Don't Miss!
- News ಲೋಕಸಭಾ ಚುನಾವಣೆಯಲ್ಲಿ ಕೊಡಗಿನಲ್ಲಿ ಮತ್ತೆ ‘ಕೈ’ ಕಮಾಲ್?: ಒಂದಷ್ಟು ನಾಯಕರು ಮೌನವಾಗಿದ್ದೇಕೆ?
- Lifestyle ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದೇಕೆ.? ಹಿರಿಯರ ವಾದವೇನು..?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊರೊನಾ ಯೋಧರಿಗೆ ಗೀತ ನಮನ: 14 ಭಾಷೆಯಲ್ಲಿ, 100 ಗಾಯಕರಿಂದ ದಾಖಲೆಯ ಹಾಡು
ದೇಶಾದ್ಯಂತ ಕೋವಿಡ್-19 ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯಕೀಯ ಕ್ಷೇತ್ರದ ಯೋಧರು ಮತ್ತು ಪಿಎಂ ಕೇರ್ಸ್ ಗೆ ದೇಣಿಗೆ ನೀಡುವುದಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮೊದಲ ಬಾರಿಗೆ ದೇಶದ 100 ಗಾಯಕರು 'ಒಂದು ದೇಶ ಒಂದು ಧ್ವನಿ' ಎಂಬ ಗೀತೆಯನ್ನು ಸಮರ್ಪಿಸುತ್ತಿದ್ದಾರೆ.
ಭಾರತದ ಖ್ಯಾತ ಗಾಯಕಿ, ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಆಶೀರ್ವಾದದಲ್ಲಿ ದೇಶದ 14 ಭಾಷೆಗಳಲ್ಲಿ 100 ಗಾಯಕರು ಈ ಹಾಡನ್ನು ಹಾಡಿದ್ದಾರೆ. ಇಷ್ಟು ಸಂಖ್ಯೆಯ ಗಾಯಕರು ಒಂದು ಹಾಡು ಹಾಡು ಮೂಲಕ ದಾಖಲೆ ನಿರ್ಮಿಸಿದ್ದಾರೆ. ಭಾರತೀಯ ಗಾಯಕರ ಹಕ್ಕುಗಳ ಸಂಘ (Indian Singers Rights Association (ISRA))ದ ಸದಸ್ಯರಾಗಿರುವ 100 ಗಾಯಕರು ದೇಶದ ವೈದ್ಯಕೀಯ ಸಿಬ್ಬಂದಿಗೆ ಈ ಹಾಡನ್ನು ಸಮರ್ಪಣೆ ಮಾಡಲಿದ್ದಾರೆ. ಮುಂದೆ ಓದಿ..
ಆಶಾ ಭೋಸ್ಲೆ ಪ್ರತಿಕ್ರಿಯೆ
ಈ ಹಾಡಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರು, "ಗಾಯಕರು ಕಲಾವಿದರಾಗಿದ್ದು, ಅವರು ಯಾವಾಗಲೂ ಸಂಗೀತದ ಹಲವಾರು ಮಾರ್ಗಗಳ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಡೀ ದೇಶವೇ ಕೋರೋನಾ ವಿರುದ್ಧ ಹೋರಾಟ ಮಾಡುತ್ತಿರುವ ಈ ಸಂದರ್ಭದಲ್ಲಿ ISRAಯಿಂದ 100 ಗಾಯಕರು ದೇಶಕ್ಕೆ ಪ್ರೀತಿ ಮತ್ತು ಒಂದು ಧ್ವನಿಯಾಗಿ ಈ ಹಾಡನ್ನು ಸಮರ್ಪಣೆ ಮಾಡಲು ನಿರ್ಧರಿಸಿದ್ದೇವೆ'' ಎಂದಿದ್ದಾರೆ.
ಮೇ 3ಕ್ಕೆ ಹಾಡು ದೇಶಕ್ಕೆ ಸಮರ್ಪಣೆ
"ನಮ್ಮೆಲ್ಲರ ನೆಚ್ಚಿನ ಗಾಯಕಿ ಲತಾ ಮಂಗೇಶ್ಕರ್ ಅವರು ISRA ಪರವಾಗಿ ಈ ಗೀತೆಯನ್ನು ಮೇ 3 ರಂದು ದೇಶಕ್ಕೆ ಸಮರ್ಪಿಸಲಿದ್ದಾರೆ'' ಎಂದು ಆಶಾ ಭೋಸ್ಲೆ ತಿಳಿಸಿದರು. ಹಿಂದಿ, ಬೆಂಗಾಲಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಭೋಜ್ಪುರಿ, ಅಸ್ಸಾಮೀಸ್, ಕಾಶ್ಮೀರಿ, ಸಿಂಧಿ, ರಾಜಸ್ಥಾನಿ, ಒಡಿಯಾ ಭಾಷೆಗಳಲ್ಲಿ ಈ ಹಾಡನ್ನು ಹಾಡಲಾಗಿದೆ.
ಎಸ್ ಪಿ ಬಿ, ಸೋನು ನಿಗಂ, ಶಂಕರ್ ಮಹದೇವನ್ ಸಹ ಹಾಡಿದ್ದಾರೆ
ಒಂದು ಕಾಳಜಿಗಾಗಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕಲಾವಿದರು ಸೇರಿರುವುದು ಇದೇ ಮೊದಲಾಗಿದೆ. ಆಶಾ ಭೋಸ್ಲೆ, ಅನೂಪ್ಜಲೋಟಾ, ಅಲ್ಕಾ ಯಾಗ್ನಿಕ್, ಹರಿಹರನ್, ಕೈಲಾಶ್ ಖೇರ್, ಪಂಕಜ್ ಉಧಾಸ್, ಕವಿತಾ ಕೃಷ್ಣಮೂರ್ತಿ, ಕುಮಾರ್ ಸಾನು, ಎಸ್.ಪಿ.ಬಾಲಸುಬ್ರಮಣ್ಯಂ, ಶಾನ್, ಸೋನು ನಿಗಂ, ಸುಧೇಶ್ ಭೋಸ್ಲೆ, ಸುರೇಶ್ ವಾಡ್ಕರ್, ಉದಿತ್ ನಾರಾಯಣ, ಶಂಕರ್ ಮಹದೇವನ್ ಸೇರಿದಂತೆ 100 ಗಾಯಕರು ಧ್ವನಿ ನೀಡಿದ್ದಾರೆ.
ಸೋನು ನಿಗಂ, ಶ್ರೀನಿವಾಸ್, ಸಂಜಯ್ ಕನಸಿನ ಕೂಸು
ಈ ಗೀತೆ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಂ, ಶ್ರೀನಿವಾಸ್ ಮತ್ತು ಸಂಜಯ್ ತಂಡನ್ ಅವರ ಕನಸಿನ ಕೂಸಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೋನು ನಿಗಂ "ದೇಶಾದ್ಯಂತ ನಡೆಯುತ್ತಿರುವ ಹೋರಾಟ ಮತ್ತು ಸರ್ಕಾರ ಹಾಗೂ ವೈದ್ಯಕೀಯ ಸಮುದಾಯ ನಡೆಸುತ್ತಿರುವ ಹೋರಾಟಕ್ಕೆ ಸಲ್ಲಿಸುವ ಒಂದು ಅದ್ಭುತವಾದ ಗೌರವ ಇದಾಗಿದೆ. ಭಾರತದ ವಿವಿಧ ಭಾಗಗಳ 100 ಗಾಯಕರು ಸೇರಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ" ಎಂದಿದ್ದಾರೆ.