Don't Miss!
- News Hubballi: ರಾಜ್ಯ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆ: ನೇಹಾ ನಿವಾಸಕ್ಕೆ ಶ್ರೀಗಳು, ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ: ಪೊಲೀಸ್ ಅಭಯ
- Technology ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Sports LSG vs CSK IPL 2024: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯೋಗರಾಜ್ ಭಟ್ ಪಂಚರಂಗಿ ಧ್ವನಿಸುರುಳಿ ವಿಮರ್ಶೆ
ಯೋಗರಾಜಭಟ್ ನಿರ್ದೇಶನ ಮತ್ತು ನಿರ್ಮಾಣದ ಈ ಚಿತ್ರದ ಒಂದು ಹಾಡನ್ನು ಕ್ಯಾಸೆಟ್ ಬಿಡುಗಡೆಗೆ ಮುಂಚೆನೇ ಟಿವಿವಾಹಿನಿ ಮತ್ತು ಎಫ್ ಎಮ್ ರೇಡಿಯೊಗಳಿಗೆ ನೀಡಿ ಹೊಸಬಗೆಯ ಪ್ರೊಮೋಷನ್ ಗೆ ಭಟ್ರು ನಾಂದಿ ಹಾಡಿದ್ದಾರೆ. ಇತ್ತೀಚಿಗೆ ಬಂದ ಭಟ್ರ ಮೂರು ಹಿಟ್ ಚಿತ್ರಗಳಲ್ಲಿ ಹಾಡುಗಳ ಪಾತ್ರ ಬಹು ಮುಖ್ಯ. ಸುಶ್ರಾವ್ಯ ಟ್ಯೂನ್, ಉತ್ತಮ ಸಂಗೀತ ಮತ್ತು ಇವತ್ತಿನ ಟ್ರೆಂಡ್ ಗೆ ತಕ್ಕಂತೆ ಸಾಹಿತ್ಯಕ್ಕೆ ಒತ್ತು ನೀಡುವ ಭಟ್, ಚಿತ್ರವನ್ನು ಅರ್ಧ ಹಾಡಿನಲ್ಲೇ ಹಿಟ್ ಮಾಡಿಸುತ್ತಿದ್ದಾರೆಂದರೆ ತಪ್ಪಾಗಲಾರದು.
* ಬಾಲರಾಜ್ ತಂತ್ರಿ ಕೆ
1. ಲೈಫ್ ಇಷ್ಟೇನೆ: ಇವತ್ತಿನ ಲೈಫ್ ಸ್ಟೈಲ್ ಬಗ್ಗೆ, ಕಾಲೇಜು ಹುಡುಗ್ರು, ಮೊಬೈಲ್ ಗೀಳು, ಭವಿಷ್ಯದ ಬಗ್ಗೆ ಸಾಹಿತ್ಯವಿರುವ ಹಾಡು. ಹಿಂದಿನ ಜನ್ಮದ ರಹಸ್ಯ ತಿಳ್ಕೋ... ಮುಂದಿನ ಜನ್ಮದ ಭವಿಷ್ಯ ತಿಳ್ಕೋ...ಈಗಿನ ಜನ್ಮ ಹಾಳಾಗೊಗ್ಲಿ ಲೈಫು ಇಷ್ಟೇನೆ.. ಮುಂತಾದ ಸಾಲುಗಳಿರುವ ಈ ಸಖತ್ ಹಾಡಿಗೆ ಭಟ್ರ ಸಾಹಿತ್ಯವಿದೆ. ಈ ಹಾಡುನ್ನು ಟಿವಿವಾಹಿನಿ ಮತ್ತು ಎಫ್ ಎಮ್ ರೇಡಿಯೊಗಳಲ್ಲಿ ನೀವು ಆಲಿಸಿ/ನೋಡಿರಬಹುದು. ನಮ್ಮ ಹಾಡನ್ನು ಕೇಳಲೇ.. ಬೇಡಿ ಎಂದು ಸಾಹಿತ್ಯವಿದ್ದರೂ ಹಾಡು ಹಿಟ್ ಆಗುವುದರಲ್ಲಿ ಸಂಶಯವೇ ಇಲ್ಲ.
2. ಉಡಿಸುವೆ ಬೆಳಕಿನ ಸೀರೆಯ: ಜಯಂತ್ ಕಾಯ್ಕಿಣಿ ಉಪಮೇಯ, ಉಪಮಾನ ಮತ್ತು ಸಾಧಾರಣ ಧರ್ಮದ ಮೂಲಕ ಕಟ್ಟಿರುವ ಈ ಅಲಂಕಾರಿಕ ಹಾಡನ್ನು ಸೋನು ನಿಗಂ ಹಾಡಿದ್ದಾರೆ. ಹಾಡಿನ ಟ್ಯೂನ್ ಇಂಪಾಗಿದೆ. ಆದರೆ ಇಷ್ಟೊಂದು ಕನ್ನಡದಲ್ಲಿ ಹಾಡಿದ್ದರೂ ಅದೇಕೋ ಸೋನು ಉಚ್ಚಾರ ಸ್ಪಷ್ಟವಾಗಿಲ್ಲ. ಸಾಹಿತ್ಯ ಗುಳುಂ ಮಾಡಿ ಹಾಡಿದಂತಿದೆ. ಕನ್ನಡದಲ್ಲಿ ಮತ್ತೆ ಮತ್ತೆ ಅವಕಾಶ ಬರುತ್ತಿದ್ದರೂ ಉಚ್ಚಾರ ಸ್ಪಷ್ಟನೆಗೆ ಸೋನು 'ಮನಸಾರೆ' ಪ್ರಯತ್ನಿಸ ಬಹುದಿತ್ತು.
