Don't Miss!
- Technology ಬಜೆಟ್ ಬೆಲೆಗೆ ಲಭ್ಯವಿರುವ ಈ ಫೋನ್ಗಳ ಫೀಚರ್ಸ್ ತಿಳಿದ್ರೆ, ವಾವ್ ಅಂತೀರಾ!
- Automobiles ಸಾಯಿಬಾಬಾ ಭಕ್ತರಿಗೆ ಸಿಹಿಸುದ್ದಿ: ಇಲ್ಲಿಂದ ಶಿರಡಿಗೆ ಪಲ್ಲಕ್ಕಿ ಬಸ್.. ಕಡಿಮೆ ಖರ್ಚಿನಲ್ಲಿ ಹೋಗಬಹುದು!
- Lifestyle ವೀಲ್ಚೇರ್ನಲ್ಲಿ ಮಾವನ ಹೆಣವಿಟ್ಟು ಬ್ಯಾಂಕ್ಗೆ ತಂದ ಸೊಸೆ..! ಲೋನ್ ಮಾಡಿಸುವಾಗ ಸಿಕ್ಕಿಬಿದ್ಲು..!
- Finance ಅಂಬುಜಾ ಸಿಮೆಂಟ್ ಮೇಲೆ ಅದಾನಿ ಗ್ರೂಪ್ನಿಂದ 8,339 ಕೋಟಿ ರೂ. ಹೂಡಿಕೆ
- News ಕರ್ನಾಟಕದಲ್ಲಿ ಮೋದಿ, ಯೋಗಿ, ಅಮಿತ್ ಶಾ, ಜೆಪಿ ನಡ್ಡಾ ಪ್ರಚಾರ: ಯಾವಾಗ, ಎಲ್ಲೆಲ್ಲಿ? ಇಲ್ಲಿದೆ ಮಾಹಿತಿ
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಯಾರೆ ನೀ ದೇವತೆ'ಸಿಡಿ ಬಿಡುಗಡೆ ಮಾಡಿದ ಎಚ್ಡಿಕೆ
ಮಾಜಿ ಮುಖ್ಯಮಂತ್ರಿ ಹಾಲಿ ಸಂಸದ ಎಚ್ ಡಿ ಕುಮಾರಸ್ವಾಮಿ ಅವರು 'ಯಾರೆ ನೀ ದೇವತೆ' ಚಿತ್ರದ ಧ್ವನಿಸುರುಳಿಯನ್ನು ಗುರುವಾರ(ನ.6) ಬೆಲ್ ಹೋಟೆಲ್ ನಲ್ಲಿ ಬಿಡುಗಡೆ ಮಾಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲಾ ಅವರು ಔಪಚಾರಿಕವಾಗಿ 'ಯಾರೆ ನೀ ದೇವತೆ' ಸಿಡಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.
ಕುಮಾರ್ ಎಂಬುವವರ ಚೊಚ್ಚಲ ಪ್ರಯತ್ನದ ಫಲವೇ ಯಾರೇ ನೀ ದೇವತೆ. ಚಿತ್ರದ ನಿರ್ಮಾಪಕರಷ್ಟೇ ಅಲ್ಲ ನಾಯಕ ನಟ ಅವರೇ. ಹೊಸ ಪರಿಚಯ ಸಂಗೀತಾ ಚಿತ್ರದ ನಾಯಕಿ. 'ಚಂಡ' ಚಿತ್ರದಲ್ಲಿ ಚನ್ನ ಎಂಬ ಸಣ್ಣ ರೌಡಿ ಪಾತ್ರ ಮಾಡಿದ ಅನುಭವ ಕುಮಾರ್ ಅವರಿಗಿದೆ. ಚಿತ್ರವನ್ನು ನಾಗೇಂದ್ರ ಅರಸ್ ನಿರ್ದೇಶಿಸುತ್ತಿದ್ದಾರೆ.
'ಹಾರ್ಟ್ ಬೀಟ್ಸ್' ಮತ್ತು 'ರಾಖಿ' ಚಿತ್ರಗಳು ಈಗಾಗಲೇ ನಾಗೇಂದ್ರ ಅರಸ್ ನಿರ್ದೇಶನದ ಚಿತ್ರಗಳು. ಚಿತ್ರದ ಸಾಹಸ ಪ್ರಧಾನ ದೃಶ್ಯಗಳನ್ನು ಕನಕಪುರದ ರಾಮದೇವ ಬೆಟ್ಟದಲ್ಲಿ ಚಿತ್ರೀಕರಿಸಲಾಗಿದೆ. ಹಿಂದಿಯ 'ಶೋಲೆ' ಚಿತ್ರವನ್ನು ಇಂತಹ ಅಪಾಯಕಾರಿ ಸ್ಥಳದಲ್ಲಿ ಚಿತ್ರೀಕರಿಸಿಲ್ಲ. ಸಸ್ಪೆನ್ಸ್ ಅಂಶಗಳೊಂದಿಗೆ ಹಾಸ್ಯಕ್ಕೂ ಪ್ರಾಧಾನ್ಯತೆ ನೀಡಲಾಗಿದೆ ಎಂದು ನಾಗೇಂದ್ರ ಅರಸ್ ತಿಳಿಸಿದರು.
ಈಗಾಗಲೇ 35 ದಿನಗಳ ಚಿತ್ರೀಕರಣ ಮುಗಿದಿದೆ. ಹಾಡು ಮತ್ತು ಕ್ಲೈಮ್ಯಾಕ್ಸ್ ಚಿತ್ರೀಕರಣ ಬಾಕಿ ಇದ್ದು ಕಾಸರಗೋಡು ಮತ್ತು ಫಿಲ್ಮ್ ಸಿಟಿಯಲ್ಲಿ ಉಳಿದ ಭಾಗವನ್ನು ಚಿತ್ರೀಕರಿಸಲಾಗುತ್ತದೆ ಎಂದು ಅರಸ್ ವಿವರ ನೀಡಿದರು. ಚಿತ್ರಕ್ಕೆ ವೆಂಕಟ್ ನಾರಾಯಣ್ ಅವರ ಸಂಗೀತ ಇದೆ.
ನಾಗೇಂದ್ರ ಅರಸ್ ಅವರೊಂದಿಗೆ ಗಿರಿ ದಿನೇಶ್ ಅವರ ಹಾಸ್ಯ ಚಿತ್ರಕ್ಕಿದೆ. ಕತೆ, ಚಿತ್ರಕತೆ, ಸಂಕಲನದ ಜತೆಗೆ ನಿರ್ದೇಶನದ ಜವಾಬ್ದಾರಿ ನಾಗೇಂದ್ರ ಅರಸ್ ಅವರದು. ಸರಳ, ಸುಂದರ,ಸದಭಿರುಚಿಯ ಚಿತ್ರ ಇದಾಗಿದ್ದು ನವೆಂಬರ್ ಕೊನೆಗೆ ಬಿಡುಗಡೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎನ್ನುತ್ತಾರೆ ನಿರ್ಮಾಪಕರು.
(ದಟ್ಸ್ ಕನ್ನಡ ಚಿತ್ರವಾರ್ತೆ)