Don't Miss!
- News ಆಕ್ಸಿಸ್ ಬ್ಯಾಂಕ್ಗೆ ಬರೋಬ್ಬರಿ 7,129 ಕೋಟಿ ರೂಪಾಯಿ ಲಾಭ!
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೆಂಪೇಗೌಡ ಹಾಡುಗಳು ಹರ ಹರ ಶಂಕರ ಶಶಿಧರ
ಕಿಚ್ಚ ಸುದೀಪ್ ನಾಯಕ ಮತ್ತು ಖುದ್ದು ನಿರ್ದೇಶಿಸುತ್ತಿರುವ ತಮಿಳಿನ ಯಶಸ್ವಿ 'ಸಿಂಗಂ' ಚಿತ್ರದ ರಿಮೇಕ್ 'ಕೆಂಪೇಗೌಡ'. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಎರಡು ಹಾಡಿಗೆ ನಾಗೇಂದ್ರ ಪ್ರಸಾದ್ ಸಾಹಿತ್ಯ ನೀಡಿದರೆ, ಯೋಗರಾಜ್ ಭಟ್, ಘೌಸ್ ಪೀರ್ ಮತ್ತು ಕವಿರಾಜ್ ತಲಾ ಒಂದು ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಆಲ್ಬಮ್ ನಲ್ಲಿ ಒಟ್ಟು ಐದು ಹಾಡುಗಳಿದ್ದು ಸುದೀಪ್ ಒಂದು ಹಾಡಿಗೆ ಧ್ವನಿಗೂಡಿಸಿದ್ದಾರೆ.
1. ಹಳೆ ರೇಡಿಯೋ ಹಾಕಿ ಹಾಡು ಕೇಳುವಾ : ಯೋಗರಾಜ್ ಭಟ್ ಬರೆದಿರುವ ಈ ಹಾಡಿನಲ್ಲಿ ಅಂತಹ ವಿಶೇಷವೇನೂ ಇಲ್ಲ. ಹಾಡಿನ ಮಧ್ಯೆ ಆಕಾಶವಾಣಿಯಲ್ಲಿ ಬರುವ ಹವಾಮಾನ ವರದಿಯಂತೆ ಪ್ರೀತಿ ಬಗ್ಗೆ ಕೆಲವೊಂದು ನುಡಿಮುತ್ತುಗಳಿವೆ. ಹಾಗೆ ಸುಮ್ಮನೆ ಗೀಚಿದಂತಿದೆ ಯೋಗರಾಜ್ ಭಟ್ ಸಾಹಿತ್ಯ. ಸುದೀಪ್, ಶಮಿತಾ ಧ್ವನಿಗೂಡಿಸಿರುವುದೇ ಈ ಹಾಡಿನ ವಿಶೇಷ.
2. ತರತರ ಹಿಡಿಸಿದೆ ಮನಸಿಗೆ ನೀನು: ತೆಲುಗು ಸಾಹಿತ್ಯದೊಂದಿಗೆ ಶುರುವಾಗುವ ಹಾಡು. ಸಾಹಿತ್ಯ ಕೇಳದಷ್ಟು ಮಟ್ಟಿಗೆ ಸಂಗೀತ ಅಬ್ಬರಿಸಿದರೂ ಟೋನ್ ಇಂಪಾಗಿದ್ದು, ಡ್ಯುಯಟ್ ಹಾಡಿಗೆ ಪ್ರೇಕ್ಷಕರು 'ಜೈ ಹೋ' ಅನ್ನಲು ಅಡ್ಡಿಯಿಲ್ಲ. ವಿಜಯ್ ಪ್ರಕಾಶ್ ಮತ್ತು ಶ್ರೇಯಾ ಘೋಷಾಲ್ ಈ ಹಾಡನ್ನು ಹಾಡಿದ್ದಾರೆ.
3. ಶ್ರೀ ರಾಮ ಜೈರಾಮ ಹೋಗಾರೆ ಹಂಗಾಮ: ಪಕ್ಕಾ ತಪಾಂಗುಚಿ ಹಾಡು. ಶಂಕರ್ ಮಹಾದೇವನ್ ತನ್ನ ಎಂದಿನ ಶೈಲಿಯಲ್ಲಿ ಹಾಡಿದ್ದಾರೆ. ಈ ರೀತಿಯ ಟೋನ್ಗಳು ಈಗಾಗಲೆ ಬಹಳಷ್ಟು ಬಂದು ಹೋಗಿವೆ. ಆ ಸಾಲಿಗೆ ಈ ಹಾಡನ್ನ್ನು ಸೇರಿಸಬಹುದು.
4. ವಯಸ್ಸು ನನಗೆ ಹದಿನೆಂಟು ಆಯಿತು, ಗೆಳೆಯನೇ: ನಾಗೇಂದ್ರ ಪ್ರಸಾದ್ ಹಾಡಿಗೆ ಉತ್ತಮ ಸಾಹಿತ್ಯ ನೀಡಿದ್ದಾರೆ. ಸಂಗೀತ ನಿರ್ದೇಶಕರು ಉತ್ತಮ ಟ್ಯೂನ್ ನೀಡಿದ್ದರೂ ಸೋನು ಶ್ರೇಯಾ ಧ್ವನಿಗೆ ಹೊಂದುಕೊಂಡ ನಮ್ಮ ಕನ್ನಡಿಗರಿಗೆ ಈ ಜೋಡಿ ಧ್ವನಿ ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟ. ನರೇಶ್ ಐಯ್ಯರ್, ಲಕ್ಷ್ಮೀ ಮನಮೋಹನ್ ಹಾಡಿರುವ ಹಾಡು. -
5. ಹರ ಹರ ಶಂಕರ ಶಶಿಧರ: ನಾಯಕನ ಬಗ್ಗೆ ಹೇಳಿಕೊಳ್ಳುವಂತಹ ಹಾಡು. ಸಾಹಿತ್ಯ ಮತ್ತು ಸಂಗೀತದ ಬಗ್ಗೆ ಅಷ್ಟೇನೂ ಮೆಚ್ಚಿಕೊಳ್ಳುವಂತದ್ದೂ ಇಲ್ಲಾ. ಈ ಹಾಡನ್ನು ರವಿ ಶಂಕರ್ ಹಾಡಿದ್ದಾರೆ. ಒಟ್ಟಿನಲ್ಲಿ ಐದು ಹಾಡುಗಳ ಪೈಕಿ ಎರಡು ಹಾಡು ಓಕೆ, ಮಿಕ್ಕಿದ್ದು ಅಷ್ಟಕಷ್ಟೆ.