3. ಹುಡುಗರು ಬೇಕು: ಶ್ರೇಯಾ ಘೋಷಾಲ್ ಮತ್ತು ಚೇತನ್ ಸೋಸ್ಕಾ ಹಾಡಿರುವ ಈ ಹಾಡಿಗೆ ಭಟ್ಟರು ಹುಡುಗರನ್ನು ಚೇಡಿಸುವ, ಕಾಡಿಸುವ, ಪೀಡಿಸುವ, ವಿಚಾರಕ್ಕೆ ಹಚ್ಚುವ ಸಾಹಿತ್ಯವಿದೆ. ಸಂಗೀತ ನಿರ್ದೇಶಕರು ಈ ಹಾಡಿಗೆ ಬಳಸಿದ ಟ್ಯೂನ್ ಬಗ್ಗೆ ಹೆಚ್ಚಿನ ಉತ್ಪ್ರೇಕ್ಷೆ ಅಗತ್ಯವಿಲ್ಲ. ಹಾಡು ... ಅಷ್ಟಕಷ್ಟೇನೆ....
4. ಅರೆರೆರೇ ಪಂಚರಂಗಿ: ಚೇತನ್ ಸೋಸ್ಕಾ, ಅನುರಾಧ ಭಟ್, ಬಂಟಿ, ಅಕ್ಷತಾ ರಾಮನಾಥ್, ಕೇಶವಪ್ರಸಾದ್ ಹಾಡಿರುವ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ನೀಡಿದ್ದಾರೆ. ಸಾಹಿತ್ಯ ಚೆನ್ನಾಗಿರುವ ಈ ಸಾಂಗ್ ಈಸ್ ಆವರೇಜ್.
5. ನಿನ್ನಯ ನಲುಮೆಯ: ಮನೋಮೂರ್ತಿ ಸಂಗೀತ ನೀಡಿರುವ ಯಾವುದೇ ಚಿತ್ರವಿರಲಿ, ಅದರ ಎರಡು ಹಾಡುಗಳು ಜನರ ಬಾಯಲ್ಲಿ ಗುನುಗುವುದು ಗ್ಯಾರಂಟಿ. ಕಾಯ್ಕಿಣಿ ಸಾಹಿತ್ಯವಿರುವ ಈ ಹಾಡು ಶ್ರೇಯಾ ಘೋಷಾಲ್ ಕಂಠಸಿರಿಯಿಂದ ಹೊರಹೊಮ್ಮಿದೆ. ಉತ್ತಮ ಸಾಹಿತ್ಯ ನೀಡುವ ಮೂಲಕ ಕಾಯ್ಕಿಣಿ ತಮ್ಮ ಬತ್ತಳಿಕೆಯಿಂದ ಸಾಹಿತ್ಯದ "ಮುಂಗಾರುಮಳೆ" ಸುರಿಸಿದ್ದಾರೆ. ಮೂಲ ಹಿಂದಿ ಗಾಯಕಿಯಾಗಿದ್ದರೂ ಶ್ರೇಯಾ ಕನ್ನಡ ಉಚ್ಚಾರಣೆ ಮೆಚ್ಚುವಂತದ್ದು. ಹಾಡು ಚೆನ್ನಾಗಿದೆ.
6. ಪಂಚರಂಗಿ ಹಾಡುಗಳು: ಹೇಮಂತ್, ಯೋಗರಾಜ್ ಭಟ್ ಹಾಡಿರುವ (ಅಥವಾ ಮಾತಾಡಿರುವ) ಈ ಹಾಡಿಗೆ ಭಟ್ರು ಸಾಹಿತ್ಯ ನೀಡಿದ್ದಾರೆ. ಕಾಲೇಜ್ ಹುಡುಗರು, ಹುಡುಗಿಯರು, ಪರೀಕ್ಷೆ, ಡೋನೇಷನ್ ಸುತ್ತ ಸಾಹಿತ್ಯವಿರುವ ಹಾಡು. ಈ ಹಾಡಿನಲ್ಲಿ ಭಟ್ರು ಮನೋಮೂರ್ತಿಗೆ ಟ್ಯೂನ್ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಳ್ಳುವ ಕೆಲಸಕೊಟ್ಟಿಲ್ಲ.ಒಟ್ಟಿನಲ್ಲಿ ಮೂರು ಹಾಡುಗಳು ಇಂಪಾಗಿದ್ದು. ಈ ಮೇಲೆ ಹೇಳಿದಂತೆ ಮೊದಲ ಹಾಡು ಹಿಟ್ ಆಗುವುದರಲ್ಲಿ ಸಂಶಯ ಬೇಡ.