Don't Miss!
- News ಲೋಕಸಭಾ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ ಭದ್ರತೆಗೆ 5 ಸಾವಿರ ಪೊಲೀಸರ ನಿಯೋಜನೆ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಘವೇಂದ್ರ ರಾಜ್ ಕುಮಾರ್ ಮತ್ತೆ ಹಾಡಲಿದ್ದಾರೆ
"ಒಲಿದ ಸ್ವರಗಳು ಒಂದಾದರೆ ಬಲು ಇಂಪಾದ ಸಂಗೀತಾ.. ಹು ಹಾಡು ಸೌಮ್ಯಾ" (ಗಜಪತಿ ಗರ್ವಭಂಗ) ಎನ್ನುತ್ತಿದ್ದರೆ ಪ್ರೇಕ್ಷಕರು ಹಾಡಲು ಶುರುವಚ್ಚಿಕೊಳ್ಳುತ್ತಿದ್ದರು. ಆ ರೀತಿಯ ಕೋಮಲ ಕಂಠದ ಗಾಯಕ ರಾಘವೇಂದ್ರ ರಾಜ್ ಕುಮಾರ್. ಅವರ ಕಂಠದಲ್ಲಿ ಏನೋ ಒಂಥರಾ ಆಕರ್ಷಣೆ ಇತ್ತು. ಆದರೂ ಯಾಕೋ ಏನೋ ರಾಘಣ್ಣ ಹೆಚ್ಚಾಗಿ ಹಾಡಲು ಹೋಗಲಿಲ್ಲ.
ಈಗ ಬಹಳ ಸುದೀರ್ಘ ಸಮಯದ ಬಳಿಕ ಮತ್ತೆ ರಾಘವೇಂದ್ರರಾಜ್ ಕುಮಾರ್ ಹೊಸ ಹುರುಪಿನಿಂದ ಹಾಡಲು ಮುಂದಾಗಿದ್ದಾರೆ. "ನಿಜವ ನುಡಿಯಲೆ ನನ್ನಾಣೆ ನಲ್ಲೆ ಪ್ರೀತಿಯ ರಂಗು ಚೆಲ್ಲಿದೆ..."ಎಂದು 'ನಂಜುಂಡಿ ಕಲ್ಯಾಣ' ಚಿತ್ರದಲ್ಲಿ ಹಾಡಿದ್ದ ರಾಘಣ್ಣ ಈಗಪುನೀತ್ ರಾಜ್ ಕುಮಾರ್ 'ಅಣ್ಣಾ ಬಾಂಡ್' ಚಿತ್ರಕ್ಕಾಗಿ ಹಾಡಲಿದ್ದಾರೆ.
ವರನಟ ಡಾ.ರಾಜ್ ಕುಮಾರ್ ಅವರ ಹಾಡುಗಾರಿಕೆಯ ಪ್ರಭಾವ ರಾಘಣ್ಣನ ಮೇಲೆ ಮುಂಚಿನಿಂದಲೂ ಇದೆ. ತಮ್ಮ ಚಿತ್ರಗಳಿಗೆ ತಾವೇ ಹಾಡಿಕೊಳ್ಳುತ್ತಿದ್ದ ರಾಘಣ್ಣ ಕೊನೆಯದಾಗಿ ಹಾಡಿದ ಚಿತ್ರ 'ಸೂತ್ರಧಾರ'. ಈಗ ಮತ್ತೊಮ್ಮೆ ತಮ್ಮ ಕಂಠಸಿರಿಯನ್ನು ಸೊಬಗನ್ನು ಅಭಿಮಾನಿಗಳಿಗೆ ಕರುಣಿಸಿದ್ದಾರೆ.
'ಮೈಲಾರಿ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರು ಶಿವರಾಜ್ ಕುಮಾರ್ಗಾಗಿ ಹಾಡಿದ್ದರು. ಈಗ ಪುನೀತ್ ಚಿತ್ರದಲ್ಲಿ ರಾಘಣ್ಣ ಹಾಡುತ್ತಿರುವುದು ವಿಶೇಷ. ಸಾಕಷ್ಟು ಗ್ಯಾಪ್ ಬಳಿಕ ಬರುತ್ತಿರುವ ಅವರ ಧ್ವನಿಯ ಏರಿಳಿತಗಳ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಇದ್ದೇ ಇದೆ. (ದಟ್ಸ್ಕನ್ನಡ ಸಿನಿವಾರ್ತೆ)