twitter
    For Quick Alerts
    ALLOW NOTIFICATIONS  
    For Daily Alerts

    ವಿರಸವೆಂಬ ವಿಷಕೆ ಬಲಿಯಾದೆ ಏತಕೇ

    By Staff
    |

    Kannada Veteran Actor Lokesh
    ಸದಭಿರುಚಿಯ ಚಿತ್ರಗಳ ನಿರ್ಮಾಪಕ ಚಂದೂಲಾಲ್ ಜೈನ್ ಇಂದು (ಡಿ.17) ನಿಧನರಾಗಿದ್ದಾರೆ. ಅವರ ನಿರ್ಮಾಣದಲ್ಲಿ ಬಂದಂತಹ ಚಿತ್ರಗಳು ಕನ್ನಡ ಚಲನಚಿತ್ರ ಕ್ಷೇತ್ರವನ್ನು ಶ್ರೀಮಂತಗೊಳಿಸಿವೆ. ಈ ಸಂದರ್ಭದಲ್ಲಿ ಅವರ ನಿರ್ಮಾಣದ 'ಭೂತಯ್ಯನ ಮಗ ಅಯ್ಯು' ಚಿತ್ರದ ವಿರಸವೆಂಬ ವಿಷಕೆ ಬಲಿಯಾದೆ ಏತಕೇ...'' ಎಂಬ ಹಾಡಿನ ಚರಣಗಳನ್ನು ಅವರಿಗೆ ಅರ್ಪಿಸುತ್ತಿದ್ದೇವೆ.

    ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕಾದಂಬರಿ ಆಧಾರಿತ ಚಿತ್ರ ಭೂತಯ್ಯನ ಮಗ ಅಯ್ಯ್ಯು . 1974ರಲ್ಲಿ ತೆರೆಕಂಡ ಈ ಚಿತ್ರ ಸಿದ್ಧಲಿಂಗಯ್ಯ ಅವರ ನಿರ್ದೇಶನದಲ್ಲಿ ಬಂದಂತಹ ಮತ್ತೊಂದು ಅವಿಸ್ಮರಣೀಯ ಚಿತ್ರ. ಗುಳ್ಳನ ಪಾತ್ರದಲ್ಲಿ ವಿಷ್ಣುವರ್ಧನ್, ಅಯ್ಯು ಪಾತ್ರದಲ್ಲಿ ಲೋಕೇಶ್, ಭೂತಯ್ಯನ ಪಾತ್ರದಲ್ಲಿ ಎಂ.ಪಿ.ಶಂಕರ್ ನಟನೆ ಅದ್ಭುತವಾಗಿ ಮೂಡಿಬಂದಿತ್ತು. ಚಿ.ಉದಯಶಂಕರ್ ಅವರ ಸೊಗಸಾದ ಸಾಹಿತ್ಯಕ್ಕೆ ಜಿ.ಕೆ.ವೆಂಕಟೇಶ್ ಸಂಗೀತ ನೀಡುವುದರ ಜೊತೆಗೆ ಹಾಡಿದ್ದರು.

    ವಿರಸವೆಂಬ ವಿಷಕೆ ಬಲಿಯಾದೆ ಏತಕೇ
    ಸುಖಶಾಂತಿ ನಾಶಕೆ...ಮರುಳ..{ಪಲ್ಲವಿ}

    ಗೆಲುವಾ ಛಲವ ಹೊಂದಿ ಮನದಲೀ
    ಸೇಡಿನಿಂದಲೀ ಕಿಡಿಯಾಗಿ ಹಠದಲಿ
    ಸಾಲವೆನ್ನುವಾ ಆ ಶೂಲವೇರುವಾ
    ಗತಿಯಾಯ್ತೇ ಮಾನವಾ........{ಪಲ್ಲವಿ}

    ಬಂಧು ಬಳಗ ನೆಂಟರೆಲ್ಲರೂ
    ಗಂಟು ಹೋಗಲೂ ಇನ್ನೆಲ್ಲಿ ನಿಲುವರು
    ಲಾಭಯಾರಿಗೋ ಸಂತಾಪಯಾರಿಗೋ
    ವಿಧಿಲೀಲೆ ಏನಿದು..........{ಪಲ್ಲವಿ}

    (ದಟ್ಸ್ ಕನ್ನಡ ಚಿತ್ರವಾರ್ತೆ)

    Thursday, December 17, 2009, 14:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X