಿಗೆ ಮಾತಾನಾಡುತ್ತಿದ್ದ ರೂಪಾ ಅಯ್ಯರ್ ಭಾವುಕರಾಗಿದ್ದರು. ಅವರ ಮಾತುಗಳಲ್ಲಿ ಸಮಾಜದ ಮುಖಪುಟ ಅನಾವರಣಗೊಂಡಿತ್ತು. ಈ ಪುಟ್ಟ ಮಕ್ಕಳಾದರೂ ಏನು ಪಾಪ ಮಾಡಿದ್ದರು? ಎಂಬ ಅವರ ಪ್ರಶ್ನೆ ಸಮಾಜಕ್ಕೆ ಚುಚ್ಚುತ್ತಿತ್ತು. ಯುವಕರು ಶಿಕ್ಷಣದೊಂದಿಗೆ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳ ಬೇಕು ಎಂದು ಅವರು ಸಲಹೆ ನೀಡಿದರು.
ಈ ಹೃದಯಸ್ಪರ್ಶಿ ಕಾರ್ಯಕ್ರಮದಲ್ಲಿ ಎಚ್ ಐವಿ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ನಟರಾದ ರಾಘವೇಂದ್ರ ರಾಜ್ ಕುಮಾರ್, ಜಗ್ಗೇಶ್ ಕ್ರಮವಾಗಿ ರು.1 ಲಕ್ಷ ಮತ್ತು ರು.50 ಸಾವಿರ ಸಹಾಯಧನ ನೀಡಿದರು. ವಜ್ರೇಶ್ವರಿ ಕುಮಾರ್ ರು.50 ಸಾವಿರ ಮತ್ತು ಛಾಯಾಗ್ರಾಹಕ ಐತಾಳ್ ರು.25 ಸಾವಿರ ಸಹ ನೆರವು ನೀಡಿದರು. ಸಮಾಜದ ಬಗ್ಗೆ ರೂಪ ಅಯ್ಯರ್ ಅವರ ಕಾಳಜಿ ಮುಕ್ತ ಪ್ರಶಂಸೆಗೆ ಪಾತ್ರವಾಯಿತು.
ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡುತ್ತಾ, ಇತರರೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಳ್ಳುವವರು ದಯವಿಟ್ಟು ಗರ್ಭ ನಿರೋಧಕಗಳನ್ನು ಉಪಯೋಗಿಸಿ. ನಮ್ಮ ಸಮಾಜಕ್ಕೆ ಏಡ್ಸ್ ಪೀಡಿತ ಮಕ್ಕಳು ಬೇಡ ಎಂದು ಅವರು ನೇರವಾಗಿ ನುಡಿದರು. ಇದೇ ಸಂದರ್ಭದಲ್ಲಿ ಹಂಸಲೇಖ ಅವರಿಗೆ 'ಧೃವ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
(ದಟ್ಸ್ ಕನ್ನಡ ಚಿತ್ರವಾರ್ತೆ)