Don't Miss!
- News ಶಿವಮೊಗ್ಗ ಲೋಕಸಭಾ ಕ್ಷೇತ್ರ: ಶಾಂತಿಯುತ ಮತದಾನಕ್ಕಾಗಿ ಅಧಿಕಾರಿಗಳಿಗೆ ಖಡಕ್ ಸೂಚನೆ
- Sports ಟಿ20 ವಿಶ್ವಕಪ್-2024: "ಬಾಗಿಲು ಮುಚ್ಚಿದ್ದೇನೆ" ಎಂದಿದ್ದೇಕೆ ಸ್ಪಿನ್ ಮಾಂತ್ರಿಕ ನರೈನ್
- Lifestyle ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Automobiles ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಘವೇಂದ್ರ ರಾಜ್ ಕುಮಾರ್ ಮತ್ತೆ ಹಾಡಲಿದ್ದಾರೆ
"ಒಲಿದ ಸ್ವರಗಳು ಒಂದಾದರೆ ಬಲು ಇಂಪಾದ ಸಂಗೀತಾ.. ಹು ಹಾಡು ಸೌಮ್ಯಾ" (ಗಜಪತಿ ಗರ್ವಭಂಗ) ಎನ್ನುತ್ತಿದ್ದರೆ ಪ್ರೇಕ್ಷಕರು ಹಾಡಲು ಶುರುವಚ್ಚಿಕೊಳ್ಳುತ್ತಿದ್ದರು. ಆ ರೀತಿಯ ಕೋಮಲ ಕಂಠದ ಗಾಯಕ ರಾಘವೇಂದ್ರ ರಾಜ್ ಕುಮಾರ್. ಅವರ ಕಂಠದಲ್ಲಿ ಏನೋ ಒಂಥರಾ ಆಕರ್ಷಣೆ ಇತ್ತು. ಆದರೂ ಯಾಕೋ ಏನೋ ರಾಘಣ್ಣ ಹೆಚ್ಚಾಗಿ ಹಾಡಲು ಹೋಗಲಿಲ್ಲ.
ಈಗ ಬಹಳ ಸುದೀರ್ಘ ಸಮಯದ ಬಳಿಕ ಮತ್ತೆ ರಾಘವೇಂದ್ರರಾಜ್ ಕುಮಾರ್ ಹೊಸ ಹುರುಪಿನಿಂದ ಹಾಡಲು ಮುಂದಾಗಿದ್ದಾರೆ. "ನಿಜವ ನುಡಿಯಲೆ ನನ್ನಾಣೆ ನಲ್ಲೆ ಪ್ರೀತಿಯ ರಂಗು ಚೆಲ್ಲಿದೆ..."ಎಂದು 'ನಂಜುಂಡಿ ಕಲ್ಯಾಣ' ಚಿತ್ರದಲ್ಲಿ ಹಾಡಿದ್ದ ರಾಘಣ್ಣ ಈಗಪುನೀತ್ ರಾಜ್ ಕುಮಾರ್ 'ಅಣ್ಣಾ ಬಾಂಡ್' ಚಿತ್ರಕ್ಕಾಗಿ ಹಾಡಲಿದ್ದಾರೆ.
ವರನಟ ಡಾ.ರಾಜ್ ಕುಮಾರ್ ಅವರ ಹಾಡುಗಾರಿಕೆಯ ಪ್ರಭಾವ ರಾಘಣ್ಣನ ಮೇಲೆ ಮುಂಚಿನಿಂದಲೂ ಇದೆ. ತಮ್ಮ ಚಿತ್ರಗಳಿಗೆ ತಾವೇ ಹಾಡಿಕೊಳ್ಳುತ್ತಿದ್ದ ರಾಘಣ್ಣ ಕೊನೆಯದಾಗಿ ಹಾಡಿದ ಚಿತ್ರ 'ಸೂತ್ರಧಾರ'. ಈಗ ಮತ್ತೊಮ್ಮೆ ತಮ್ಮ ಕಂಠಸಿರಿಯನ್ನು ಸೊಬಗನ್ನು ಅಭಿಮಾನಿಗಳಿಗೆ ಕರುಣಿಸಿದ್ದಾರೆ.
'ಮೈಲಾರಿ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರು ಶಿವರಾಜ್ ಕುಮಾರ್ಗಾಗಿ ಹಾಡಿದ್ದರು. ಈಗ ಪುನೀತ್ ಚಿತ್ರದಲ್ಲಿ ರಾಘಣ್ಣ ಹಾಡುತ್ತಿರುವುದು ವಿಶೇಷ. ಸಾಕಷ್ಟು ಗ್ಯಾಪ್ ಬಳಿಕ ಬರುತ್ತಿರುವ ಅವರ ಧ್ವನಿಯ ಏರಿಳಿತಗಳ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಇದ್ದೇ ಇದೆ. (ದಟ್ಸ್ಕನ್ನಡ ಸಿನಿವಾರ್ತೆ)